<p><strong>ಹಾಸನ</strong>: ನಾಡಹಬ್ಬ ಮೈಸೂರು ದಸರಾದಲ್ಲಿ 8 ಬಾರಿ ಚಿನ್ನದ ಅಂಬಾರಿ ಹೊತ್ತ ಕನ್ನಡಿಗರ ಅಚ್ಚುಮೆಚ್ಚಿನ ಆನೆ ‘ಅರ್ಜುನ’ನ ಸ್ಮಾರಕವನ್ನು ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಯಸಳೂರು ಸಮೀಪದ ದಬ್ಬಳಿಕಟ್ಟೆ ಅರಣ್ಯದಲ್ಲಿ ಲೋಕಾರ್ಪಣೆ ಮಾಡಲಾಗಿದೆ. ಆದರೆ, ಸೌಕರ್ಯಗಳ ಕೊರತೆ ಇರುವುದರಿಂದ ಸ್ಮಾರಕಕ್ಕೆ ಬರಲು ಪ್ರವಾಸಿಗರು ತೊಂದರೆ ಅನುಭವಿಸುವಂತಾಗಿದೆ.</p><p>2023ರ ಡಿಸೆಂಬರ್ 4ರಂದು ದಬ್ಬಳಿಕಟ್ಟೆ ಮೀಸಲು ಅರಣ್ಯದಲ್ಲಿ ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ಮದಗಜದೊಂದಿಗೆ ನಡೆದ ಕಾದಾಟದಲ್ಲಿ ಅರ್ಜುನ ಮೃತಪಟ್ಟಿತ್ತು. ಡಿಸೆಂಬರ್ 5ರಂದು ಅದೇ ಸ್ಥಳದಲ್ಲೇ ಅರಣ್ಯ ಇಲಾಖೆಯಿಂದ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಎರಡೂವರೆ ವರ್ಷಗಳ ನಂತರ ಅರ್ಜುನನ ಸಮಾಧಿಯ ಮೇಲೆಯೇ ನಿರ್ಮಿಸಲಾದ ಪ್ರತಿಕೃತಿ ಇದೀಗ ಲೋಕಾರ್ಪಣೆಯಾಗಿದೆ.</p> . <p>10 ಅಡಿ ಎತ್ತರ ಹಾಗೂ 13 ಅಡಿ ಉದ್ದವಿರುವ ಈ ಮೂರ್ತಿ, ಅರ್ಜುನನ ಮೂಲ ಸ್ವರೂಪವನ್ನೇ ಹೋಲುತ್ತದೆ. ಶಿಲ್ಪಿ ಧನಂಜಯ ಅವರು ಮೂರ್ತಿಯನ್ನು ಕೆತ್ತಿದ್ದು, ಶಿಲ್ಪಿಗಳು ಒಂದು ವರ್ಷದ ಹಿಂದೆಯೇ ಸಿದ್ಧಪಡಿಸಿದ್ದರು. ಆದರೆ ಸ್ಮಾರಕ ನಿರ್ಮಾಣ ಸ್ಥಳದಲ್ಲಿ ಮೂಲಸೌಕರ್ಯಗಳ ಕೊರತೆ ಇದ್ದುದರಿಂದ ಉದ್ಘಾಟನೆ ವಿಳಂಬವಾಗಿತ್ತು. ಆದರೆ, ಸ್ಮಾರಕ ಉದ್ಘಾಟನೆ ಮಾಡದೇ ಇರುವುದು ಸರ್ಕಾರಕ್ಕೆ ಮುಜುಗರ ತಂದಿತ್ತು.</p>. <p>ಮೈಸೂರು ಜಿಲ್ಲೆಯ ಬಳ್ಳೆಯಲ್ಲಿ ಈಗಾಗಲೇ ಅರ್ಜುನನ ಸ್ಮಾರಕ ಉದ್ಘಾಟನೆ ಮಾಡಲಾಗಿದೆ. ಹಾಗಾಗಿ ಅದರ ಸಮಾಧಿ ಸ್ಥಳದಲ್ಲಿಯೂ ಸ್ಮಾರಕ ಲೋಕಾರ್ಪಣೆ ಮಾಡಲಾಗಿದೆ.</p><p>ಸೌಕರ್ಯಗಳ ಕೊರತೆ: ಅರ್ಜುನನ ಸಮಾಧಿ ಮಾಡಿರುವ ಸ್ಥಳ ದಟ್ಟ ಅರಣ್ಯದಲ್ಲಿದೆ. ಇಲ್ಲಿಗೆ ಬರಲು ಮುಖ್ಯ ರಸ್ತೆಯಿಂದ ಸುಮಾರು 2 ಕಿ.ಮೀ. ಮಣ್ಣಿನ ರಸ್ತೆಯಲ್ಲಿ ಸಾಗಬೇಕು. ಅಲ್ಲದೇ ಇದು ಕಾಡು ಪ್ರಾಣಿಗಳು ಓಡಾಡುವ ಸ್ಥಳವಾಗಿದ್ದು, ಬರುವ ಪ್ರವಾಸಿಗರಿಗೆ ಸೂಕ್ತ ರಕ್ಷಣೆಯೂ ಇಲ್ಲದಾಗಿದೆ.</p><p>ಇದೀಗ ಉದ್ಘಾಟನೆ ಆಗಿರುವ ಸ್ಮಾರಕ ಕೇವಲ ಒಂದು ಬಯಲಿನಲ್ಲಿದ್ದು, ಮಳೆ, ಗಾಳಿ ಬಂದರೆ ರಕ್ಷಣೆ ಪಡೆಯಲು ಪರದಾಡುವ ಸ್ಥಿತಿ ಇದೆ. ಅಲ್ಲದೇ ಇಲ್ಲಿ ಶೌಚಾಲಯ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯಗಳು ಇಲ್ಲದಾಗಿವೆ.</p><p>ಅರ್ಜುನನ ಸಮಾಧಿಯನ್ನು ಮುಖ್ಯ ರಸ್ತೆಯ ಬಳಿ ಮಾಡಬೇಕು. ಅಲ್ಲಿಯೇ ಸ್ಮಾರಕ ನಿರ್ಮಾಣ ಮಾಡಿದರೆ, ಪ್ರವಾಸಿಗರಿಗೆ ಅನುಕೂಲ ಆಗಲಿದೆ ಎಂದು ಅರ್ಜುನ ಆನೆ ಪರ ಹೋರಾಟಗಾರರು 2023 ರಲ್ಲಿಯೇ ಒತ್ತಾಯ ಮಾಡಿದ್ದರು. ಆದರೆ, ಹೋರಾಟಗಾರರ ಒತ್ತಾಯವನ್ನು ಪರಿಗಣಿಸದೇ, ಮೃತಪಟ್ಟ ಸ್ಥಳದಲ್ಲಿಯೇ ಸಮಾಧಿ ಮಾಡಲಾಗಿತ್ತು. ಇದೀಗ ಅದೇ ಸ್ಥಳದಲ್ಲಿ ಸ್ಮಾರಕ ನಿರ್ಮಾಣ ಮಾಡಿದ್ದರೂ, ಸೌಕರ್ಯಗಳಿಗೆ ಇನ್ನೂ ಸಾಕಷ್ಟು ಅನುದಾನ ಅಗತ್ಯವಿದೆ ಎನ್ನುತ್ತಾರೆ ಸ್ಥಳೀಯರು.</p><p>ಆಗಬೇಕಿರುವುದು ಏನು?: ಅರ್ಜುನನ ಸ್ಮಾರಕದ ಸುತ್ತಲೂ ಗೋಡೆಗಳು ನಿರ್ಮಾಣವಾಗಬೇಕು. ಆ ಗೋಡೆಗಳ ಮೇಲೆ ಅರ್ಜುನನ ಗಜ ಗಾಂಭೀರ್ಯದ ನಡಿಗೆಯ ಚಿತ್ರಗಳು, ಅಂಬಾರಿ ಹೊತ್ತು ಸಾಗಿದ ದೃಶ್ಯಗಳು, ಹುಲಿ, ಆನೆ ಸೆರೆ ಕಾರ್ಯಾಚರಣೆಯಲ್ಲಿ ತೊಡಗಿದ್ದ ಸಂದರ್ಭಗಳನ್ನು ಅನಾವರಣ ಮಾಡಬೇಕಾಗಿದೆ.</p><p>ಜೊತೆಗೆ ಈ ಸ್ಥಳದ ಸುತ್ತಲೂ ಸುಂದರ ಉದ್ಯಾನ ನಿರ್ಮಾಣ ಮಾಡಬೇಕು. ಕುಡಿಯುವ ನೀರು, ಶೌಚಾಲಯ, ನೆರಳಿನ ವ್ಯವಸ್ಥೆ ಆಗಬೇಕು. ಅಲ್ಲದೇ ಈ ಸ್ಥಳಕ್ಕೆ ಬರುವವರಿಗೆ ವನ್ಯಜೀವಿಗಳಿಂದ ತೊಂದರೆ ಆಗದಂತೆ ನೋಡಿಕೊಳ್ಳುವ ಅಗತ್ಯವೂ ಇದೆ ಎನ್ನುತ್ತಾರೆ ಇಲ್ಲಿನ ಜನರು.</p>. <h2><strong>ಸ್ಮಾರಕಕ್ಕೆ ಅಗತ್ಯ ಸೌಕರ್ಯದ ಭರವಸೆ</strong></h2><p>ಪುಂಡಾನೆ ಸೆರೆ ಕಾರ್ಯಾಚರಣೆ ವೇಳೆ ಅರ್ಜುನ ಇದೇ ಯಸಳೂರು ಬಳಿ ತನ್ನ ಪ್ರಾಣವನ್ನು ಬಲಿಕೊಟ್ಟು, ವೈದ್ಯರು ಮತ್ತು ಅರಣ್ಯ ಸಿಬ್ಬಂದಿಯ ಜೀವ ಉಳಿಸಿ ಹುತಾತ್ಮನಾಗಿದ್ದಾನೆ. ಅರ್ಜುನನ ಸಾಧನೆ, ಕೊಡುಗೆ ಅನುಪಮವಾದ್ದು, ಹೀಗಾಗಿ ಮುಂದಿನ ಪೀಳಿಗೆಗೆ ಅರ್ಜುನನ ಯಶೋಗಾಥೆಯನ್ನು ಪರಿಚಯಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಭರವಸೆ ನೀಡಿದ್ದಾರೆ.</p><p>ಅರ್ಜುನ ಆನೆ ಚಿನ್ನದ ಅಂಬಾರಿ ಹೊತ್ತು ಸಾಗುತ್ತಿದ್ದ ಚಿತ್ರಗಳು, ಹುಲಿ, ಆನೆ ಸೆರೆ ಕಾರ್ಯಾಚರಣೆಯ ಅಪರೂಪದ ಚಿತ್ರಗಳನ್ನು ಫಲಕಗಳಲ್ಲಿ ಹಾಕುವ ಮೂಲಕ ಅರ್ಜುನನ ಸಾಹಸ ಅಭಿಮಾನಿಗಳಿಗೆ ತಿಳಿಯುವಂತೆ ಮಾಡಲಾಗುವುದು ಎಂದು ಹೇಳಿದ್ದಾರೆ.</p><p>8 ಬಾರಿ ಚಿನ್ನದ ಅಂಬಾರಿ ಹೊತ್ತ ಹೆಗ್ಗಳಿಕೆ ಅರ್ಜುನನದ್ದು. ಕಾಡಾನೆ ಸೆರೆ ಕಾರ್ಯಾಚರಣೆ, ದಸರಾ ಸೇರಿ ನಾಡಿನ ಸೇವೆಯಲ್ಲಿ ತೊಡಗಿದ್ದ ಅರ್ಜುನನ ಸ್ಮಾರಕ ಭಾವನಾತ್ಮಕ ತಾಣವಾಗಿ ರೂಪುಗೊಂಡಿದೆ. ಸ್ಮಾರಕ ವೀಕ್ಷಿಸಲು ಸಾರ್ವಜನಿಕರಿಗೆ ವ್ಯವಸ್ಥೆ ಮಾಡಲಾಗುವುದು’ ಎಂದು ತಿಳಿಸಿದ್ದಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ</strong>: ನಾಡಹಬ್ಬ ಮೈಸೂರು ದಸರಾದಲ್ಲಿ 8 ಬಾರಿ ಚಿನ್ನದ ಅಂಬಾರಿ ಹೊತ್ತ ಕನ್ನಡಿಗರ ಅಚ್ಚುಮೆಚ್ಚಿನ ಆನೆ ‘ಅರ್ಜುನ’ನ ಸ್ಮಾರಕವನ್ನು ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಯಸಳೂರು ಸಮೀಪದ ದಬ್ಬಳಿಕಟ್ಟೆ ಅರಣ್ಯದಲ್ಲಿ ಲೋಕಾರ್ಪಣೆ ಮಾಡಲಾಗಿದೆ. ಆದರೆ, ಸೌಕರ್ಯಗಳ ಕೊರತೆ ಇರುವುದರಿಂದ ಸ್ಮಾರಕಕ್ಕೆ ಬರಲು ಪ್ರವಾಸಿಗರು ತೊಂದರೆ ಅನುಭವಿಸುವಂತಾಗಿದೆ.</p><p>2023ರ ಡಿಸೆಂಬರ್ 4ರಂದು ದಬ್ಬಳಿಕಟ್ಟೆ ಮೀಸಲು ಅರಣ್ಯದಲ್ಲಿ ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ಮದಗಜದೊಂದಿಗೆ ನಡೆದ ಕಾದಾಟದಲ್ಲಿ ಅರ್ಜುನ ಮೃತಪಟ್ಟಿತ್ತು. ಡಿಸೆಂಬರ್ 5ರಂದು ಅದೇ ಸ್ಥಳದಲ್ಲೇ ಅರಣ್ಯ ಇಲಾಖೆಯಿಂದ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಎರಡೂವರೆ ವರ್ಷಗಳ ನಂತರ ಅರ್ಜುನನ ಸಮಾಧಿಯ ಮೇಲೆಯೇ ನಿರ್ಮಿಸಲಾದ ಪ್ರತಿಕೃತಿ ಇದೀಗ ಲೋಕಾರ್ಪಣೆಯಾಗಿದೆ.</p> . <p>10 ಅಡಿ ಎತ್ತರ ಹಾಗೂ 13 ಅಡಿ ಉದ್ದವಿರುವ ಈ ಮೂರ್ತಿ, ಅರ್ಜುನನ ಮೂಲ ಸ್ವರೂಪವನ್ನೇ ಹೋಲುತ್ತದೆ. ಶಿಲ್ಪಿ ಧನಂಜಯ ಅವರು ಮೂರ್ತಿಯನ್ನು ಕೆತ್ತಿದ್ದು, ಶಿಲ್ಪಿಗಳು ಒಂದು ವರ್ಷದ ಹಿಂದೆಯೇ ಸಿದ್ಧಪಡಿಸಿದ್ದರು. ಆದರೆ ಸ್ಮಾರಕ ನಿರ್ಮಾಣ ಸ್ಥಳದಲ್ಲಿ ಮೂಲಸೌಕರ್ಯಗಳ ಕೊರತೆ ಇದ್ದುದರಿಂದ ಉದ್ಘಾಟನೆ ವಿಳಂಬವಾಗಿತ್ತು. ಆದರೆ, ಸ್ಮಾರಕ ಉದ್ಘಾಟನೆ ಮಾಡದೇ ಇರುವುದು ಸರ್ಕಾರಕ್ಕೆ ಮುಜುಗರ ತಂದಿತ್ತು.</p>. <p>ಮೈಸೂರು ಜಿಲ್ಲೆಯ ಬಳ್ಳೆಯಲ್ಲಿ ಈಗಾಗಲೇ ಅರ್ಜುನನ ಸ್ಮಾರಕ ಉದ್ಘಾಟನೆ ಮಾಡಲಾಗಿದೆ. ಹಾಗಾಗಿ ಅದರ ಸಮಾಧಿ ಸ್ಥಳದಲ್ಲಿಯೂ ಸ್ಮಾರಕ ಲೋಕಾರ್ಪಣೆ ಮಾಡಲಾಗಿದೆ.</p><p>ಸೌಕರ್ಯಗಳ ಕೊರತೆ: ಅರ್ಜುನನ ಸಮಾಧಿ ಮಾಡಿರುವ ಸ್ಥಳ ದಟ್ಟ ಅರಣ್ಯದಲ್ಲಿದೆ. ಇಲ್ಲಿಗೆ ಬರಲು ಮುಖ್ಯ ರಸ್ತೆಯಿಂದ ಸುಮಾರು 2 ಕಿ.ಮೀ. ಮಣ್ಣಿನ ರಸ್ತೆಯಲ್ಲಿ ಸಾಗಬೇಕು. ಅಲ್ಲದೇ ಇದು ಕಾಡು ಪ್ರಾಣಿಗಳು ಓಡಾಡುವ ಸ್ಥಳವಾಗಿದ್ದು, ಬರುವ ಪ್ರವಾಸಿಗರಿಗೆ ಸೂಕ್ತ ರಕ್ಷಣೆಯೂ ಇಲ್ಲದಾಗಿದೆ.</p><p>ಇದೀಗ ಉದ್ಘಾಟನೆ ಆಗಿರುವ ಸ್ಮಾರಕ ಕೇವಲ ಒಂದು ಬಯಲಿನಲ್ಲಿದ್ದು, ಮಳೆ, ಗಾಳಿ ಬಂದರೆ ರಕ್ಷಣೆ ಪಡೆಯಲು ಪರದಾಡುವ ಸ್ಥಿತಿ ಇದೆ. ಅಲ್ಲದೇ ಇಲ್ಲಿ ಶೌಚಾಲಯ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯಗಳು ಇಲ್ಲದಾಗಿವೆ.</p><p>ಅರ್ಜುನನ ಸಮಾಧಿಯನ್ನು ಮುಖ್ಯ ರಸ್ತೆಯ ಬಳಿ ಮಾಡಬೇಕು. ಅಲ್ಲಿಯೇ ಸ್ಮಾರಕ ನಿರ್ಮಾಣ ಮಾಡಿದರೆ, ಪ್ರವಾಸಿಗರಿಗೆ ಅನುಕೂಲ ಆಗಲಿದೆ ಎಂದು ಅರ್ಜುನ ಆನೆ ಪರ ಹೋರಾಟಗಾರರು 2023 ರಲ್ಲಿಯೇ ಒತ್ತಾಯ ಮಾಡಿದ್ದರು. ಆದರೆ, ಹೋರಾಟಗಾರರ ಒತ್ತಾಯವನ್ನು ಪರಿಗಣಿಸದೇ, ಮೃತಪಟ್ಟ ಸ್ಥಳದಲ್ಲಿಯೇ ಸಮಾಧಿ ಮಾಡಲಾಗಿತ್ತು. ಇದೀಗ ಅದೇ ಸ್ಥಳದಲ್ಲಿ ಸ್ಮಾರಕ ನಿರ್ಮಾಣ ಮಾಡಿದ್ದರೂ, ಸೌಕರ್ಯಗಳಿಗೆ ಇನ್ನೂ ಸಾಕಷ್ಟು ಅನುದಾನ ಅಗತ್ಯವಿದೆ ಎನ್ನುತ್ತಾರೆ ಸ್ಥಳೀಯರು.</p><p>ಆಗಬೇಕಿರುವುದು ಏನು?: ಅರ್ಜುನನ ಸ್ಮಾರಕದ ಸುತ್ತಲೂ ಗೋಡೆಗಳು ನಿರ್ಮಾಣವಾಗಬೇಕು. ಆ ಗೋಡೆಗಳ ಮೇಲೆ ಅರ್ಜುನನ ಗಜ ಗಾಂಭೀರ್ಯದ ನಡಿಗೆಯ ಚಿತ್ರಗಳು, ಅಂಬಾರಿ ಹೊತ್ತು ಸಾಗಿದ ದೃಶ್ಯಗಳು, ಹುಲಿ, ಆನೆ ಸೆರೆ ಕಾರ್ಯಾಚರಣೆಯಲ್ಲಿ ತೊಡಗಿದ್ದ ಸಂದರ್ಭಗಳನ್ನು ಅನಾವರಣ ಮಾಡಬೇಕಾಗಿದೆ.</p><p>ಜೊತೆಗೆ ಈ ಸ್ಥಳದ ಸುತ್ತಲೂ ಸುಂದರ ಉದ್ಯಾನ ನಿರ್ಮಾಣ ಮಾಡಬೇಕು. ಕುಡಿಯುವ ನೀರು, ಶೌಚಾಲಯ, ನೆರಳಿನ ವ್ಯವಸ್ಥೆ ಆಗಬೇಕು. ಅಲ್ಲದೇ ಈ ಸ್ಥಳಕ್ಕೆ ಬರುವವರಿಗೆ ವನ್ಯಜೀವಿಗಳಿಂದ ತೊಂದರೆ ಆಗದಂತೆ ನೋಡಿಕೊಳ್ಳುವ ಅಗತ್ಯವೂ ಇದೆ ಎನ್ನುತ್ತಾರೆ ಇಲ್ಲಿನ ಜನರು.</p>. <h2><strong>ಸ್ಮಾರಕಕ್ಕೆ ಅಗತ್ಯ ಸೌಕರ್ಯದ ಭರವಸೆ</strong></h2><p>ಪುಂಡಾನೆ ಸೆರೆ ಕಾರ್ಯಾಚರಣೆ ವೇಳೆ ಅರ್ಜುನ ಇದೇ ಯಸಳೂರು ಬಳಿ ತನ್ನ ಪ್ರಾಣವನ್ನು ಬಲಿಕೊಟ್ಟು, ವೈದ್ಯರು ಮತ್ತು ಅರಣ್ಯ ಸಿಬ್ಬಂದಿಯ ಜೀವ ಉಳಿಸಿ ಹುತಾತ್ಮನಾಗಿದ್ದಾನೆ. ಅರ್ಜುನನ ಸಾಧನೆ, ಕೊಡುಗೆ ಅನುಪಮವಾದ್ದು, ಹೀಗಾಗಿ ಮುಂದಿನ ಪೀಳಿಗೆಗೆ ಅರ್ಜುನನ ಯಶೋಗಾಥೆಯನ್ನು ಪರಿಚಯಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಭರವಸೆ ನೀಡಿದ್ದಾರೆ.</p><p>ಅರ್ಜುನ ಆನೆ ಚಿನ್ನದ ಅಂಬಾರಿ ಹೊತ್ತು ಸಾಗುತ್ತಿದ್ದ ಚಿತ್ರಗಳು, ಹುಲಿ, ಆನೆ ಸೆರೆ ಕಾರ್ಯಾಚರಣೆಯ ಅಪರೂಪದ ಚಿತ್ರಗಳನ್ನು ಫಲಕಗಳಲ್ಲಿ ಹಾಕುವ ಮೂಲಕ ಅರ್ಜುನನ ಸಾಹಸ ಅಭಿಮಾನಿಗಳಿಗೆ ತಿಳಿಯುವಂತೆ ಮಾಡಲಾಗುವುದು ಎಂದು ಹೇಳಿದ್ದಾರೆ.</p><p>8 ಬಾರಿ ಚಿನ್ನದ ಅಂಬಾರಿ ಹೊತ್ತ ಹೆಗ್ಗಳಿಕೆ ಅರ್ಜುನನದ್ದು. ಕಾಡಾನೆ ಸೆರೆ ಕಾರ್ಯಾಚರಣೆ, ದಸರಾ ಸೇರಿ ನಾಡಿನ ಸೇವೆಯಲ್ಲಿ ತೊಡಗಿದ್ದ ಅರ್ಜುನನ ಸ್ಮಾರಕ ಭಾವನಾತ್ಮಕ ತಾಣವಾಗಿ ರೂಪುಗೊಂಡಿದೆ. ಸ್ಮಾರಕ ವೀಕ್ಷಿಸಲು ಸಾರ್ವಜನಿಕರಿಗೆ ವ್ಯವಸ್ಥೆ ಮಾಡಲಾಗುವುದು’ ಎಂದು ತಿಳಿಸಿದ್ದಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>