<p><strong>ಚಿಕ್ಕಮಗಳೂರು:</strong> ಆನೆ ಮತ್ತು ಮಾನವ ನಡುವಿನ ಸಂಘರ್ಷ ಕಡಿಮೆ ಮಾಡಲು ಕಾಡಾನೆ ಸಾಫ್ಟ್ ರಿಲೀಸ್ ಕೇಂದ್ರ(ಆನೆ ದೊಡ್ಡಿ) ಸ್ಥಾಪಿಸಲು ರಾಜ್ಯ ಸರ್ಕಾರ ಜಾಗ ಹುಡುಕುತ್ತಿದೆ. ಆದರೆ, ಈ ಯೋಜನೆ ಕಾರ್ಯಸಾಧ್ಯವೆ ಎಂಬ ಚರ್ಚೆ ಈಗ ಆರಂಭವಾಗಿದೆ.</p><p>ಜನ ವಸತಿ ಪ್ರದೇಶದಲ್ಲಿ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಹಿಡಿದು ಅರಣ್ಯಕ್ಕೆ ಈಗಾಗಲೇ ಬಿಡಲಾಗುತ್ತಿದೆ. ಆದರೆ, ಅವು ಆ ಜಾಗಕ್ಕೆ ಹೊಂದಿಕೊಳ್ಳದೆ ಮರಳಿ ಅದೇ ಜಾಗಕ್ಕೆ ತಲುಪುತ್ತಿರುವ ಅನೇಕ ಉದಾಹರಣೆಗಳಿವೆ. ಆದ್ದರಿಂದ ಹೊಸ ಜಾಗಕ್ಕೆ ಹೊಂದಿಕೊಂಡ ನಂತರ ಬಿಡುಗಡೆ ಮಾಡುವ ವಿಧಾನವನ್ನು ‘ಸಾಫ್ಟ್ ರಿಲೀಸ್’ ಎಂದು ಅರಣ್ಯ ಇಲಾಖೆ ಹೇಳುತ್ತಿದೆ.</p><p>ಮಧ್ಯ ಪ್ರದೇಶದಲ್ಲಿ ಕಾಡುಕೋಣಗಳನ್ನು ಈ ರೀತಿ ಸಾಫ್ಟ್ ರಿಲೀಸ್ ಕೇಂದ್ರಗಳಲ್ಲಿ ಕೆಲ ದಿನಗಳ ಕಾಲ ಇರಿಸಿ ಆ ಪರಿಸರಕ್ಕೆ ಹೊಂದಿಕೊಂಡ ನಂತರ ಬಿಡುಗಡೆ ಪದ್ಧತಿ ಅಳವಡಿಸಿಕೊಳ್ಳಲಾಗಿದೆ. ಇದೇ ಪದ್ಧತಿಯನ್ನು ಆನೆಗಳಿಗೆ ಅಳವಡಿಕೆ ಮಾಡಲು ಯೋಜನೆ ರೂಪಿಸಿದೆ. ಆನೆಗಳನ್ನು ಪರಿಸರಕ್ಕೆ ಹೊಂದಿಸಿ ನಂತರ ಕಾಡಿಗೆ ಬಿಡುವ ಪದ್ಧತಿ ಹೊಸ ಪ್ರಯೋಗ ಎಂದು ಅಧಿಕಾರಿಗಳು ಹೇಳುತ್ತಾರೆ.</p><p>ಈ ಯೋಜನೆಗೆ 2025–26ನೇ ಸಾಲಿನ ಬಜೆಟ್ನಲ್ಲಿ ₹20 ಕೋಟಿಯನ್ನು ಸರ್ಕಾರ ಘೋಷಣೆ ಮಾಡಿದೆ. ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಹಲವೆಡೆ ಜಾಗವನ್ನೂ ಅರಣ್ಯ ಇಲಾಖೆಯ ಉನ್ನತ ಮಟ್ಟದ ತಜ್ಞರ ತಂಡ 2025ರ ಏಪ್ರಿಲ್ನಲ್ಲಿ ಪರಿಶೀಲನೆ ನಡೆಸಿತ್ತು. ನರಸಿಂಹರಾಜಪುರ ತಾಲ್ಲೂಕಿನ ಕೂಸ್ಗಲ್ ಅರಣ್ಯ, ಉಂಬ್ಳೆ ಬೈಲು, ಲಕ್ಕವಳ್ಳಿ, ತಣಿಗೆಬೈಲು ಅರಣ್ಯದಲ್ಲಿ ಕೂಡ ಪರಿಶೀಲನೆ ಮಾಡಿತ್ತು.</p><p>ಸೆರೆ ಹಿಡಿದು ತರುವ ಆನೆಗಳನ್ನು ಬಿಡಲು ಆ ಜಾಗದಲ್ಲಿ ಆನೆಗಳಿಗೆ ಮೇವು ಮತ್ತು ನೀರು ಹೇರಳವಾಗಿ ಸಿಗುವಂತಿರಬೇಕು. ಜನ ಸಂಚಾರದಿಂದ ಮುಕ್ತವಾಗಿರಬೇಕು, ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ಜಾಗವೇ ಆಗಬೇಕು. ಆನೆಗಳನ್ನು ಹೊತ್ತು ಬರುವ ಲಾರಿಗಳು ಸುಗಮವಾಗಿ ಗೇಟ್ ತನಕ ಸಾಗುವ ರೀತಿಯ ರಸ್ತೆ ಇರಬೇಕು.</p><p>ಈ ಎಲ್ಲಾ ಮಾನದಂಡಗಳನ್ನು ಒಳಗೊಂಡಿರುವ ಜಾಗ ಅಂತಿಮವಾದ ಬಳಿಕ 20 ಚದರ ಕಿಲೋ ಮೀಟರ್ ವ್ಯಾಪ್ತಿಗೆ ರೈಲ್ವೆ ಬ್ಯಾರಿಕೇಡ್ ಅಳವಡಿಸಲಾಗುತ್ತದೆ. ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಸೆರೆ ಹಿಡಿದು ತಂದು ವಾತಾವರಣಕ್ಕೆ ಒಗ್ಗಿಸಿ ನಂತರ ವನ್ಯಜೀವಿ ವಲಯಕ್ಕೆ ಬಿಡಲಾಗುತ್ತದೆ. ಆಗ ಅವು ಅಲ್ಲಿಯೇ ಉಳಿಯುವುದರಿಂದ ಆನೆ– ಮಾನವ ಸಂಘರ್ಷ ಕಡಿಮೆಯಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ.</p>.<h2>ಏನಿದು ಆನೆ ಸಾಫ್ಟ್ ರಿಲೀಸ್ ಕೇಂದ್ರ...</h2><p>ಆನೆ ಸಾಫ್ಟ್ ರಿಲೀಸ್ ಕೇಂದ್ರದಲ್ಲಿ ಮೂರು ಹಂತಗಳಲ್ಲಿ ಆನೆಗಳನ್ನು ನಿಗಾ ವಹಿಸಿ ನಂತರ ಕಾಡಿಗೆ ಬಿಡಲಾಗುತ್ತದೆ. ಮೊದಲ 1 ಚದರ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಪಶು ವೈದ್ಯಕೀಯ ಕ್ಲಿನಿಕ್ನಲ್ಲಿ ಒಂದು ವಾರ ಇರಿಸಲಾಗುತ್ತದೆ. ಆ ಪರಿಸರಕ್ಕೆ ಹೊಂದಿಕೊಂಡಿದೆ ಎನಿಸಿದಾಗ 5ರಿಂದ 8 ಚದರ ಕಿಲೋ ಮೀಟರ್ ವ್ಯಾಪ್ತಿಯ ಎರಡನೇ ಭಾಗಕ್ಕೆ ಆನೆಗಳನ್ನು ಬಿಡಲಾಗುತ್ತದೆ.</p><p>ಅಲ್ಲಿ ಹೊಂದಿಕೊಂಡ ಬಳಿಕ 20 ಚದರ ಕಿಲೋ ಮೀಟರ್ ವ್ಯಾಪ್ತಿಗೆ ಬಿಡಲಾಗುತ್ತದೆ. ಅವುಗಳನ್ನು ಅಲ್ಲೇ ಶಾಶ್ವತವಾಗಿ ಬಂಧಿಯಾಗಿ ಇರಿಸುವುದಿಲ್ಲ. ಅಲ್ಲಿನ ಪರಿಸರಕ್ಕೆ ಸಂಪೂರ್ಣ ಹೊಂದಿಕೊಂಡ ಬಳಿಕ ಕಾಡಿಗೆ ಬಿಡಲಾಗುತ್ತದೆ. ಆದ್ದರಿಂದ ಕಾಡಿಗೆ ಹೊಂದಿಕೊಂಡ ಜಾಗದಲ್ಲೇ ಈ ಸಾಫ್ಟ್ ರಿಲೀಸ್ ಕೇಂದ್ರ ನಿರ್ಮಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.</p><p>ಈಗ ₹53 ಕೋಟಿ ಬಿಡುಗಡೆಯಾಗಿದ್ದು, ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗುತ್ತಿದೆ ಎಂದು ಅರಣ್ಯ ಸಚಿವರು ಹೇಳುತ್ತಿದ್ದಾರೆ. ಆದರೆ, ಜಾಗ ಇನ್ನೂ ಅಂತಿಮವಾಗಿಲ್ಲ. ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಾಫ್ಟ್ ರಿಲೀಸ್ ಕೇಂದ್ರ ಮಾಡಿದರೆ ಹುಲಿಗಳ ಆವಾಸಕ್ಕೆ ತೊಂದರೆಯಾಗಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ. ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಾಫ್ಟ್ ರಿಲೇಸ್ ಕೇಂದ್ರ ತೆರೆಯಲು ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರಾಧಿಕಾರ(ಎನ್ಟಿಸಿಎ) ಅನುಮತಿ ನೀಡುತ್ತಿಲ್ಲ ಎನ್ನಲಾಗಿದೆ. ಆದ್ದರಿಂದ ರಾಜ್ಯದಲ್ಲಿ ಇದಕ್ಕೆ ಸೂಕ್ತವಾದ ಬೇರೆ ಯಾವ ಜಾಗ ಇದೆ ಎಂಬ ಹುಡುಕಾಟ ನಡೆಯುತ್ತಿದೆ ಎಂದು ಅರಣ್ಯ ಇಲಾಖೆ ಮೂಲಗಳು ಹೇಳುತ್ತವೆ.</p><p>ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ 500.16 ಚದರ ಕಿಲೋ ಮೀಟರ್ ಹುಲಿ ಆವಾಸಸ್ಥಾನವಾದರೆ, 571.84 ಚದರ ಕಿಲೋ ಮೀಟರ್ ಬಫರ್ ಪ್ರದೇಶವನ್ನು ಹೊಂದಿದೆ. ಇಲ್ಲಿ 35ಕ್ಕೂ ಹೆಚ್ಚು ಹುಲಿಗಳು, 116 ಚಿರತೆಗಳು, 445 ಆನೆಗಳಿವೆ ಎಂದು ಅರಣ್ಯ ಇಲಾಖೆ ಅಂದಾಜಿಸಿದೆ.</p><p>ಹುಲಿ ಬೆಕ್ಕು, ಕೆನ್ನಾಯಿ, ಕೆಂದಳಿಲು, ನರಿ, ಕರಡಿ, ಕಾಡು ಕುರಿ, ಕಾಡು ಹಂದಿ, ಕಡವೆ, ಮುಸಿಯಾ, ಕಾಡು ಪಾಪ, ಹಾರುವ ಓತಿ, ಮುಳ್ಳು ಹಂದಿ, ನೀರು ನಾಯಿ, ಪುನುಗಿನ ಬೆಕ್ಕು, ಮೊಸಳೆ ಸೇರಿ ಅಪಾರ ಪ್ರಮಾಣದ ವನ್ಯಜೀವಿ ಸಂಪತ್ತಿದೆ. ಕಾಡುಕೋಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಅವುಗಳು ಜನವಸತಿಯತ್ತ ಬರುತ್ತಿವೆ. ಆನೆ ಸಾಫ್ಟ್ ರಿಲೀಸ್ ಕೇಂದ್ರಕ್ಕೆ ಜಾಗ ನೀಡಿದರೆ ಹುಲಿಗಳು, ಈಗಾಗಲೇ ಈ ಕಾಡಿನಲ್ಲಿ ಆನೆಗಳು ಮತ್ತು ಬೇರೆ ಪ್ರಾಣಿಗಳಿಗೆ ತೊಂದರೆಯಾಗಬಹುದು ಎಂದು ಅರಣ್ಯ ಇಲಾಖೆ ಆಲೋಚನೆ ನಡೆಸುತ್ತಿದೆ. ರಾಜ್ಯದ ವಿವಿಧೆಡೆ ಎರಡು–ಮೂರು ಜಾಗದಲ್ಲಿ ಪರಿಶೀಲನೆ ನಡೆಯುತ್ತಿದೆ ಎಂದೂ ಮೂಲಗಳ ಹೇಳುತ್ತವೆ.</p>.<h2>ಕಾರ್ಯಸಾಧುವಲ್ಲ: ಪರಿಸರವಾದಿಗಳ ಆಕ್ಷೇಪ...</h2><p>ಆನೆಗಳನ್ನು ಹಿಡಿದು ಸ್ಥಳಾಂತರ ಮಾಡುವುದು ದೊಡ್ಡ ಸವಾಲಿನ ಕೆಲಸ. ಬೀದಿ ನಾಯಿಗಳನ್ನು ಹಿಡಿದು ಸ್ಥಳಾಂತರ ಮಾಡುವುದೇ ಕಷ್ಟ. ರಾಜ್ಯ ಬೇರೆ ಬೇರೆ ಕಡೆ ಇರುವ ಆನೆಗಳನ್ನು ಒಮ್ಮೆಲೇ ಹಿಡಿದು ಸಾಫ್ಟ್ ರಿಲೀಸ್ ಕೇಂದ್ರದಲ್ಲಿ ಪಳಗಿಸಿ ಮತ್ತೆ ಕಾಡಿಗೆ ಬಿಡುವ ಆಲೋಚನೆಯೇ ಅವೈಜ್ಞಾನಿಕ ಎಂಬುದು ಪರಿಸರವಾದಿಗಳ ಆಕ್ಷೇಪ.</p><p>ಸಾಫ್ಟ್ ರಿಲೀಸ್ ಕೇಂದ್ರದಲ್ಲಿ ಪಳಗಿದ ನಂತರ ಕಾಡಿಗೆ ಬಿಡಲಾಗುತ್ತದೆ. ಅರಣ್ಯ ಇಲಾಖೆ ಅಧಿಕಾರಿಗಳು ತೋರಿಸಿದ ಜಾಗದಲ್ಲೇ ಆನೆಗಳು ಉಳಿಯುತ್ತವೆಯೇ? ಯಾವುದೇ ವೈಜ್ಞಾನಿಕ ಅಧ್ಯಯನವಿಲ್ಲ. ಯಾವುದೇ ದೇಶದಲ್ಲಿ ಈ ರೀತಿಯ ಉದಾಹರಣೆಗಳಿಲ್ಲ. ಇಂತಹ ಆಲೋಚನೆಗಳಿಂದ ಸರ್ಕಾರದ ಹಣ ಖರ್ಚಾಗಲಿದೆಯೇ ಹೊರತು ಬೇರೇನು ಉಪಯೋಗ ಆಗುವುದಿಲ್ಲ. ಆನೆಗಳು ಮಲೆನಾಡಿನ ಭಾಗವಾಗಿವೆ. ಅದನ್ನು ಅರ್ಥ ಮಾಡಿಕೊಳ್ಳುವ ಕೆಲಸ ಆಗಬೇಕು. ಮಲೆನಾಡಿನ ಜನರಿಗೂ ಅರ್ಥ ಮಾಡಿಸುವ ಕೆಲಸ ಆಗಬೇಕು ಎಂದು ಭದ್ರಾ ವನ್ಯಜೀವಿ ಸಂರಕ್ಷಣಾ ಸಂಸ್ಥೆಯ ಮುಖ್ಯಸ್ಥ ಡಿ.ವಿ.ಗಿರೀಶ್ ಹೇಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು:</strong> ಆನೆ ಮತ್ತು ಮಾನವ ನಡುವಿನ ಸಂಘರ್ಷ ಕಡಿಮೆ ಮಾಡಲು ಕಾಡಾನೆ ಸಾಫ್ಟ್ ರಿಲೀಸ್ ಕೇಂದ್ರ(ಆನೆ ದೊಡ್ಡಿ) ಸ್ಥಾಪಿಸಲು ರಾಜ್ಯ ಸರ್ಕಾರ ಜಾಗ ಹುಡುಕುತ್ತಿದೆ. ಆದರೆ, ಈ ಯೋಜನೆ ಕಾರ್ಯಸಾಧ್ಯವೆ ಎಂಬ ಚರ್ಚೆ ಈಗ ಆರಂಭವಾಗಿದೆ.</p><p>ಜನ ವಸತಿ ಪ್ರದೇಶದಲ್ಲಿ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಹಿಡಿದು ಅರಣ್ಯಕ್ಕೆ ಈಗಾಗಲೇ ಬಿಡಲಾಗುತ್ತಿದೆ. ಆದರೆ, ಅವು ಆ ಜಾಗಕ್ಕೆ ಹೊಂದಿಕೊಳ್ಳದೆ ಮರಳಿ ಅದೇ ಜಾಗಕ್ಕೆ ತಲುಪುತ್ತಿರುವ ಅನೇಕ ಉದಾಹರಣೆಗಳಿವೆ. ಆದ್ದರಿಂದ ಹೊಸ ಜಾಗಕ್ಕೆ ಹೊಂದಿಕೊಂಡ ನಂತರ ಬಿಡುಗಡೆ ಮಾಡುವ ವಿಧಾನವನ್ನು ‘ಸಾಫ್ಟ್ ರಿಲೀಸ್’ ಎಂದು ಅರಣ್ಯ ಇಲಾಖೆ ಹೇಳುತ್ತಿದೆ.</p><p>ಮಧ್ಯ ಪ್ರದೇಶದಲ್ಲಿ ಕಾಡುಕೋಣಗಳನ್ನು ಈ ರೀತಿ ಸಾಫ್ಟ್ ರಿಲೀಸ್ ಕೇಂದ್ರಗಳಲ್ಲಿ ಕೆಲ ದಿನಗಳ ಕಾಲ ಇರಿಸಿ ಆ ಪರಿಸರಕ್ಕೆ ಹೊಂದಿಕೊಂಡ ನಂತರ ಬಿಡುಗಡೆ ಪದ್ಧತಿ ಅಳವಡಿಸಿಕೊಳ್ಳಲಾಗಿದೆ. ಇದೇ ಪದ್ಧತಿಯನ್ನು ಆನೆಗಳಿಗೆ ಅಳವಡಿಕೆ ಮಾಡಲು ಯೋಜನೆ ರೂಪಿಸಿದೆ. ಆನೆಗಳನ್ನು ಪರಿಸರಕ್ಕೆ ಹೊಂದಿಸಿ ನಂತರ ಕಾಡಿಗೆ ಬಿಡುವ ಪದ್ಧತಿ ಹೊಸ ಪ್ರಯೋಗ ಎಂದು ಅಧಿಕಾರಿಗಳು ಹೇಳುತ್ತಾರೆ.</p><p>ಈ ಯೋಜನೆಗೆ 2025–26ನೇ ಸಾಲಿನ ಬಜೆಟ್ನಲ್ಲಿ ₹20 ಕೋಟಿಯನ್ನು ಸರ್ಕಾರ ಘೋಷಣೆ ಮಾಡಿದೆ. ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಹಲವೆಡೆ ಜಾಗವನ್ನೂ ಅರಣ್ಯ ಇಲಾಖೆಯ ಉನ್ನತ ಮಟ್ಟದ ತಜ್ಞರ ತಂಡ 2025ರ ಏಪ್ರಿಲ್ನಲ್ಲಿ ಪರಿಶೀಲನೆ ನಡೆಸಿತ್ತು. ನರಸಿಂಹರಾಜಪುರ ತಾಲ್ಲೂಕಿನ ಕೂಸ್ಗಲ್ ಅರಣ್ಯ, ಉಂಬ್ಳೆ ಬೈಲು, ಲಕ್ಕವಳ್ಳಿ, ತಣಿಗೆಬೈಲು ಅರಣ್ಯದಲ್ಲಿ ಕೂಡ ಪರಿಶೀಲನೆ ಮಾಡಿತ್ತು.</p><p>ಸೆರೆ ಹಿಡಿದು ತರುವ ಆನೆಗಳನ್ನು ಬಿಡಲು ಆ ಜಾಗದಲ್ಲಿ ಆನೆಗಳಿಗೆ ಮೇವು ಮತ್ತು ನೀರು ಹೇರಳವಾಗಿ ಸಿಗುವಂತಿರಬೇಕು. ಜನ ಸಂಚಾರದಿಂದ ಮುಕ್ತವಾಗಿರಬೇಕು, ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ಜಾಗವೇ ಆಗಬೇಕು. ಆನೆಗಳನ್ನು ಹೊತ್ತು ಬರುವ ಲಾರಿಗಳು ಸುಗಮವಾಗಿ ಗೇಟ್ ತನಕ ಸಾಗುವ ರೀತಿಯ ರಸ್ತೆ ಇರಬೇಕು.</p><p>ಈ ಎಲ್ಲಾ ಮಾನದಂಡಗಳನ್ನು ಒಳಗೊಂಡಿರುವ ಜಾಗ ಅಂತಿಮವಾದ ಬಳಿಕ 20 ಚದರ ಕಿಲೋ ಮೀಟರ್ ವ್ಯಾಪ್ತಿಗೆ ರೈಲ್ವೆ ಬ್ಯಾರಿಕೇಡ್ ಅಳವಡಿಸಲಾಗುತ್ತದೆ. ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಸೆರೆ ಹಿಡಿದು ತಂದು ವಾತಾವರಣಕ್ಕೆ ಒಗ್ಗಿಸಿ ನಂತರ ವನ್ಯಜೀವಿ ವಲಯಕ್ಕೆ ಬಿಡಲಾಗುತ್ತದೆ. ಆಗ ಅವು ಅಲ್ಲಿಯೇ ಉಳಿಯುವುದರಿಂದ ಆನೆ– ಮಾನವ ಸಂಘರ್ಷ ಕಡಿಮೆಯಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ.</p>.<h2>ಏನಿದು ಆನೆ ಸಾಫ್ಟ್ ರಿಲೀಸ್ ಕೇಂದ್ರ...</h2><p>ಆನೆ ಸಾಫ್ಟ್ ರಿಲೀಸ್ ಕೇಂದ್ರದಲ್ಲಿ ಮೂರು ಹಂತಗಳಲ್ಲಿ ಆನೆಗಳನ್ನು ನಿಗಾ ವಹಿಸಿ ನಂತರ ಕಾಡಿಗೆ ಬಿಡಲಾಗುತ್ತದೆ. ಮೊದಲ 1 ಚದರ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಪಶು ವೈದ್ಯಕೀಯ ಕ್ಲಿನಿಕ್ನಲ್ಲಿ ಒಂದು ವಾರ ಇರಿಸಲಾಗುತ್ತದೆ. ಆ ಪರಿಸರಕ್ಕೆ ಹೊಂದಿಕೊಂಡಿದೆ ಎನಿಸಿದಾಗ 5ರಿಂದ 8 ಚದರ ಕಿಲೋ ಮೀಟರ್ ವ್ಯಾಪ್ತಿಯ ಎರಡನೇ ಭಾಗಕ್ಕೆ ಆನೆಗಳನ್ನು ಬಿಡಲಾಗುತ್ತದೆ.</p><p>ಅಲ್ಲಿ ಹೊಂದಿಕೊಂಡ ಬಳಿಕ 20 ಚದರ ಕಿಲೋ ಮೀಟರ್ ವ್ಯಾಪ್ತಿಗೆ ಬಿಡಲಾಗುತ್ತದೆ. ಅವುಗಳನ್ನು ಅಲ್ಲೇ ಶಾಶ್ವತವಾಗಿ ಬಂಧಿಯಾಗಿ ಇರಿಸುವುದಿಲ್ಲ. ಅಲ್ಲಿನ ಪರಿಸರಕ್ಕೆ ಸಂಪೂರ್ಣ ಹೊಂದಿಕೊಂಡ ಬಳಿಕ ಕಾಡಿಗೆ ಬಿಡಲಾಗುತ್ತದೆ. ಆದ್ದರಿಂದ ಕಾಡಿಗೆ ಹೊಂದಿಕೊಂಡ ಜಾಗದಲ್ಲೇ ಈ ಸಾಫ್ಟ್ ರಿಲೀಸ್ ಕೇಂದ್ರ ನಿರ್ಮಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.</p><p>ಈಗ ₹53 ಕೋಟಿ ಬಿಡುಗಡೆಯಾಗಿದ್ದು, ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗುತ್ತಿದೆ ಎಂದು ಅರಣ್ಯ ಸಚಿವರು ಹೇಳುತ್ತಿದ್ದಾರೆ. ಆದರೆ, ಜಾಗ ಇನ್ನೂ ಅಂತಿಮವಾಗಿಲ್ಲ. ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಾಫ್ಟ್ ರಿಲೀಸ್ ಕೇಂದ್ರ ಮಾಡಿದರೆ ಹುಲಿಗಳ ಆವಾಸಕ್ಕೆ ತೊಂದರೆಯಾಗಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ. ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಾಫ್ಟ್ ರಿಲೇಸ್ ಕೇಂದ್ರ ತೆರೆಯಲು ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರಾಧಿಕಾರ(ಎನ್ಟಿಸಿಎ) ಅನುಮತಿ ನೀಡುತ್ತಿಲ್ಲ ಎನ್ನಲಾಗಿದೆ. ಆದ್ದರಿಂದ ರಾಜ್ಯದಲ್ಲಿ ಇದಕ್ಕೆ ಸೂಕ್ತವಾದ ಬೇರೆ ಯಾವ ಜಾಗ ಇದೆ ಎಂಬ ಹುಡುಕಾಟ ನಡೆಯುತ್ತಿದೆ ಎಂದು ಅರಣ್ಯ ಇಲಾಖೆ ಮೂಲಗಳು ಹೇಳುತ್ತವೆ.</p><p>ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ 500.16 ಚದರ ಕಿಲೋ ಮೀಟರ್ ಹುಲಿ ಆವಾಸಸ್ಥಾನವಾದರೆ, 571.84 ಚದರ ಕಿಲೋ ಮೀಟರ್ ಬಫರ್ ಪ್ರದೇಶವನ್ನು ಹೊಂದಿದೆ. ಇಲ್ಲಿ 35ಕ್ಕೂ ಹೆಚ್ಚು ಹುಲಿಗಳು, 116 ಚಿರತೆಗಳು, 445 ಆನೆಗಳಿವೆ ಎಂದು ಅರಣ್ಯ ಇಲಾಖೆ ಅಂದಾಜಿಸಿದೆ.</p><p>ಹುಲಿ ಬೆಕ್ಕು, ಕೆನ್ನಾಯಿ, ಕೆಂದಳಿಲು, ನರಿ, ಕರಡಿ, ಕಾಡು ಕುರಿ, ಕಾಡು ಹಂದಿ, ಕಡವೆ, ಮುಸಿಯಾ, ಕಾಡು ಪಾಪ, ಹಾರುವ ಓತಿ, ಮುಳ್ಳು ಹಂದಿ, ನೀರು ನಾಯಿ, ಪುನುಗಿನ ಬೆಕ್ಕು, ಮೊಸಳೆ ಸೇರಿ ಅಪಾರ ಪ್ರಮಾಣದ ವನ್ಯಜೀವಿ ಸಂಪತ್ತಿದೆ. ಕಾಡುಕೋಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಅವುಗಳು ಜನವಸತಿಯತ್ತ ಬರುತ್ತಿವೆ. ಆನೆ ಸಾಫ್ಟ್ ರಿಲೀಸ್ ಕೇಂದ್ರಕ್ಕೆ ಜಾಗ ನೀಡಿದರೆ ಹುಲಿಗಳು, ಈಗಾಗಲೇ ಈ ಕಾಡಿನಲ್ಲಿ ಆನೆಗಳು ಮತ್ತು ಬೇರೆ ಪ್ರಾಣಿಗಳಿಗೆ ತೊಂದರೆಯಾಗಬಹುದು ಎಂದು ಅರಣ್ಯ ಇಲಾಖೆ ಆಲೋಚನೆ ನಡೆಸುತ್ತಿದೆ. ರಾಜ್ಯದ ವಿವಿಧೆಡೆ ಎರಡು–ಮೂರು ಜಾಗದಲ್ಲಿ ಪರಿಶೀಲನೆ ನಡೆಯುತ್ತಿದೆ ಎಂದೂ ಮೂಲಗಳ ಹೇಳುತ್ತವೆ.</p>.<h2>ಕಾರ್ಯಸಾಧುವಲ್ಲ: ಪರಿಸರವಾದಿಗಳ ಆಕ್ಷೇಪ...</h2><p>ಆನೆಗಳನ್ನು ಹಿಡಿದು ಸ್ಥಳಾಂತರ ಮಾಡುವುದು ದೊಡ್ಡ ಸವಾಲಿನ ಕೆಲಸ. ಬೀದಿ ನಾಯಿಗಳನ್ನು ಹಿಡಿದು ಸ್ಥಳಾಂತರ ಮಾಡುವುದೇ ಕಷ್ಟ. ರಾಜ್ಯ ಬೇರೆ ಬೇರೆ ಕಡೆ ಇರುವ ಆನೆಗಳನ್ನು ಒಮ್ಮೆಲೇ ಹಿಡಿದು ಸಾಫ್ಟ್ ರಿಲೀಸ್ ಕೇಂದ್ರದಲ್ಲಿ ಪಳಗಿಸಿ ಮತ್ತೆ ಕಾಡಿಗೆ ಬಿಡುವ ಆಲೋಚನೆಯೇ ಅವೈಜ್ಞಾನಿಕ ಎಂಬುದು ಪರಿಸರವಾದಿಗಳ ಆಕ್ಷೇಪ.</p><p>ಸಾಫ್ಟ್ ರಿಲೀಸ್ ಕೇಂದ್ರದಲ್ಲಿ ಪಳಗಿದ ನಂತರ ಕಾಡಿಗೆ ಬಿಡಲಾಗುತ್ತದೆ. ಅರಣ್ಯ ಇಲಾಖೆ ಅಧಿಕಾರಿಗಳು ತೋರಿಸಿದ ಜಾಗದಲ್ಲೇ ಆನೆಗಳು ಉಳಿಯುತ್ತವೆಯೇ? ಯಾವುದೇ ವೈಜ್ಞಾನಿಕ ಅಧ್ಯಯನವಿಲ್ಲ. ಯಾವುದೇ ದೇಶದಲ್ಲಿ ಈ ರೀತಿಯ ಉದಾಹರಣೆಗಳಿಲ್ಲ. ಇಂತಹ ಆಲೋಚನೆಗಳಿಂದ ಸರ್ಕಾರದ ಹಣ ಖರ್ಚಾಗಲಿದೆಯೇ ಹೊರತು ಬೇರೇನು ಉಪಯೋಗ ಆಗುವುದಿಲ್ಲ. ಆನೆಗಳು ಮಲೆನಾಡಿನ ಭಾಗವಾಗಿವೆ. ಅದನ್ನು ಅರ್ಥ ಮಾಡಿಕೊಳ್ಳುವ ಕೆಲಸ ಆಗಬೇಕು. ಮಲೆನಾಡಿನ ಜನರಿಗೂ ಅರ್ಥ ಮಾಡಿಸುವ ಕೆಲಸ ಆಗಬೇಕು ಎಂದು ಭದ್ರಾ ವನ್ಯಜೀವಿ ಸಂರಕ್ಷಣಾ ಸಂಸ್ಥೆಯ ಮುಖ್ಯಸ್ಥ ಡಿ.ವಿ.ಗಿರೀಶ್ ಹೇಳುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>