<p><strong>ಚಿಕ್ಕಮಗಳೂರು:</strong> ಮಲೆನಾಡು ಸ್ವರ್ಗದಂತಿರುವ ಚಿಕ್ಕಮಗಳೂರಿಗೆ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಪ್ರವಾಸಿಗರಿಗೆ ಮತ್ತಷ್ಟು ಆಕರ್ಷಿಸಲು ಜಿಲ್ಲಾ ಪಂಚಾಯಿತಿ ಕೂಡ ಮುಂದಡಿ ಇಟ್ಟಿದೆ. ಕೆರೆಗಳಲ್ಲಿ ಪಿಂಕ್ ಪಾರ್ಕ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಮುಂದಾಗಿದೆ. ಪ್ರಾಯೋಗಿಕವಾಗಿ ಅಲ್ಲಂಪುರ(ಅತ್ತಿಕಟ್ಟೆ) ಕೆರೆಯನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಿಕೊಂಡಿದೆ.</p><p>ಚಿಕ್ಕಮಗಳೂರು ಎಂದ ಕೂಡಲೇ ಮೊದಲು ನೆನಪಿಗೆ ಬರುವ ಪ್ರವಾಸಿ ತಾಣ ಎಂದರೆ ಮುಳ್ಳಯ್ಯನಗಿರಿ. ಚಿಕ್ಕಮಗಳೂರಿನಿಂದ 22 ಕಿಲೋ ಮೀಟರ್ ದೂರದಲ್ಲಿದೆ. ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಮುಳ್ಳಯ್ಯನಗಿರಿ, ಬಾಬಾಬುಡನ್ಗಿರಿ, ಮಾಣಿಕ್ಯಧಾರ, ಹೊನ್ನಮ್ಮನಹಳ್ಳ, ಝರಿ ಜಲಪಾತ, ದೇವೀರಮ್ಮನ ಬೆಟ್ಟ ಸೇರಿ ಹಲವು ಪ್ರವಾಸಿ ತಾಣಗಳಿವೆ. ನಗರದಿಂದ ಈ ಎಲ್ಲಾ ಪ್ರವಾಸಿ ತಾಣಗಳಿಗೆ ಅಲ್ಲಂಪುರ ಕೆರೆಯ ಏರಿಯ ಮೇಲಿನ ರಸ್ತೆಯಲ್ಲೇ ಸಾಗಬೇಕು. ಈ ಕೆರೆಯನ್ನು ಪಿಂಕ್ ಪಾರ್ಕ್ ಹೆಸರಿನಲ್ಲಿ ಪ್ರವಾಸಿಗರ ಮುಂದೆ ತೆರೆದಿಡುವುದು ಯೋಜನೆಯ ಉದ್ದೇಶ.</p><p>ವರ್ಷದಲ್ಲಿ 35 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಈ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಅವರು ಬಂದು ಹೋಗುವ ದಾರಿಯಲ್ಲಿ ವಿಶ್ರಾಂತಿ ಪಡೆದು ಕಾಫಿ ಕುಡಿದು ಹೋಗುವ ರೀತಿಯಲ್ಲಿ ಕೆರೆಯ ನೀರಿನ ಮೇಲೆ ತೇಲುವ ಕೆಫೆ ತೆರೆಯಲು ಉದ್ದೇಶಿಸಲಾಗಿದೆ. ಯೋಜನೆ ಸಾಕಾರವಾದರೆ ಅಲ್ಲಂಪುರ ಕೆರೆಯಲ್ಲಿ ತೇಲುವ ಸಣ್ಣ ಉದ್ಯಾನವೊಂದು ನಿರ್ಮಾಣವಾಗಲಿದೆ.</p><p>ಇಡೀ ರಾಜ್ಯದಲ್ಲಿ ಇದು ಹೊಸ ಪ್ರಯತ್ನ. ಪಿಪಿಪಿ(ಖಾಸಗಿ ಸಹಭಾಗಿತ್ವ) ಮಾದರಿಯಲ್ಲಿ ಯೋಜನೆ ಅನುಷ್ಠಾನಕ್ಕೆ ಸಾಧ್ಯತೆ ಇದ್ದರೂ ಅವಕಾಶ ನೀಡಲು ಜಿಲ್ಲಾ ಪಂಚಾಯಿತಿ ಆಲೋಚಿಸಿದೆ. ಪಿಂಕ್ ಪಾರ್ಕ್ ಅಭಿವೃದ್ದಿಪಡಿಸಿ ಪರಿಸರ ಪ್ರವಾಸೋದ್ಯಮ ಉತ್ತೇಜಿಸುವ ಜತೆಗೆ ಗ್ರಾಮ ಪಂಚಾಯಿತಿಗೆ ವರಮಾನ, ಸ್ಥಳೀಯರಿಗೆ ಉದ್ಯೋಗ ದೊರಕಲಿದೆ. ಗ್ರಾಮ ಪಂಚಾಯಿತಿ ಸದಸ್ಯರು, ಪಿಡಿಒ, ಜಿಲ್ಲಾ ಪ್ರವಾಸೋದ್ಯಮ ಸಮಿತಿ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್, ಸ್ವಯಂ ಸೇವಾ ಸಂಸ್ಥೆಗಳನ್ನು ಸಂಯೋಜನೆ ಮಾಡಿಕೊಂಡು ಅನುಷ್ಠಾನ ಮಾಡುವ ಆಲೋಚನೆಯೂ ಇದೆ.</p>.<h2>₹2.68 ಕೋಟಿ ಮೊತ್ತದ ಯೋಜನೆ...</h2><p>ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯಿಂದ ಸ್ಥಳೀಯ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಶೇಷ ಜಾಗಗಳಿದ್ದರೆ ಅವುಗಳನ್ನು ಅಭಿವೃದ್ದಿಪಡಿಸಿ ಗ್ರಾಮ ಪಂಚಾಯಿತಿಗೆ ಆದಾಯ ತರುವ ಯೋಜನೆ ರೂಪಿಸಲು ಸೂಚಿಸಿದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನಾ ಅವರು ಅಲ್ಲಂಪುರ ಕೆರೆ ಅಭಿವೃದ್ಧಿಪಡಿಸಲು ಆಲೋಚಿಸಿದ್ದಾರೆ.</p><p>ಈ ಕೆರೆಯನ್ನು ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿ ಸರ್ವೆ ಕಾರ್ಯವನ್ನೂ ಮುಗಿಸಿದೆ. 6.39 ಎಕರೆ ವ್ಯಾಪ್ತಿಯಲ್ಲಿ ಕೆರೆ ಇರುವುದನ್ನು ಗುರುತಿಸಲಾಗಿದೆ. ಕೆರೆ ಸ್ವಚ್ಚತೆ, ಕೆರೆಯ ಸುತ್ತ ನಡಿಗೆ ಪಥ, ಸೋಲಾರ್ ವಿದ್ಯುತ್ ಅಳವಡಿಕೆ, ವಾಹನ ನಿಲುಗಡೆ ವ್ಯವಸ್ಥೆ, ನೀರಿನಲ್ಲಿ ತೇಲುವ ಮಾದರಿಯಲ್ಲಿ ಕೆಫೆ ನಿರ್ಮಾಣ, ಅಕ್ಕ ಮಾರ್ಟ್, ಬೋಟಿಂಗ್, ಶೌಚಾಲಯ, ಮಕ್ಕಳ ಆಟಿಕೆ ಅಳವಡಿಸಿ ಪರಿಸರ ಸ್ನೇಹಿ ಪ್ರವಾಸಿ ತಾಣವನ್ನಾಗಿ ಮಾಡಲು ಉದ್ದೇಶಿಸಲಾಗಿದೆ.</p><p>ಕೆರೆಯ ಅಂದ ಹೆಚ್ಚಿಸಲು ಕೆರೆಯಲ್ಲಿ ತರಹೇವಾರಿ ಬಣ್ಣದ ತಾವರೆ ಹೂವುಗಳು, ನೀರಿನಲ್ಲಿ ಬೆಳೆಯುವ ಹೂವಿನ ಸಸಿಗಳನ್ನು ಕೆರೆಯಲ್ಲಿ ಬೆಳೆಸಲು ಚಿಂತನೆ ನಡೆಸಲಾಗಿದೆ. ಈ ಹೂವುಗಳು ಒಂದು ಹಂತದ ತನಕ ಬೆಳೆದ ನಂತರ ಅವುಗಳನ್ನು ಕಟಾವು ಮಾಡಿ ಮಾರಾಟ ಮಾಡುವ ಮೂಲಕ ಹೂಗಳಿಂದಲೂ ಸಹ ಗ್ರಾಮ ಪಂಚಾಯಿತಿಗೆ ವರಮಾನ ತರುವ ನಿರೀಕ್ಷೆ ಇದೆ. ಈ ಯೋಜನೆಗೆ ಒಟ್ಟು ₹2.68 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಿರುವ ಅಧಿಕಾರಿಗಳು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.</p><p>ಮೊದಲ ಹಂತದಲ್ಲಿ ಅಲ್ಲಂಪುರ ಕೆರೆಯಲ್ಲಿ ಪಿಂಕ್ ಪಾರ್ಕ್ ಅಭಿವೃದ್ಧಿಯಾಗಿ ಯಶಸ್ವಿಯಾದರೆ ಇದೇ ರೀತಿಯ ಅವಕಾಶ ಇರುವ ಬೇರೆ ಕೆರೆಗಳಲ್ಲೂ ಈ ಯೋಜನೆ ಅನುಷ್ಠಾನಕ್ಕೆ ಪ್ರಯತ್ನಿಸಲು ಅಧಿಕಾರಿಗಳು ಆಲೋಚಿಸಿದ್ದಾರೆ. ಅಲ್ಲಂಪುರ ಕೆರೆಯಲ್ಲಿ ಪಿಂಕ್ ಪಾರ್ಕ್ ಅಭಿವೃದ್ಧಿಯಾದರೆ ವರ್ಷಕ್ಕೆ ₹34 ಲಕ್ಷ ವರದಮಾನ ಗ್ರಾಮ ಪಂಚಾಯಿತಿಗೆ ಬರುವ ನಿರೀಕ್ಷೆ ಮಾಡಿದ್ದಾರೆ. ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ ₹50 ಲಕ್ಷ ತನಕ ವರಮಾನ ಬರುವ ಅವಕಾಶವೂ ಇದೆ ಎನ್ನುತ್ತಾರೆ ಅಧಿಕಾರಿಗಳು.</p>.PV Web Exclusive: ಬಂತು ಬೇಸಿಗೆ.. ಬನ್ನಿ ‘ನಂದಿ’ಗೆ.PV Web Exclusive: ಬೆರಗುಗೊಳಿಸುವ ಬೀದರ್ ಬಳಿಯ ಅಷ್ಟೂರಿನ ಗುಂಬಜ್ಗಳು!.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು:</strong> ಮಲೆನಾಡು ಸ್ವರ್ಗದಂತಿರುವ ಚಿಕ್ಕಮಗಳೂರಿಗೆ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಪ್ರವಾಸಿಗರಿಗೆ ಮತ್ತಷ್ಟು ಆಕರ್ಷಿಸಲು ಜಿಲ್ಲಾ ಪಂಚಾಯಿತಿ ಕೂಡ ಮುಂದಡಿ ಇಟ್ಟಿದೆ. ಕೆರೆಗಳಲ್ಲಿ ಪಿಂಕ್ ಪಾರ್ಕ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಮುಂದಾಗಿದೆ. ಪ್ರಾಯೋಗಿಕವಾಗಿ ಅಲ್ಲಂಪುರ(ಅತ್ತಿಕಟ್ಟೆ) ಕೆರೆಯನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಿಕೊಂಡಿದೆ.</p><p>ಚಿಕ್ಕಮಗಳೂರು ಎಂದ ಕೂಡಲೇ ಮೊದಲು ನೆನಪಿಗೆ ಬರುವ ಪ್ರವಾಸಿ ತಾಣ ಎಂದರೆ ಮುಳ್ಳಯ್ಯನಗಿರಿ. ಚಿಕ್ಕಮಗಳೂರಿನಿಂದ 22 ಕಿಲೋ ಮೀಟರ್ ದೂರದಲ್ಲಿದೆ. ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಮುಳ್ಳಯ್ಯನಗಿರಿ, ಬಾಬಾಬುಡನ್ಗಿರಿ, ಮಾಣಿಕ್ಯಧಾರ, ಹೊನ್ನಮ್ಮನಹಳ್ಳ, ಝರಿ ಜಲಪಾತ, ದೇವೀರಮ್ಮನ ಬೆಟ್ಟ ಸೇರಿ ಹಲವು ಪ್ರವಾಸಿ ತಾಣಗಳಿವೆ. ನಗರದಿಂದ ಈ ಎಲ್ಲಾ ಪ್ರವಾಸಿ ತಾಣಗಳಿಗೆ ಅಲ್ಲಂಪುರ ಕೆರೆಯ ಏರಿಯ ಮೇಲಿನ ರಸ್ತೆಯಲ್ಲೇ ಸಾಗಬೇಕು. ಈ ಕೆರೆಯನ್ನು ಪಿಂಕ್ ಪಾರ್ಕ್ ಹೆಸರಿನಲ್ಲಿ ಪ್ರವಾಸಿಗರ ಮುಂದೆ ತೆರೆದಿಡುವುದು ಯೋಜನೆಯ ಉದ್ದೇಶ.</p><p>ವರ್ಷದಲ್ಲಿ 35 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಈ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಅವರು ಬಂದು ಹೋಗುವ ದಾರಿಯಲ್ಲಿ ವಿಶ್ರಾಂತಿ ಪಡೆದು ಕಾಫಿ ಕುಡಿದು ಹೋಗುವ ರೀತಿಯಲ್ಲಿ ಕೆರೆಯ ನೀರಿನ ಮೇಲೆ ತೇಲುವ ಕೆಫೆ ತೆರೆಯಲು ಉದ್ದೇಶಿಸಲಾಗಿದೆ. ಯೋಜನೆ ಸಾಕಾರವಾದರೆ ಅಲ್ಲಂಪುರ ಕೆರೆಯಲ್ಲಿ ತೇಲುವ ಸಣ್ಣ ಉದ್ಯಾನವೊಂದು ನಿರ್ಮಾಣವಾಗಲಿದೆ.</p><p>ಇಡೀ ರಾಜ್ಯದಲ್ಲಿ ಇದು ಹೊಸ ಪ್ರಯತ್ನ. ಪಿಪಿಪಿ(ಖಾಸಗಿ ಸಹಭಾಗಿತ್ವ) ಮಾದರಿಯಲ್ಲಿ ಯೋಜನೆ ಅನುಷ್ಠಾನಕ್ಕೆ ಸಾಧ್ಯತೆ ಇದ್ದರೂ ಅವಕಾಶ ನೀಡಲು ಜಿಲ್ಲಾ ಪಂಚಾಯಿತಿ ಆಲೋಚಿಸಿದೆ. ಪಿಂಕ್ ಪಾರ್ಕ್ ಅಭಿವೃದ್ದಿಪಡಿಸಿ ಪರಿಸರ ಪ್ರವಾಸೋದ್ಯಮ ಉತ್ತೇಜಿಸುವ ಜತೆಗೆ ಗ್ರಾಮ ಪಂಚಾಯಿತಿಗೆ ವರಮಾನ, ಸ್ಥಳೀಯರಿಗೆ ಉದ್ಯೋಗ ದೊರಕಲಿದೆ. ಗ್ರಾಮ ಪಂಚಾಯಿತಿ ಸದಸ್ಯರು, ಪಿಡಿಒ, ಜಿಲ್ಲಾ ಪ್ರವಾಸೋದ್ಯಮ ಸಮಿತಿ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್, ಸ್ವಯಂ ಸೇವಾ ಸಂಸ್ಥೆಗಳನ್ನು ಸಂಯೋಜನೆ ಮಾಡಿಕೊಂಡು ಅನುಷ್ಠಾನ ಮಾಡುವ ಆಲೋಚನೆಯೂ ಇದೆ.</p>.<h2>₹2.68 ಕೋಟಿ ಮೊತ್ತದ ಯೋಜನೆ...</h2><p>ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯಿಂದ ಸ್ಥಳೀಯ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಶೇಷ ಜಾಗಗಳಿದ್ದರೆ ಅವುಗಳನ್ನು ಅಭಿವೃದ್ದಿಪಡಿಸಿ ಗ್ರಾಮ ಪಂಚಾಯಿತಿಗೆ ಆದಾಯ ತರುವ ಯೋಜನೆ ರೂಪಿಸಲು ಸೂಚಿಸಿದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನಾ ಅವರು ಅಲ್ಲಂಪುರ ಕೆರೆ ಅಭಿವೃದ್ಧಿಪಡಿಸಲು ಆಲೋಚಿಸಿದ್ದಾರೆ.</p><p>ಈ ಕೆರೆಯನ್ನು ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿ ಸರ್ವೆ ಕಾರ್ಯವನ್ನೂ ಮುಗಿಸಿದೆ. 6.39 ಎಕರೆ ವ್ಯಾಪ್ತಿಯಲ್ಲಿ ಕೆರೆ ಇರುವುದನ್ನು ಗುರುತಿಸಲಾಗಿದೆ. ಕೆರೆ ಸ್ವಚ್ಚತೆ, ಕೆರೆಯ ಸುತ್ತ ನಡಿಗೆ ಪಥ, ಸೋಲಾರ್ ವಿದ್ಯುತ್ ಅಳವಡಿಕೆ, ವಾಹನ ನಿಲುಗಡೆ ವ್ಯವಸ್ಥೆ, ನೀರಿನಲ್ಲಿ ತೇಲುವ ಮಾದರಿಯಲ್ಲಿ ಕೆಫೆ ನಿರ್ಮಾಣ, ಅಕ್ಕ ಮಾರ್ಟ್, ಬೋಟಿಂಗ್, ಶೌಚಾಲಯ, ಮಕ್ಕಳ ಆಟಿಕೆ ಅಳವಡಿಸಿ ಪರಿಸರ ಸ್ನೇಹಿ ಪ್ರವಾಸಿ ತಾಣವನ್ನಾಗಿ ಮಾಡಲು ಉದ್ದೇಶಿಸಲಾಗಿದೆ.</p><p>ಕೆರೆಯ ಅಂದ ಹೆಚ್ಚಿಸಲು ಕೆರೆಯಲ್ಲಿ ತರಹೇವಾರಿ ಬಣ್ಣದ ತಾವರೆ ಹೂವುಗಳು, ನೀರಿನಲ್ಲಿ ಬೆಳೆಯುವ ಹೂವಿನ ಸಸಿಗಳನ್ನು ಕೆರೆಯಲ್ಲಿ ಬೆಳೆಸಲು ಚಿಂತನೆ ನಡೆಸಲಾಗಿದೆ. ಈ ಹೂವುಗಳು ಒಂದು ಹಂತದ ತನಕ ಬೆಳೆದ ನಂತರ ಅವುಗಳನ್ನು ಕಟಾವು ಮಾಡಿ ಮಾರಾಟ ಮಾಡುವ ಮೂಲಕ ಹೂಗಳಿಂದಲೂ ಸಹ ಗ್ರಾಮ ಪಂಚಾಯಿತಿಗೆ ವರಮಾನ ತರುವ ನಿರೀಕ್ಷೆ ಇದೆ. ಈ ಯೋಜನೆಗೆ ಒಟ್ಟು ₹2.68 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಿರುವ ಅಧಿಕಾರಿಗಳು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.</p><p>ಮೊದಲ ಹಂತದಲ್ಲಿ ಅಲ್ಲಂಪುರ ಕೆರೆಯಲ್ಲಿ ಪಿಂಕ್ ಪಾರ್ಕ್ ಅಭಿವೃದ್ಧಿಯಾಗಿ ಯಶಸ್ವಿಯಾದರೆ ಇದೇ ರೀತಿಯ ಅವಕಾಶ ಇರುವ ಬೇರೆ ಕೆರೆಗಳಲ್ಲೂ ಈ ಯೋಜನೆ ಅನುಷ್ಠಾನಕ್ಕೆ ಪ್ರಯತ್ನಿಸಲು ಅಧಿಕಾರಿಗಳು ಆಲೋಚಿಸಿದ್ದಾರೆ. ಅಲ್ಲಂಪುರ ಕೆರೆಯಲ್ಲಿ ಪಿಂಕ್ ಪಾರ್ಕ್ ಅಭಿವೃದ್ಧಿಯಾದರೆ ವರ್ಷಕ್ಕೆ ₹34 ಲಕ್ಷ ವರದಮಾನ ಗ್ರಾಮ ಪಂಚಾಯಿತಿಗೆ ಬರುವ ನಿರೀಕ್ಷೆ ಮಾಡಿದ್ದಾರೆ. ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ ₹50 ಲಕ್ಷ ತನಕ ವರಮಾನ ಬರುವ ಅವಕಾಶವೂ ಇದೆ ಎನ್ನುತ್ತಾರೆ ಅಧಿಕಾರಿಗಳು.</p>.PV Web Exclusive: ಬಂತು ಬೇಸಿಗೆ.. ಬನ್ನಿ ‘ನಂದಿ’ಗೆ.PV Web Exclusive: ಬೆರಗುಗೊಳಿಸುವ ಬೀದರ್ ಬಳಿಯ ಅಷ್ಟೂರಿನ ಗುಂಬಜ್ಗಳು!.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>