<p><strong><br>ಚಿಕ್ಕಬಳ್ಳಾಪುರ:</strong> ‘ಗುಮ್ಮನಾಯಕನಪಾಳ್ಯ’ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಐತಿಹಾಸಿಕವಾದ ನೆಲೆ. ಇಂತಹ ಮಹತ್ವದ ಐತಿಹಾಸಿಕ ತಾಣ ಅಸ್ತಿತ್ವಕ್ಕೆ ಹೆಣಗುತ್ತಿದೆ. ಅಭಿವೃದ್ಧಿಗೊಳಿಸಿದ್ದರೆ ‘ಮಹತ್ವ’ದ ತಾಣ ಎನ್ನುವ ಹಣೆಪಟ್ಟಿ ಇರುತ್ತಿತ್ತು. </p>.<p>ಬಾಗೇಪಲ್ಲಿ ತಾಲ್ಲೂಕು ಕೇಂದ್ರದಿಂದ ‘ಗುಮ್ಮನಾಯಕನಪಾಳ್ಯ’ 20 ಕಿ.ಮೀ ದೂರದಲ್ಲಿದೆ. 560 ವರ್ಷಗಳ ಕಾಲ ‘ಗುಮ್ಮನಾಯಕನಪಾಳ್ಯ’ವನ್ನು 25 ಪಾಳೇಗಾರರು ಆಳ್ವಿಕೆ ನಡೆಸಿದ್ದಾರೆ. ಅಧ್ಯಯನದ ದೃಷ್ಟಿಯಿಂದ ಈ ಪಾಳ್ಯ ಮಹತ್ವದ ಪಾಳೇಪಟ್ಟು. ಆದರೆ ಸರ್ಕಾರದ ನಿರ್ಲಕ್ಷ್ಯದ ಪರಿಣಾಮ ಕೋಟೆಗಳು, ದೇಗುಲಗಳು ಅವಸಾನದತ್ತ ಸಾಗುತ್ತಿವೆ. </p>. <p>ಒಂದು ಕಾಲದಲ್ಲಿ ವಧುವಿನಂತೆ ಕಂಗೊಳಿಸಿದ್ದ ಗೊಮ್ಮನಾಯಕನಪಾಳ್ಯದ ಕೋಟೆ ಅಂದ ಚೆಂದ ಕಳೆದುಕೊಂಡಿದೆ. ಕೋಟೆಗೆ ಸಾಗಲು ಸುಗಮವಾದ ರಸ್ತೆಯೂ ಇಲ್ಲ. ಮುಳ್ಳಿನ ಗಿಡಗಳು ಬೆಳೆದಿವೆ. ಕೋಟೆ, ಬುರುಜುಗಳ ನಿರ್ವಹಣೆ ಕೊರತೆಯಿಂದ ಶಿಥಿಲವಾಗಿವೆ. </p>. <p>ಕೋಟೆಯ ಮುಖ್ಯದ್ವಾರದಿಂದ ಮೇಲ್ಭಾಗದವರೆಗೆ ರಸ್ತೆಯೂ ಇಲ್ಲ. ಕೋಟೆಯನ್ನು ಮುಳ್ಳಿನ ಗಿಡಗಳು ತುಂಬಿಕೊಂಡಿವೆ. ಐತಿಹಾಸಿಕ ದೇವಾಲಯಗಳನ್ನೂ ಅಭಿವೃದ್ಧಿಪಡಿಸಿಲ್ಲ. ದೇವಾಲಯ ಪಕ್ಕದಲ್ಲಿ ನಿಧಿಗಳ್ಳರು ಗುಂಡಿಗಳನ್ನು ಅಗೆದು ವಿಕೃತಗೊಳಿಸಿದ್ದಾರೆ.</p>. <p><strong>ಯಾರ ಆಳ್ವಿಕೆ:</strong> ಕ್ರಿ.ಶ 1243ರಲ್ಲಿ ಗುಮ್ಮನಾಯಕನಪಾಳ್ಯವನ್ನು ಪಾಳೇಗಾರರು ಆಳ್ವಿಕೆ ನಡೆಸಿದರು. ಈ ಪಾಳೇಗಾರರು ವಿಜಯನಗರ ಅರಸರ ಸಾಮಂತರಾಗಿದ್ದರು. 560 ವರ್ಷಗಳ ಕಾಲ 25 ಮಂದಿ ಪಾಳೇಗಾರರು ಆಳ್ವಿಕೆ ನಡೆಸಿದರು.</p><p>ವಿಜಯನಗರ ಅರಸರಿಗೂ, ಪಾಳೇಗಾರರಿಗೆ ನಿಕಟ ಸಂಪರ್ಕವಿತ್ತು. ಬಾಗೇಪಲ್ಲಿಯಲ್ಲಿ ದೊರೆತ ಕ್ರಿ.ಶ 1336ರ ತಾಮ್ರ ಶಾಸನದಲ್ಲಿ ಇತಿಹಾಸದ ಬಗ್ಗೆ ಉಲ್ಲೇಖವಿದೆ.</p>. <p>1338ರಿಂದ 1457 ಗುಮ್ಮನಾಯಕನಪಾಳ್ಯವನ್ನು ಹಿರಿಶಿಂಗಪ್ಪನಾಯಕ ಆಳ್ವಿಕೆ ನಡೆಸಿದರು. ಸುದೀರ್ಘ ಆಡಳಿತ ನಡೆಸಿದ ಪಾಳೇಗಾರರು ಇವರೊಬ್ಬರೇ ಆಗಿದ್ದಾರೆ. ವಿಜಯನಗರ ಚಕ್ರವರ್ತಿ ದೇವರಾಯ ಮತ್ತು ಕಲಬುರ್ಗಿ ಸುಲ್ತಾನರಿಗೂ ನಡೆದ ಯುದ್ಧದಲ್ಲಿ ಗುಮ್ಮನಾಯಕನಪಾಳ್ಯದ ಪಾಳೇಗಾರರು ವಿಜಯನಗರ ಅರಸರಿಗೆ ನೆರವಾಗಿದ್ದರು. ಆ ಯುದ್ಧದಲ್ಲಿ ವಿಜಯನಗರ ಸಾಮ್ರಾಜ್ಯ ಜಯ ಸಾಧಿಸಿತು. ವಿಜಯದಿಂದ ಖುಷಿಗೊಂಡ ರಾಯರು ಗಡಿದಂ ಪ್ರದೇಶವನ್ನು ಹಿರಿಶಿಂಗಪ್ಪನಾಯಕರಿಗೆ ಬಳುವಳಿಯಾಗಿ ನೀಡಿದರು.</p>.<p>ಹೀಗೆ 560 ವರ್ಷ ಭವ್ಯತೆಯಿಂದ ಆಡಳಿತ ಕಂಡ ಗುಮ್ಮನಾಯಕನಪಾಳ್ಯ ಈಗ ನಿರ್ಗತಿಕವಾಗಿದೆ. </p>.<p>ಗುಮ್ಮನಾಯಕಪಾಳ್ಯ ಗ್ರಾಮದ ಮುಖ್ಯದ್ವಾರದಲ್ಲಿ ಪಾಳೇಗಾರರು ಶ್ರೀರಾಮದೇವಾಲಯ ನಿರ್ಮಿಸಿದ್ದಾರೆ. ದೇಗುಲದಲ್ಲಿ ಸುಂದರ ಶಿಲ್ಪಕಲೆ ಇದೆ. ದೇವಾಲಯದ ಸುತ್ತ ಮಹಾಭಾರತ, ರಾಮಾಯಣ ದೃಶ್ಯಗಳು, ದೇವಾನುದೇವತೆಗಳು, ಮದಗಜಗಳು, ಪಕ್ಷಿಗಳು ಸೇರಿದಂತೆ ಸುಂದರವಾದ ವಾಸ್ತು ಶಿಲ್ಪದ ಕೆತ್ತನೆ ಇದೆ.</p>.<p>ಗುಮ್ಮನಾಯಕನಪಾಳ್ಯದ ಕೋಟೆ, ದೇವಾಲಯ ಅಭಿವೃದ್ಧಿಪಡಿಸಲು 1994ರಲ್ಲಿ ಅಂದಿನ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಿದ್ದರು. ಮಕ್ಕಳ ಆಟಿಕೆಗಳು, ಉದ್ಯಾನ, ತಪೋಭೂಮಿ ಅಭಿವೃದ್ಧಿಪಡಿಸಿದ್ದರು. ಕೋಟೆಗೆ ದಾರಿ ಮಾಡಿಸಿದ್ದರು.</p>. <p>ಆದರೆ ಆ ನಂತರದಿಂದ ಇಲ್ಲಿಯವರೆಗೆ ಯಾವುದೇ ಅಭಿವೃದ್ಧಿಯೂ ಆಗಿಲ್ಲ. ಕನಿಷ್ಠ ನಿರ್ವಹಣೆಯೂ ಇಲ್ಲ. ಮುಖ್ಯದ್ವಾರದ ಮುಂದಿನ ಕಲ್ಯಾಣಿ ನಿರ್ವಹಣೆ ಇಲ್ಲದೆ ಪಾಳು ಬಿದ್ದಿವೆ. ಬುರುಜುಗಳು ಉರುಳಿ ಬಿದ್ದಿವೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong><br>ಚಿಕ್ಕಬಳ್ಳಾಪುರ:</strong> ‘ಗುಮ್ಮನಾಯಕನಪಾಳ್ಯ’ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಐತಿಹಾಸಿಕವಾದ ನೆಲೆ. ಇಂತಹ ಮಹತ್ವದ ಐತಿಹಾಸಿಕ ತಾಣ ಅಸ್ತಿತ್ವಕ್ಕೆ ಹೆಣಗುತ್ತಿದೆ. ಅಭಿವೃದ್ಧಿಗೊಳಿಸಿದ್ದರೆ ‘ಮಹತ್ವ’ದ ತಾಣ ಎನ್ನುವ ಹಣೆಪಟ್ಟಿ ಇರುತ್ತಿತ್ತು. </p>.<p>ಬಾಗೇಪಲ್ಲಿ ತಾಲ್ಲೂಕು ಕೇಂದ್ರದಿಂದ ‘ಗುಮ್ಮನಾಯಕನಪಾಳ್ಯ’ 20 ಕಿ.ಮೀ ದೂರದಲ್ಲಿದೆ. 560 ವರ್ಷಗಳ ಕಾಲ ‘ಗುಮ್ಮನಾಯಕನಪಾಳ್ಯ’ವನ್ನು 25 ಪಾಳೇಗಾರರು ಆಳ್ವಿಕೆ ನಡೆಸಿದ್ದಾರೆ. ಅಧ್ಯಯನದ ದೃಷ್ಟಿಯಿಂದ ಈ ಪಾಳ್ಯ ಮಹತ್ವದ ಪಾಳೇಪಟ್ಟು. ಆದರೆ ಸರ್ಕಾರದ ನಿರ್ಲಕ್ಷ್ಯದ ಪರಿಣಾಮ ಕೋಟೆಗಳು, ದೇಗುಲಗಳು ಅವಸಾನದತ್ತ ಸಾಗುತ್ತಿವೆ. </p>. <p>ಒಂದು ಕಾಲದಲ್ಲಿ ವಧುವಿನಂತೆ ಕಂಗೊಳಿಸಿದ್ದ ಗೊಮ್ಮನಾಯಕನಪಾಳ್ಯದ ಕೋಟೆ ಅಂದ ಚೆಂದ ಕಳೆದುಕೊಂಡಿದೆ. ಕೋಟೆಗೆ ಸಾಗಲು ಸುಗಮವಾದ ರಸ್ತೆಯೂ ಇಲ್ಲ. ಮುಳ್ಳಿನ ಗಿಡಗಳು ಬೆಳೆದಿವೆ. ಕೋಟೆ, ಬುರುಜುಗಳ ನಿರ್ವಹಣೆ ಕೊರತೆಯಿಂದ ಶಿಥಿಲವಾಗಿವೆ. </p>. <p>ಕೋಟೆಯ ಮುಖ್ಯದ್ವಾರದಿಂದ ಮೇಲ್ಭಾಗದವರೆಗೆ ರಸ್ತೆಯೂ ಇಲ್ಲ. ಕೋಟೆಯನ್ನು ಮುಳ್ಳಿನ ಗಿಡಗಳು ತುಂಬಿಕೊಂಡಿವೆ. ಐತಿಹಾಸಿಕ ದೇವಾಲಯಗಳನ್ನೂ ಅಭಿವೃದ್ಧಿಪಡಿಸಿಲ್ಲ. ದೇವಾಲಯ ಪಕ್ಕದಲ್ಲಿ ನಿಧಿಗಳ್ಳರು ಗುಂಡಿಗಳನ್ನು ಅಗೆದು ವಿಕೃತಗೊಳಿಸಿದ್ದಾರೆ.</p>. <p><strong>ಯಾರ ಆಳ್ವಿಕೆ:</strong> ಕ್ರಿ.ಶ 1243ರಲ್ಲಿ ಗುಮ್ಮನಾಯಕನಪಾಳ್ಯವನ್ನು ಪಾಳೇಗಾರರು ಆಳ್ವಿಕೆ ನಡೆಸಿದರು. ಈ ಪಾಳೇಗಾರರು ವಿಜಯನಗರ ಅರಸರ ಸಾಮಂತರಾಗಿದ್ದರು. 560 ವರ್ಷಗಳ ಕಾಲ 25 ಮಂದಿ ಪಾಳೇಗಾರರು ಆಳ್ವಿಕೆ ನಡೆಸಿದರು.</p><p>ವಿಜಯನಗರ ಅರಸರಿಗೂ, ಪಾಳೇಗಾರರಿಗೆ ನಿಕಟ ಸಂಪರ್ಕವಿತ್ತು. ಬಾಗೇಪಲ್ಲಿಯಲ್ಲಿ ದೊರೆತ ಕ್ರಿ.ಶ 1336ರ ತಾಮ್ರ ಶಾಸನದಲ್ಲಿ ಇತಿಹಾಸದ ಬಗ್ಗೆ ಉಲ್ಲೇಖವಿದೆ.</p>. <p>1338ರಿಂದ 1457 ಗುಮ್ಮನಾಯಕನಪಾಳ್ಯವನ್ನು ಹಿರಿಶಿಂಗಪ್ಪನಾಯಕ ಆಳ್ವಿಕೆ ನಡೆಸಿದರು. ಸುದೀರ್ಘ ಆಡಳಿತ ನಡೆಸಿದ ಪಾಳೇಗಾರರು ಇವರೊಬ್ಬರೇ ಆಗಿದ್ದಾರೆ. ವಿಜಯನಗರ ಚಕ್ರವರ್ತಿ ದೇವರಾಯ ಮತ್ತು ಕಲಬುರ್ಗಿ ಸುಲ್ತಾನರಿಗೂ ನಡೆದ ಯುದ್ಧದಲ್ಲಿ ಗುಮ್ಮನಾಯಕನಪಾಳ್ಯದ ಪಾಳೇಗಾರರು ವಿಜಯನಗರ ಅರಸರಿಗೆ ನೆರವಾಗಿದ್ದರು. ಆ ಯುದ್ಧದಲ್ಲಿ ವಿಜಯನಗರ ಸಾಮ್ರಾಜ್ಯ ಜಯ ಸಾಧಿಸಿತು. ವಿಜಯದಿಂದ ಖುಷಿಗೊಂಡ ರಾಯರು ಗಡಿದಂ ಪ್ರದೇಶವನ್ನು ಹಿರಿಶಿಂಗಪ್ಪನಾಯಕರಿಗೆ ಬಳುವಳಿಯಾಗಿ ನೀಡಿದರು.</p>.<p>ಹೀಗೆ 560 ವರ್ಷ ಭವ್ಯತೆಯಿಂದ ಆಡಳಿತ ಕಂಡ ಗುಮ್ಮನಾಯಕನಪಾಳ್ಯ ಈಗ ನಿರ್ಗತಿಕವಾಗಿದೆ. </p>.<p>ಗುಮ್ಮನಾಯಕಪಾಳ್ಯ ಗ್ರಾಮದ ಮುಖ್ಯದ್ವಾರದಲ್ಲಿ ಪಾಳೇಗಾರರು ಶ್ರೀರಾಮದೇವಾಲಯ ನಿರ್ಮಿಸಿದ್ದಾರೆ. ದೇಗುಲದಲ್ಲಿ ಸುಂದರ ಶಿಲ್ಪಕಲೆ ಇದೆ. ದೇವಾಲಯದ ಸುತ್ತ ಮಹಾಭಾರತ, ರಾಮಾಯಣ ದೃಶ್ಯಗಳು, ದೇವಾನುದೇವತೆಗಳು, ಮದಗಜಗಳು, ಪಕ್ಷಿಗಳು ಸೇರಿದಂತೆ ಸುಂದರವಾದ ವಾಸ್ತು ಶಿಲ್ಪದ ಕೆತ್ತನೆ ಇದೆ.</p>.<p>ಗುಮ್ಮನಾಯಕನಪಾಳ್ಯದ ಕೋಟೆ, ದೇವಾಲಯ ಅಭಿವೃದ್ಧಿಪಡಿಸಲು 1994ರಲ್ಲಿ ಅಂದಿನ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಿದ್ದರು. ಮಕ್ಕಳ ಆಟಿಕೆಗಳು, ಉದ್ಯಾನ, ತಪೋಭೂಮಿ ಅಭಿವೃದ್ಧಿಪಡಿಸಿದ್ದರು. ಕೋಟೆಗೆ ದಾರಿ ಮಾಡಿಸಿದ್ದರು.</p>. <p>ಆದರೆ ಆ ನಂತರದಿಂದ ಇಲ್ಲಿಯವರೆಗೆ ಯಾವುದೇ ಅಭಿವೃದ್ಧಿಯೂ ಆಗಿಲ್ಲ. ಕನಿಷ್ಠ ನಿರ್ವಹಣೆಯೂ ಇಲ್ಲ. ಮುಖ್ಯದ್ವಾರದ ಮುಂದಿನ ಕಲ್ಯಾಣಿ ನಿರ್ವಹಣೆ ಇಲ್ಲದೆ ಪಾಳು ಬಿದ್ದಿವೆ. ಬುರುಜುಗಳು ಉರುಳಿ ಬಿದ್ದಿವೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>