<p><strong>ಬಾಗಲಕೋಟೆ:</strong> ಮೇ ತಿಂಗಳು ಪೂರ್ಣವಾದರೂ ಮುಂಗಾರಿನ ಸುಳಿವಿಲ್ಲ. ಕುಡಿಯುವ ನೀರಿನ ದಾಹ ಇಂಗಿಸುವ ಕೃಷ್ಣಾ ನದಿಯ ಒಡಲು ಖಾಲಿಯಾಗಿದೆ. ಕುಡಿಯುವ ನೀರಿಗಾರಿ ಜನರು ಪರದಾಡುವಂತಾಗಿದೆ.</p><p>ಕಳೆದ ಬಾರಿ ಬೇಗನೆ ಮುಂಗಾರು ಬಂದಿತ್ತು. ಜೊತೆಗೆ ಹಿಪ್ಪರಗಿ ಬ್ಯಾರೇಜಿನಲ್ಲಿಯೂ ನೀರು ಸಂಗ್ರಹಿಸಲಾಗಿತ್ತು. ಆದರೆ, ಈ ಬಾರಿ ತೀವ್ರ ಬಿಸಿಲಿನ ಪರಿಣಾಮ ನೀರು ಖಾಲಿಯಾಗಿದೆ. ಮುಂಗಾರು ವಿಳಂಬವಾಗಿರುವುದರಿಂದ ನೀರಿನ ಸಮಸ್ಯೆ ಉಲ್ಬಣಿಸಿದೆ.</p>.PV WEB Exclusive: ಜಕ್ಕನಹಳ್ಳಿ ಸರ್ಕಲ್; ಹಲಸಿನ ಹಣ್ಣಿನ ಕಮಾಲ್.<p>ಕೃಷ್ಣಾ ನದಿಗೆ ಮಹಾರಾಷ್ಟ್ರ ರಾಜ್ಯದಿಂದ ಎರಡು ಟಿಎಂಸಿ ಅಡಿ ನೀರು ಬಿಡಿಸುವುದಾಗಿ ಹೇಳುತ್ತಿದ್ದ ಜನಪ್ರತಿನಿಧಿಗಳು ಮುಖ್ಯಮಂತ್ರಿ ಬದಲಾವಣೆ, ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಬ್ಯುಸಿಯಾಗಿದ್ದಾರೆ. ನೀರು ಬಿಡಲು ಬರೆದಿದ್ದ ರಾಜ್ಯ ಸರ್ಕಾರದ ಪತ್ರಕ್ಕೆ ಯಾವುದೇ ಸ್ಪಂದನೆ ಸಿಕ್ಕಿಲ್ಲ.</p><p>ಹಿಪ್ಪರಗಿ ಬ್ಯಾರೇಜಿನ ಗೇಟ್ ಮುರಿದು 2 ಟಿಎಂಸಿ ಅಡಿಯಷ್ಟು ನೀರು ಪೋಲಾಗಿ ಹರಿದು ಹೋಗಿದೆ. ಈಗ ಬ್ಯಾರೇಜಿನಲ್ಲಿ 0.3 ಟಿಎಂಸಿ ಅಡಿಯಷ್ಟು ಮಾತ್ರ ನೀರಿದೆ. ಬೆಳೆಗಳಿಗೆ ಹೋಗಲಿ, ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ.</p><p>ನದಿ ಪಾತ್ರದ ರೈತರು ಬೆಳೆ ಉಳಿಸಿಕೊಳ್ಳಲು ನದಿಯಲ್ಲಿ ಜೆಸಿಬಿ ಯಂತ್ರದ ಸಹಾಯದಿಂದ ಚಿಕ್ಕ, ಚಿಕ್ಕ ಗುಂಡಿ ತೆಗೆದು ನೀರು ಪಡೆಯುವುದಕ್ಕೆ ಮುಂದಾಗಿದ್ದಾರೆ. ಆ ನೀರೂ ಬೆಳೆಗಳಿಗೆ ಸಾಲುತ್ತಿಲ್ಲ. ಪ್ರಖರ ಬಿಸಿಲಿಗೆ ಕಬ್ಬು ಒಣಗಲಾರಂಭಿಸಿದೆ.</p><p>ಜಮಖಂಡಿ ತಾಲ್ಲೂಕಿನ ಹಿಪ್ಪರಗಿ ಜಲಾಶಯದಿಂದ ಚಿಕ್ಕಪಡಸಲಗಿ ಶ್ರಮ ಬಿಂದು ಸಾಗರವರೆಗೆ ಹಿಂಭಾಗದ ಎಡ ಮತ್ತು ಬಲಭಾಗದ ಶಿರಗುಪ್ಪಿ, ಮುತ್ತೂರ, ಮೈಗೂರ, ಶೂರ್ಪಾಲಿ, ಜಂಬಗಿ, ತುಬಚಿ, ಕಂಕಣವಾಡಿ, ಕಡಕೋಳ, ಟಕ್ಕಳಕಿ, ಟಕ್ಕೊಡ ಸೇರಿದಂತೆ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ನೀರಿನ ತೊಂದರೆ ಎದುರಾಗಿದೆ.</p>.Web Exclusive: ನಾಡಿನೊಳಗಿದ್ದರೂ ‘ಪರಕೀಯಾದ’ ಚಲ್ಹೇರಿ.<p>‘ಪ್ರತಿವರ್ಷ ಹಿಪ್ಪರಗಿ ಬ್ಯಾರೇಜಿನಲ್ಲಿ ನೀರಿನ ಸಂಗ್ರಹ ಇರುತ್ತಿತ್ತು. ಆದರೆ ಈ ಬಾರಿ ಬ್ಯಾರೇಜಿನ ಗೇಟು ಕಿತ್ತಿದ್ದರಿಂದ ಖಾಲಿಯಾಗಿದೆ. ಕೂಡಲೇ ಜನಪ್ರತಿನಿಧಿಗಳು ಮಹಾರಾಷ್ಟ್ರ ರಾಜ್ಯದಿಂದ ನೀರು ಬಿಡಿಸಬೇಕು’ ಎಂಬುದು ರೈತರ ಆಗ್ರಹವಾಗಿದೆ.</p><p>‘ರೈತರು ನೀರು ಬಿಡಿಸಬೇಕು ಎಂದು ಒತ್ತಾಯ ಮಾಡಿದಾಗ ಹಿಪ್ಪರಗಿ ಬ್ಯಾರೇಜಿನಿಂದ ತಿಂಗಳ ಹಿಂದೆ 0.10 ಟಿಎಂಸಿ ಅಡಿ ನೀರು ಬಿಡಲಾಗಿತ್ತು. ಆದರೆ, ಅದು ಶಿರಗುಪ್ಪಿ ಗ್ರಾಮವನ್ನೂ ದಾಟಲಿಲ್ಲ. ಪಕ್ಕದಲ್ಲಿಯೇ ನದಿ ಇದ್ದರೂ ನೀರಿಗಾಗಿ ಪರದಾಡುವಂತಾಗಿದೆ’ ಎನ್ನುತ್ತಾರೆ ರೈತ ಮುಖಂಡ ಕಲ್ಲಪ್ಪ ಬಿರಾದಾರ.</p><p>ಮಹಾರಾಷ್ಟ್ರ ರಾಜ್ಯದಿಂದ ಕೃಷ್ಣಾ ನದಿಗೆ ನೀರು ಹರಿಯದಿರುವುದರಿಂದ ಬಾಗಲಕೋಟೆ ಮಾತ್ರವಲ್ಲ ಬೆಳಗಾವಿ, ವಿಜಯಪುರ ಜಿಲ್ಲೆಯ ಹಳ್ಳಿಗಳಿಗೂ ಕುಡಿಯುವ ನೀರಿನ ತೊಂದರೆ ಎದುರಾಗಿದೆ.</p><p>‘ಮಹಾರಾಷ್ಟ್ರದ ಜಲಾಶಯಗಳಿಂದ ಕೃಷ್ಣೆಗೆ ನೀರು ಹರಿಸುವಂತೆ ಒತ್ತಾಯಿಸಲು ಸರ್ವಪಕ್ಷಗಳ ನಿಯೋಗ ಮಹಾರಾಷ್ಟ್ರ ಮುಖ್ಯಮಂತ್ರಿ ಬಳಿ ತೆಗೆದುಕೊಂಡು ಹೋಗುತ್ತೇವೆ’ ಎಂದು ಸಚಿವರು ಹೇಳುತ್ತಲೇ ಇದ್ದರು. ಆದರೆ, ಈ ವರೆಗೆ ನಿಯೋಗ ಹೋಗಿಲ್ಲ. </p>.WEB EXCLUSIVE: ಐತಿಹಾಸಿಕ ಹಂಪಿಯಲ್ಲಿ ಮತ್ತೊಮ್ಮೆ ‘ಗಜಪಯಣ‘.<p>‘ಉತ್ತರ ಕರ್ನಾಟಕದ ಜಿಲ್ಲೆಗಳ ಜನರ ಮತ್ತು ಜಾನುವಾರುಗಳ ಕುಡಿಯುವ ನೀರಿನ ಅಗತ್ಯತೆ ಪೂರೈಸುವ ದೃಷ್ಟಿಯಿಂದ ಮಹಾರಾಷ್ಟ್ರದ ಕೊಯ್ನಾ ಅಥವಾ ವಾರಣಾ ಜಲಾಶಯಗಳಿಂದ ಕೃಷ್ಣಾ ನದಿಗೆ ಮತ್ತು ಉಜ್ಜನಿ ಜಲಾಶಯದಿಂದ ಭೀಮಾ ನದಿಗೆ ತಲಾ 2 ಟಿಎಂಸಿ ಅಡಿ ನೀರು ಬಿಡುಗಡೆಗೊಳಿಸಬೇಕು’ ಎಂದು ಒತ್ತಾಯಿಸಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು, ಏಪ್ರಿಲ್ ತಿಂಗಳಿನಲ್ಲಿಯೇ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರಿಗೆ ಪತ್ರ ಬರೆದಿದ್ದಾರೆ. ಆದರೆ, ಸ್ಪಂದನೆ ಸಿಕ್ಕಿಲ್ಲ.</p><h2>17 ಕಡೆ ಖಾಸಗಿ ಕೊಳವೆಬಾವಿಗಳಿಂದ ನೀರು</h2><p> ಸರ್ಕಾರದ ವತಿಯಿಂದ ನೀರು ಪೂರೈಸಲಾಗುತ್ತಿದ್ದ ಜಲಮೂಲ ಬತ್ತಿ ಹೋಗಿರುವುದರಿಂದ ಜಿಲ್ಲೆಯ 17 ಗ್ರಾಮಗಳಿಗೆ ಖಾಸಗಿ ಕೊಳವೆಬಾವಿಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ. </p><p>ಇಳಕಲ್ ತಾಲ್ಲೂಕಿನ ಹಿರೇಕೊಡಗಲಿ, ಚಿಕ್ಕಕೊಡಗಲಿ, ಬಾದಾಮಿ ತಾಲ್ಲೂಕಿನ ಕೈನಕಟ್ಟಿ, ಗುಳೇದಗುಡ್ಡ ತಾಲ್ಲೂಕಿನ ಚಿಮ್ಮಲಗಿ, ಹಂಗರಗಿ, ಹಿರೇಬೂದಿಹಾಳ, ಜಮಖಂಡಿ ತಾಲ್ಲೂಕಿನ ಸಾವಳಗಿ, ಶಿರಗುಪ್ಪ, ತೊದಲಬಾಗಿ, ಶೂರ್ಪಾಲಿ ಮುಂತಾದೆಡೆ ಖಾಸಗಿ ಕೊಳವೆಬಾವಿಗಳಿಂದ ನೀರಿನ ದಾಹ ಇಂಗಿಸಲಾಗುತ್ತಿದೆ.</p><p>ನೀರಿನ ಕೊರತೆಯಿಂದಾಗಿ ಅರಕೇರಿ, ತೋಳಮಟ್ಟಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಸ್ಥಗಿತಗೊಂಡಿದ್ದವು. ಘಟಪ್ರಭಾ ನದಿಗೆ ನೀರು ಬಿಟ್ಟಿರುವುದರಿಂದ ಮತ್ತೇ ಚಾಲನೆಗೊಂಡಿವೆ.</p><p>ಚಿಕ್ಕಪಡಸಲಗಿ ಬ್ಯಾರೇಜ್ 25 ಹಳ್ಳಿಗಳ ಸವಳು ನೀರು ಬರುತ್ತದೆ. ಪರಿಣಾಮ ಗ್ರಾಮಗಳಲ್ಲಿ ಕೊಳವೆಬಾವಿ ಕೊರೆಯಿಸಿದರೂ ನೀರು ಬಳಕೆಗೆ ಯೋಗ್ಯವಾಗಿಲ್ಲ. ಹಾಗಾಗಿ, ಈ ಗ್ರಾಮಗಳು ನದಿ ನೀರನ್ನೇ ಅವಲಂಬಿಸಿವೆ. ನದಿಯಲ್ಲಿ ನೀರಿಲ್ಲದಿದ್ದರೆ ಪರದಾಟ ಆರಂಭವಾಗುತ್ತದೆ.</p><h2>ಹಿಪ್ಪರಗಿ ಬ್ಯಾರೇಜಿಗೆ ಬೇಕಿದೆ ಕಾಯಕಲ್ಪ</h2><p>ಇತ್ತೀಚೆಗೆ ಜಿಲ್ಲೆಯ ಹಿಪ್ಪರಗಿ ಬ್ಯಾರೇಜಿನ ಗೇಟ್ ಕಿತ್ತು ಹೋಗಿ, 2.4 ಟಿಎಂಸಿ ಅಡಿಯಷ್ಟು ನೀರು ಪೊಲಾಗಿ ಹೋಯಿತು. ಬ್ಯಾರೇಜ್ಗೆ ಕಾಯಕಲ್ಪ ನೀಡುವ ಕೆಲಸ ಆಗಬೇಕಿದೆ.</p><p>1972ರಲ್ಲಿ ಆರಂಭವಾದ ಹಿಪ್ಪರಗಿ ಬ್ಯಾರೇಜ್ 2002ರಲ್ಲಿ ಪೂರ್ಣಗೊಂಡಿದೆ. 2004ರಲ್ಲಿ ಮೊದಲ ಬಾರಿಗೆ ನೀರು ಸಂಗ್ರಹಿಸಲಾಯಿತು. 6 ಟಿಎಂಸಿ ಅಡಿಯಷ್ಟು ನೀರು ಸಂಗ್ರಹ ಸಾಮರ್ಥ್ಯವನ್ನು ಬ್ಯಾರೇಜ್ ಹೊಂದಿದೆ. ಇದರಲ್ಲಿ 5.20 ಟಿಎಂಸಿ ಅಡಿ ನೀರು ಬಳಕೆಗೆ ಉಪಯೋಗವಾಗುತ್ತದೆ.</p><p>ಹಿಪ್ಪರಗಿ ಬ್ಯಾರೇಜ್ನಿಂದಾಗಿ ಈ ಭಾಗದ ಜನರ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರೆತಿದೆ. ರೈತರೂ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಸಾಧ್ಯವಾಗಿದೆ.</p><p>ಬ್ಯಾರೇಜ್ ನಿರ್ಮಾಣವಾಗಿ ಎರಡೂವರೆ ದಶಕ ಕಳೆದು ಹೋಗಿರುವುದರಿಂದ ಗೇಟಿನ ಸಾಮರ್ಥ್ಯ ಪರೀಕ್ಷೆಯಾಗಬೇಕಿದೆ. ತಜ್ಞರ ವರದಿ ಪಡೆದುಕೊಂಡು ಮುಂದಿನ ದಿನಗಳಲ್ಲಿ ಗೇಟ್ಗಳಿಗೆ ಹಾನಿಯಾಗದಂತೆ ಕ್ರಮಕೈಗೊಳ್ಳಬೇಕು ಎಂಬುದು ರೈತರ ಆಗ್ರಹವಾಗಿದೆ.</p><p>ಬ್ಯಾರೇಜ್ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳ ಪ್ರಮುಖ ಸಂಪರ್ಕದ ಕೊಂಡಿಯಾಗಿದೆ. ಇದರಿಂದಾಗಿ ದಿನನಿತ್ಯ ಬ್ಯಾರೇಜ್ ಮೇಲೆ ನೂರಾರು ವಾಹನಗಳು ಸಂಚರಿಸುತ್ತಿವೆ. ಸಕ್ಕರೆ ಕಾರ್ಖಾನೆಗಳು ಆರಂಭವಾದರೆ ಕಬ್ಬು ತುಂಬಿದ ಟ್ರಕ್ ಮತ್ತು ಟ್ರ್ಯಾಕ್ಟರ್ ಓಡಾಟ ಹೆಚ್ಚಾಗುತ್ತದೆ.</p><p>ವಾಹನಗಳ ಓಡಾಟ ತಪ್ಪಿಸಲು ಬ್ಯಾರೇಜ್ ಕೆಳ ಭಾಗದಲ್ಲಿ ದಶಕಗಳ ಹಿಂದೆ ಸೇತುವೆ ನಿರ್ಮಾಣ ಕಾಮಗಾರಿ ಆರಂಭಗೊಂಡಿತ್ತು. ಈ ಕಾಮಗಾರಿ ಅರ್ಧಕ್ಕೆ ನಿಂತಿದೆ. ಅದನ್ನು ಪೂರ್ಣಗೊಳಿಸದರೆ ಬ್ಯಾರೇಜ್ ಮೇಲಿನ ವಾಹನಗಳ ಸಂಚಾರ ತಡೆಯಬಹುದು.</p> .<div><blockquote>ಜಿಲ್ಲೆಯಲ್ಲಿ 350 ಖಾಸಗಿ ಕೊಳವೆಬಾವಿಗಳನ್ನು ಗುರುತಿಸಲಾಗಿದೆ. 67 ಹಳ್ಳಿಗಳಲ್ಲಿ ನೀರಿನ ತೊಂದರೆಯಾಗಬಹುದು ಎಂದು ಅಂದಾಜಿಸಲಾಗಿದೆ</blockquote><span class="attribution">ಆಕಾಶ ವಂದೆ, ಎಂಜಿನಿಯರ್, ಗ್ರಾಮೀಣ ಕುಡಿಯುವ ನೀರಿನ ಯೋಜನೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ:</strong> ಮೇ ತಿಂಗಳು ಪೂರ್ಣವಾದರೂ ಮುಂಗಾರಿನ ಸುಳಿವಿಲ್ಲ. ಕುಡಿಯುವ ನೀರಿನ ದಾಹ ಇಂಗಿಸುವ ಕೃಷ್ಣಾ ನದಿಯ ಒಡಲು ಖಾಲಿಯಾಗಿದೆ. ಕುಡಿಯುವ ನೀರಿಗಾರಿ ಜನರು ಪರದಾಡುವಂತಾಗಿದೆ.</p><p>ಕಳೆದ ಬಾರಿ ಬೇಗನೆ ಮುಂಗಾರು ಬಂದಿತ್ತು. ಜೊತೆಗೆ ಹಿಪ್ಪರಗಿ ಬ್ಯಾರೇಜಿನಲ್ಲಿಯೂ ನೀರು ಸಂಗ್ರಹಿಸಲಾಗಿತ್ತು. ಆದರೆ, ಈ ಬಾರಿ ತೀವ್ರ ಬಿಸಿಲಿನ ಪರಿಣಾಮ ನೀರು ಖಾಲಿಯಾಗಿದೆ. ಮುಂಗಾರು ವಿಳಂಬವಾಗಿರುವುದರಿಂದ ನೀರಿನ ಸಮಸ್ಯೆ ಉಲ್ಬಣಿಸಿದೆ.</p>.PV WEB Exclusive: ಜಕ್ಕನಹಳ್ಳಿ ಸರ್ಕಲ್; ಹಲಸಿನ ಹಣ್ಣಿನ ಕಮಾಲ್.<p>ಕೃಷ್ಣಾ ನದಿಗೆ ಮಹಾರಾಷ್ಟ್ರ ರಾಜ್ಯದಿಂದ ಎರಡು ಟಿಎಂಸಿ ಅಡಿ ನೀರು ಬಿಡಿಸುವುದಾಗಿ ಹೇಳುತ್ತಿದ್ದ ಜನಪ್ರತಿನಿಧಿಗಳು ಮುಖ್ಯಮಂತ್ರಿ ಬದಲಾವಣೆ, ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಬ್ಯುಸಿಯಾಗಿದ್ದಾರೆ. ನೀರು ಬಿಡಲು ಬರೆದಿದ್ದ ರಾಜ್ಯ ಸರ್ಕಾರದ ಪತ್ರಕ್ಕೆ ಯಾವುದೇ ಸ್ಪಂದನೆ ಸಿಕ್ಕಿಲ್ಲ.</p><p>ಹಿಪ್ಪರಗಿ ಬ್ಯಾರೇಜಿನ ಗೇಟ್ ಮುರಿದು 2 ಟಿಎಂಸಿ ಅಡಿಯಷ್ಟು ನೀರು ಪೋಲಾಗಿ ಹರಿದು ಹೋಗಿದೆ. ಈಗ ಬ್ಯಾರೇಜಿನಲ್ಲಿ 0.3 ಟಿಎಂಸಿ ಅಡಿಯಷ್ಟು ಮಾತ್ರ ನೀರಿದೆ. ಬೆಳೆಗಳಿಗೆ ಹೋಗಲಿ, ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ.</p><p>ನದಿ ಪಾತ್ರದ ರೈತರು ಬೆಳೆ ಉಳಿಸಿಕೊಳ್ಳಲು ನದಿಯಲ್ಲಿ ಜೆಸಿಬಿ ಯಂತ್ರದ ಸಹಾಯದಿಂದ ಚಿಕ್ಕ, ಚಿಕ್ಕ ಗುಂಡಿ ತೆಗೆದು ನೀರು ಪಡೆಯುವುದಕ್ಕೆ ಮುಂದಾಗಿದ್ದಾರೆ. ಆ ನೀರೂ ಬೆಳೆಗಳಿಗೆ ಸಾಲುತ್ತಿಲ್ಲ. ಪ್ರಖರ ಬಿಸಿಲಿಗೆ ಕಬ್ಬು ಒಣಗಲಾರಂಭಿಸಿದೆ.</p><p>ಜಮಖಂಡಿ ತಾಲ್ಲೂಕಿನ ಹಿಪ್ಪರಗಿ ಜಲಾಶಯದಿಂದ ಚಿಕ್ಕಪಡಸಲಗಿ ಶ್ರಮ ಬಿಂದು ಸಾಗರವರೆಗೆ ಹಿಂಭಾಗದ ಎಡ ಮತ್ತು ಬಲಭಾಗದ ಶಿರಗುಪ್ಪಿ, ಮುತ್ತೂರ, ಮೈಗೂರ, ಶೂರ್ಪಾಲಿ, ಜಂಬಗಿ, ತುಬಚಿ, ಕಂಕಣವಾಡಿ, ಕಡಕೋಳ, ಟಕ್ಕಳಕಿ, ಟಕ್ಕೊಡ ಸೇರಿದಂತೆ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ನೀರಿನ ತೊಂದರೆ ಎದುರಾಗಿದೆ.</p>.Web Exclusive: ನಾಡಿನೊಳಗಿದ್ದರೂ ‘ಪರಕೀಯಾದ’ ಚಲ್ಹೇರಿ.<p>‘ಪ್ರತಿವರ್ಷ ಹಿಪ್ಪರಗಿ ಬ್ಯಾರೇಜಿನಲ್ಲಿ ನೀರಿನ ಸಂಗ್ರಹ ಇರುತ್ತಿತ್ತು. ಆದರೆ ಈ ಬಾರಿ ಬ್ಯಾರೇಜಿನ ಗೇಟು ಕಿತ್ತಿದ್ದರಿಂದ ಖಾಲಿಯಾಗಿದೆ. ಕೂಡಲೇ ಜನಪ್ರತಿನಿಧಿಗಳು ಮಹಾರಾಷ್ಟ್ರ ರಾಜ್ಯದಿಂದ ನೀರು ಬಿಡಿಸಬೇಕು’ ಎಂಬುದು ರೈತರ ಆಗ್ರಹವಾಗಿದೆ.</p><p>‘ರೈತರು ನೀರು ಬಿಡಿಸಬೇಕು ಎಂದು ಒತ್ತಾಯ ಮಾಡಿದಾಗ ಹಿಪ್ಪರಗಿ ಬ್ಯಾರೇಜಿನಿಂದ ತಿಂಗಳ ಹಿಂದೆ 0.10 ಟಿಎಂಸಿ ಅಡಿ ನೀರು ಬಿಡಲಾಗಿತ್ತು. ಆದರೆ, ಅದು ಶಿರಗುಪ್ಪಿ ಗ್ರಾಮವನ್ನೂ ದಾಟಲಿಲ್ಲ. ಪಕ್ಕದಲ್ಲಿಯೇ ನದಿ ಇದ್ದರೂ ನೀರಿಗಾಗಿ ಪರದಾಡುವಂತಾಗಿದೆ’ ಎನ್ನುತ್ತಾರೆ ರೈತ ಮುಖಂಡ ಕಲ್ಲಪ್ಪ ಬಿರಾದಾರ.</p><p>ಮಹಾರಾಷ್ಟ್ರ ರಾಜ್ಯದಿಂದ ಕೃಷ್ಣಾ ನದಿಗೆ ನೀರು ಹರಿಯದಿರುವುದರಿಂದ ಬಾಗಲಕೋಟೆ ಮಾತ್ರವಲ್ಲ ಬೆಳಗಾವಿ, ವಿಜಯಪುರ ಜಿಲ್ಲೆಯ ಹಳ್ಳಿಗಳಿಗೂ ಕುಡಿಯುವ ನೀರಿನ ತೊಂದರೆ ಎದುರಾಗಿದೆ.</p><p>‘ಮಹಾರಾಷ್ಟ್ರದ ಜಲಾಶಯಗಳಿಂದ ಕೃಷ್ಣೆಗೆ ನೀರು ಹರಿಸುವಂತೆ ಒತ್ತಾಯಿಸಲು ಸರ್ವಪಕ್ಷಗಳ ನಿಯೋಗ ಮಹಾರಾಷ್ಟ್ರ ಮುಖ್ಯಮಂತ್ರಿ ಬಳಿ ತೆಗೆದುಕೊಂಡು ಹೋಗುತ್ತೇವೆ’ ಎಂದು ಸಚಿವರು ಹೇಳುತ್ತಲೇ ಇದ್ದರು. ಆದರೆ, ಈ ವರೆಗೆ ನಿಯೋಗ ಹೋಗಿಲ್ಲ. </p>.WEB EXCLUSIVE: ಐತಿಹಾಸಿಕ ಹಂಪಿಯಲ್ಲಿ ಮತ್ತೊಮ್ಮೆ ‘ಗಜಪಯಣ‘.<p>‘ಉತ್ತರ ಕರ್ನಾಟಕದ ಜಿಲ್ಲೆಗಳ ಜನರ ಮತ್ತು ಜಾನುವಾರುಗಳ ಕುಡಿಯುವ ನೀರಿನ ಅಗತ್ಯತೆ ಪೂರೈಸುವ ದೃಷ್ಟಿಯಿಂದ ಮಹಾರಾಷ್ಟ್ರದ ಕೊಯ್ನಾ ಅಥವಾ ವಾರಣಾ ಜಲಾಶಯಗಳಿಂದ ಕೃಷ್ಣಾ ನದಿಗೆ ಮತ್ತು ಉಜ್ಜನಿ ಜಲಾಶಯದಿಂದ ಭೀಮಾ ನದಿಗೆ ತಲಾ 2 ಟಿಎಂಸಿ ಅಡಿ ನೀರು ಬಿಡುಗಡೆಗೊಳಿಸಬೇಕು’ ಎಂದು ಒತ್ತಾಯಿಸಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು, ಏಪ್ರಿಲ್ ತಿಂಗಳಿನಲ್ಲಿಯೇ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರಿಗೆ ಪತ್ರ ಬರೆದಿದ್ದಾರೆ. ಆದರೆ, ಸ್ಪಂದನೆ ಸಿಕ್ಕಿಲ್ಲ.</p><h2>17 ಕಡೆ ಖಾಸಗಿ ಕೊಳವೆಬಾವಿಗಳಿಂದ ನೀರು</h2><p> ಸರ್ಕಾರದ ವತಿಯಿಂದ ನೀರು ಪೂರೈಸಲಾಗುತ್ತಿದ್ದ ಜಲಮೂಲ ಬತ್ತಿ ಹೋಗಿರುವುದರಿಂದ ಜಿಲ್ಲೆಯ 17 ಗ್ರಾಮಗಳಿಗೆ ಖಾಸಗಿ ಕೊಳವೆಬಾವಿಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ. </p><p>ಇಳಕಲ್ ತಾಲ್ಲೂಕಿನ ಹಿರೇಕೊಡಗಲಿ, ಚಿಕ್ಕಕೊಡಗಲಿ, ಬಾದಾಮಿ ತಾಲ್ಲೂಕಿನ ಕೈನಕಟ್ಟಿ, ಗುಳೇದಗುಡ್ಡ ತಾಲ್ಲೂಕಿನ ಚಿಮ್ಮಲಗಿ, ಹಂಗರಗಿ, ಹಿರೇಬೂದಿಹಾಳ, ಜಮಖಂಡಿ ತಾಲ್ಲೂಕಿನ ಸಾವಳಗಿ, ಶಿರಗುಪ್ಪ, ತೊದಲಬಾಗಿ, ಶೂರ್ಪಾಲಿ ಮುಂತಾದೆಡೆ ಖಾಸಗಿ ಕೊಳವೆಬಾವಿಗಳಿಂದ ನೀರಿನ ದಾಹ ಇಂಗಿಸಲಾಗುತ್ತಿದೆ.</p><p>ನೀರಿನ ಕೊರತೆಯಿಂದಾಗಿ ಅರಕೇರಿ, ತೋಳಮಟ್ಟಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಸ್ಥಗಿತಗೊಂಡಿದ್ದವು. ಘಟಪ್ರಭಾ ನದಿಗೆ ನೀರು ಬಿಟ್ಟಿರುವುದರಿಂದ ಮತ್ತೇ ಚಾಲನೆಗೊಂಡಿವೆ.</p><p>ಚಿಕ್ಕಪಡಸಲಗಿ ಬ್ಯಾರೇಜ್ 25 ಹಳ್ಳಿಗಳ ಸವಳು ನೀರು ಬರುತ್ತದೆ. ಪರಿಣಾಮ ಗ್ರಾಮಗಳಲ್ಲಿ ಕೊಳವೆಬಾವಿ ಕೊರೆಯಿಸಿದರೂ ನೀರು ಬಳಕೆಗೆ ಯೋಗ್ಯವಾಗಿಲ್ಲ. ಹಾಗಾಗಿ, ಈ ಗ್ರಾಮಗಳು ನದಿ ನೀರನ್ನೇ ಅವಲಂಬಿಸಿವೆ. ನದಿಯಲ್ಲಿ ನೀರಿಲ್ಲದಿದ್ದರೆ ಪರದಾಟ ಆರಂಭವಾಗುತ್ತದೆ.</p><h2>ಹಿಪ್ಪರಗಿ ಬ್ಯಾರೇಜಿಗೆ ಬೇಕಿದೆ ಕಾಯಕಲ್ಪ</h2><p>ಇತ್ತೀಚೆಗೆ ಜಿಲ್ಲೆಯ ಹಿಪ್ಪರಗಿ ಬ್ಯಾರೇಜಿನ ಗೇಟ್ ಕಿತ್ತು ಹೋಗಿ, 2.4 ಟಿಎಂಸಿ ಅಡಿಯಷ್ಟು ನೀರು ಪೊಲಾಗಿ ಹೋಯಿತು. ಬ್ಯಾರೇಜ್ಗೆ ಕಾಯಕಲ್ಪ ನೀಡುವ ಕೆಲಸ ಆಗಬೇಕಿದೆ.</p><p>1972ರಲ್ಲಿ ಆರಂಭವಾದ ಹಿಪ್ಪರಗಿ ಬ್ಯಾರೇಜ್ 2002ರಲ್ಲಿ ಪೂರ್ಣಗೊಂಡಿದೆ. 2004ರಲ್ಲಿ ಮೊದಲ ಬಾರಿಗೆ ನೀರು ಸಂಗ್ರಹಿಸಲಾಯಿತು. 6 ಟಿಎಂಸಿ ಅಡಿಯಷ್ಟು ನೀರು ಸಂಗ್ರಹ ಸಾಮರ್ಥ್ಯವನ್ನು ಬ್ಯಾರೇಜ್ ಹೊಂದಿದೆ. ಇದರಲ್ಲಿ 5.20 ಟಿಎಂಸಿ ಅಡಿ ನೀರು ಬಳಕೆಗೆ ಉಪಯೋಗವಾಗುತ್ತದೆ.</p><p>ಹಿಪ್ಪರಗಿ ಬ್ಯಾರೇಜ್ನಿಂದಾಗಿ ಈ ಭಾಗದ ಜನರ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರೆತಿದೆ. ರೈತರೂ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಸಾಧ್ಯವಾಗಿದೆ.</p><p>ಬ್ಯಾರೇಜ್ ನಿರ್ಮಾಣವಾಗಿ ಎರಡೂವರೆ ದಶಕ ಕಳೆದು ಹೋಗಿರುವುದರಿಂದ ಗೇಟಿನ ಸಾಮರ್ಥ್ಯ ಪರೀಕ್ಷೆಯಾಗಬೇಕಿದೆ. ತಜ್ಞರ ವರದಿ ಪಡೆದುಕೊಂಡು ಮುಂದಿನ ದಿನಗಳಲ್ಲಿ ಗೇಟ್ಗಳಿಗೆ ಹಾನಿಯಾಗದಂತೆ ಕ್ರಮಕೈಗೊಳ್ಳಬೇಕು ಎಂಬುದು ರೈತರ ಆಗ್ರಹವಾಗಿದೆ.</p><p>ಬ್ಯಾರೇಜ್ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳ ಪ್ರಮುಖ ಸಂಪರ್ಕದ ಕೊಂಡಿಯಾಗಿದೆ. ಇದರಿಂದಾಗಿ ದಿನನಿತ್ಯ ಬ್ಯಾರೇಜ್ ಮೇಲೆ ನೂರಾರು ವಾಹನಗಳು ಸಂಚರಿಸುತ್ತಿವೆ. ಸಕ್ಕರೆ ಕಾರ್ಖಾನೆಗಳು ಆರಂಭವಾದರೆ ಕಬ್ಬು ತುಂಬಿದ ಟ್ರಕ್ ಮತ್ತು ಟ್ರ್ಯಾಕ್ಟರ್ ಓಡಾಟ ಹೆಚ್ಚಾಗುತ್ತದೆ.</p><p>ವಾಹನಗಳ ಓಡಾಟ ತಪ್ಪಿಸಲು ಬ್ಯಾರೇಜ್ ಕೆಳ ಭಾಗದಲ್ಲಿ ದಶಕಗಳ ಹಿಂದೆ ಸೇತುವೆ ನಿರ್ಮಾಣ ಕಾಮಗಾರಿ ಆರಂಭಗೊಂಡಿತ್ತು. ಈ ಕಾಮಗಾರಿ ಅರ್ಧಕ್ಕೆ ನಿಂತಿದೆ. ಅದನ್ನು ಪೂರ್ಣಗೊಳಿಸದರೆ ಬ್ಯಾರೇಜ್ ಮೇಲಿನ ವಾಹನಗಳ ಸಂಚಾರ ತಡೆಯಬಹುದು.</p> .<div><blockquote>ಜಿಲ್ಲೆಯಲ್ಲಿ 350 ಖಾಸಗಿ ಕೊಳವೆಬಾವಿಗಳನ್ನು ಗುರುತಿಸಲಾಗಿದೆ. 67 ಹಳ್ಳಿಗಳಲ್ಲಿ ನೀರಿನ ತೊಂದರೆಯಾಗಬಹುದು ಎಂದು ಅಂದಾಜಿಸಲಾಗಿದೆ</blockquote><span class="attribution">ಆಕಾಶ ವಂದೆ, ಎಂಜಿನಿಯರ್, ಗ್ರಾಮೀಣ ಕುಡಿಯುವ ನೀರಿನ ಯೋಜನೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>