<p><strong>ಬೆಂಗಳೂರು</strong>: ತಿರುಪತಿಯ ಪ್ರಸಿದ್ದ ಲಡ್ಡು ಸವಿಯದವರು ಯಾರಿದ್ದಾರೆ. ಅದಕ್ಕೆ ಸುದೀರ್ಘ ಇತಿಹಾಸವಿದೆ. ಲಡ್ಡುವಿನ ರುಚಿಯ ಹಿಂದಿರುವುದು ಕರ್ನಾಟಕದ ರೈತರು ಉತ್ಪಾದಿಸುವ ಹಾಲಿನಿಂದ ತಯಾರಿಸಿದ ನಂದಿನಿ ತುಪ್ಪ. ಆರು ತಿಂಗಳಿಗೆ ಸುಮಾರು 6 ಸಾವಿರ ಟನ್ ತುಪ್ಪವನ್ನು( 60 ಲಕ್ಷ ಕೆಜಿ) ತಿರುಪತಿ ತಿರುಮಲ ದೇವಸ್ಥಾನ ಸಮಿತಿ( ಟಿಟಿಡಿ) ಯವರು ಲಡ್ಡುಗೆ ಬಳಸಿದರೆ ಇದರಲ್ಲಿ ಕರ್ನಾಟಕದ ಪಾಲೇ ಶೇ 50ರಷ್ಟು. ಅಂದರೆ 3 ಸಾವಿರ ಟನ್ ತುಪ್ಪವನ್ನು ಕರ್ನಾಟಕ ಹಾಲು ಮಹಾಮಂಡಲ ವ್ಯಾಪ್ತಿಯ ಹಾಲು ಒಕ್ಕೂಟಗಳಿಂದಲೇ ಸರಬರಾಜು ಮಾಡಲಾಗುತ್ತಿದೆ.</p><p>ನಾಲ್ಕೈದು ವರ್ಷದ ಹಿಂದೆ ದರದ ಕಾರಣದಿಂದ ನಂದಿನಿ ತುಪ್ಪದ ಸರಬರಾಜು ಪ್ರಮಾಣ ಕಡಿಮೆ ಮಾಡಿ ಉತ್ತರ ಭಾರತದಿಂದ ಪಡೆಯುವುದಕ್ಕೆ ಟಿಟಿಡಿ ಚಾಲನೆ ನೀಡಿತ್ತು. ಆನಂತರ ತುಪ್ಪದ ಗುಣಮಟ್ಟದ ಕುರಿತು ಚರ್ಚೆಗಳು ಏರ್ಪಟ್ಟು ಮತ್ತೆ ನಂದಿನಿಗೆ ಟಿಟಿಡಿ ಮಣೆ ಹಾಕಿದೆ. ಇದಕ್ಕೆ ಕಾರಣ ನಂದಿನಿ ತುಪ್ಪದ ಶುದ್ದತೆ.</p><p>ಆರು ತಿಂಗಳಿನಿಂದ ಕರ್ನಾಟಕ ಸಹಕಾರ ಸಂಸ್ಥೆ ಹಾಲು ಮಹಾಮಂಡಳ(ಕೆಎಂಎಫ್) ನಂದಿನಿ ತುಪ್ಪಕ್ಕೆ ತಿರುಪತಿ ದೇವಾಲಯದಿಂದ ಹೆಚ್ಚಿನ ಬೇಡಿಕೆ ಬರುತ್ತಿದೆ. ಈಗ ಆ ಪ್ರಮಾಣ ಹೆಚ್ಚಳವಾಗುತ್ತಿದ್ದು. ನಮ್ಮ ಹಾಲು ಒಕ್ಕೂಟಗಳೇ ಸಿಂಹಪಾಲು ಪಡೆದುಕೊಂಡಿವೆ. ಮೊದಲ ಹಂತದಲ್ಲಿ ಬೆಂಗಳೂರು ಒಕ್ಕೂಟ( ಬಮುಲ್) 2 ಸಾವಿರ ಟನ್( 20 ಲಕ್ಷ ಕೆಜಿ) ತುಪ್ಪ ಒದಗಿಸುವುದಕ್ಕೆ ಶುರು ಮಾಡಿದೆ. ಕೆಎಂಎಫ್ನ ಮದರ್ ಡೇರಿ ಹಾಗೂ ಮಂಡ್ಯ, ತುಮಕೂರು ಹಾಲು ಒಕ್ಕೂಟದಿಂದಲೂ ಇನ್ನೂ 1 ಸಾವಿರ ಟನ್ ತುಪ್ಪ ಖರೀದಿ ಆದೇಶ ಸಿಗುವ ನಿರೀಕ್ಷೆಯಿದೆ.</p><p>ಟಿಟಿಡಿಗೆ ಉತ್ತರ ಭಾರತದಿಂದ ಸರಬರಾಜು ಆಗುತ್ತಿದ್ದ ತುಪ್ಪ ನಕಲಿ ಎನ್ನುವುದು ದೃಢಪಟ್ಟ ನಂತರ ತಿರುಪತಿ ಲಡ್ಡುವಿನಲ್ಲಿ ಗುಣಮಟ್ಟ ಕಾಪಾಡಿಕೊಳ್ಳಲು ನಂದಿನಿ ತುಪ್ಪವನ್ನೇ ಇನ್ನಷ್ಟು ಖರೀದಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಮೂರು ವರ್ಷದ ಸ್ಥಗಿತದ ನಂತರ ಒಂದು ವರ್ಷದಿಂದ ಕೆಎಂಎಫ್ ತಿರುಪತಿಗೆ ತುಪ್ಪ ಸರಬರಾಜು ಮಾಡುತ್ತಿದೆ. ಕಳಪೆ ತುಪ್ಪದ ಬೆಳವಣಿಗೆ ನಡುವೆ ಈ ತಿಂಗಳಿನಲ್ಲಿಯೇ ತುಪ್ಪ ಖರೀದಿ ಟೆಂಡರ್ ಪ್ರಕ್ರಿಯೆ ನಡೆಯಲಿದ್ದು, ಕೆಎಂಎಫ್ ಹೆಚ್ಚುವರಿ ತುಪ್ಪ ಸರಬರಾಜು ಮಾಡಲು ಅಣಿಯಾಗುತ್ತಿದೆ ಎನ್ನುವುದು ಕೆಎಂಎಫ್ ಅಧಿಕಾರಿಗಳು ನೀಡುವ ವಿವರಣೆ,</p><p><strong>ತಿರುಪತಿ ನಂಟು</strong></p><p>ತಿರುಪತಿ ಹಾಗೂ ಕೆಎಂಎಫ್ ನಂದಿನಿಯ ನಂಟು ಒಂದೂವರೆ ದಶಕದಿಂದಲೂ ಇದೆ. ಹಿಂದೆ ಸ್ವಲ್ಪ ಪ್ರಮಾಣದಲ್ಲಿ ನಂದಿನಿ ತುಪ್ಪವನ್ನು ತಿರುಪತಿ ದೇವಸ್ಥಾನದಿಂದ ಖರೀದಿಸಲಾಗುತ್ತಿತ್ತು. 2013ರಲ್ಲಿ ಮೊದಲ ಬಾರಿಗೆ 1700 ಟನ್ ತುಪ್ಪ ಖರೀದಿಸಿ 2016ರ ಹೊತ್ತಿಗೆ 3000 ಟನ್ಗೆ ತಲುಪಿತು. ಆನಂತರ ದರ ದುಬಾರಿ ಎನ್ನುವ ಕಾರಣ ನೀಡಿ ನಂದಿನಿ ತುಪ್ಪದ ಪ್ರಮಾಣವನ್ನು ಕಡಿಮೆ ಮಾಡುತ್ತಾ ಬರಲಾಯಿತು. 2020ರಲ್ಲಿ ಮತ್ತೆ ಪ್ರಮಾಣ ಹೆಚ್ಚಿಸಿ ವರ್ಷದ ನಂತರ ಕಡಿಮೆ ಮಾಡಲಾಯಿತು.</p><p>ಕಳೆದ ವರ್ಷದ ಸೆಪ್ಟಂಬರ್ನಲ್ಲಿ ನಂದಿನಿ ತುಪ್ಪವನ್ನೇ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಲು ಪುನಃ ಆರಂಭಿಸಲಾಯಿತು. 3000 ಟನ್ ತುಪ್ಪವನ್ನು ಸರಬರಾಜು ಮಾಡಲಾಗಿತ್ತು. ಈಗ ಹೊಸದಾಗಿ ಕರೆದ ಟೆಂಡರ್ನಲ್ಲಿ ಬೆಂಗಳೂರು ಹಾಲು ಒಕ್ಕೂಟಕ್ಕೂ 2 ಸಾವಿರ ಟನ್ ಸರಬರಾಜು ಆದೇಶ ಸಿಕ್ಕಿದೆ. ಇನ್ನೂ ಹೆಚ್ಚಿನ ಬೇಡಿಕೆ ಕೆಎಂಎಫ್ಗೆ ಬರುವ ನಿರೀಕ್ಷೆಯಿದೆ.</p><p>‘ತಿರುಪತಿಯಲ್ಲಿನ ತುಪ್ಪದ ಗುಣಮಟ್ಟದ ಕುರಿತಾಗಿ ತನಿಖೆ ನಡೆದು ನಂದಿನಿಯ ವಿಶ್ವಾಸಾರ್ಹತೆಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವರ್ಷದಲ್ಲಿ 6 ಸಾವಿರ ಟನ್ ತುಪ್ಪಕ್ಕಾಗಿ ಟಿಟಿಡಿ ಎರಡು ಬಾರಿ ಟೆಂಡರ್ ಕರೆದು ಖರೀದಿ ಮಾಡುತ್ತದೆ. ಈ ತಿಂಗಳಲ್ಲಿ ನಡೆಯುವ ಟೆಂಡರ್ನಲ್ಲಿ ನಮಗೆ ಹೆಚ್ಚುವರಿ ಬೇಡಿಕೆ ಬರಬಹುದು’ ಎಂದು ಕೆಎಂಎಫ್ನ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.</p><p><strong>ನಾನಾ ಕಡೆಯಿಂದ ಸರಬರಾಜು</strong></p><p>ಕರ್ನಾಟಕದಲ್ಲಿ ಬೆಂಗಳೂರು, ಮೈಸೂರು, ತುಮಕೂರು,ಮಂಡ್ಯ, ಹಾಸನ, ಶಿವಮೊಗ್ಗ, ವಿಜಯಪುರ ಸಹಿತ 13 ಹಾಲು ಒಕ್ಕೂಟಗಳು ನಂದಿನಿ ಉತ್ಪನ್ನಗಳನ್ನು ತಯಾರು ಮಾಡುತ್ತಿವೆ. ಇದರಲ್ಲಿ ಮಂಡ್ಯ, ತುಮಕೂರಿನಲ್ಲೂ ತುಪ್ಪದ ಘಟಕಗಳಿದ್ದು. ಅಲ್ಲಿಂದಲೂ ಹೆಚ್ಚಿನ ತುಪ್ಪವನ್ನು ತಿರುಪತಿಗೆ ಸರಬರಾಜು ಮಾಡಲಾಗುತ್ತಿದೆ. ಕಳೆದ ವರ್ಷ ಮಂಡ್ಯದ ಮನ್ಮುಲ್, ಈ ವರ್ಷದ ಆಗಸ್ಟ್ನಲ್ಲಿ ತುಮಕೂರಿನಿಂದ ನಂದಿನಿ ತುಪ್ಪವನ್ನು ಕಳುಹಿಸಲಾಗಿತ್ತು. ಆದರೆ ಬೆಂಗಳೂರಿನ ಕೆಎಂಎಫ್ ಘಟಕದಿಂದಲೇ ಹೆಚ್ಚಿನ ಪ್ರಮಾಣದ ತುಪ್ಪ ಉತ್ಪಾದಿಸಿ ತಿರುಪತಿಗೆ ಕಳುಹಿಸಲಾಗುತ್ತಿದೆ.</p><p>ಬೆಂಗಳೂರು ಹಾಲು ಒಕ್ಕೂಟವೂ ತಿರುಪತಿಗೆ ತುಪ್ಪ ಸರಬರಾಜು ಮಾಡುವ ಒಪ್ಪಂದ ಮಾಡಿಕೊಂಡಿದೆ. ಇದರ ಮೊತ್ತ ₹136 ಕೋಟಿ. ಪ್ರತಿನಿತ್ಯ 12.5 ಟನ್ ನಂತೆ ಮುಂದಿನ ಆರು ತಿಂಗಳು ತುಪ್ಪ ಸರಬರಾಜು ಆಗಲಿದೆ. ಬಮುಲ್ ಒಕ್ಕೂಟ ಟಿಟಿಡಿ ಜೊತೆ ಪ್ರತ್ಯೇಕವಾಗಿ ಒಪ್ಪಂದ ಮಾಡಿಕೊಂಡು ಈ ಸರಬರಾಜು ಮಾಡುತ್ತಿದೆ. ಗುಣಮಟ್ಟದಲ್ಲಿ, ರುಚಿಯಲ್ಲಿ ನಂದಿನಿ ತುಪ್ಪ ರಾಷ್ಟ್ರ ಮಟ್ಟದಲ್ಲಿ ಹೆಸರನ್ನು ಗಳಿಸಿದೆ ಎಂದು ತುಪ್ಪ ಸಾಗಣೆಗೆ ಬುಧವಾರ ಚಾಲನೆ ನೀಡಿದ ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ ತಿಳಿಸಿದರು.</p><p><strong>ವಿದೇಶಕ್ಕೂ ವ್ಯಾಪಿಸಿದ ನಂದಿನಿ</strong></p><p>ಕರ್ನಾಟಕ ಡೇರಿ ಅಭಿವೃದ್ದಿ ಸಂಸ್ಥೆಯಡಿ ಹಿಂದಿನಿಂದಲೂ ಕರ್ನಾಟಕದಲ್ಲಿ ಹಾಲಿನ ಉತ್ಪನ್ನಗಳ ಉತ್ಪಾದನೆ ಹಾಗೂ ಮಾರಾಟವಿದೆ. ಆದರೆ 1983ರಲ್ಲಿ ಇದನ್ನು ಕರ್ನಾಟಕ ಹಾಲು ಮಹಾಮಂಡಳ ಎನ್ನುವ ಹೆಸರಿನಡಿ ತಂದು ನಂದಿನಿ ಅಡಿ ಉತ್ಪಾದಿಸಲಾಗುತ್ತಿದೆ.</p><p>ತುಪ್ಪವೂ ನಾಲ್ಕು ದಶಕದಿಂದ ಪ್ರಮುಖ ಉತ್ಪನ್ನವೇ ಆಗಿ ಈಗ ಕರ್ನಾಟಕ ಮಾತ್ರವಲ್ಲದೇ ಉತ್ತರ ಭಾರತಕ್ಕೂ ವ್ಯಾಪ್ತಿಸಿದೆ. ಭಾರತ ಮಾತ್ರವಲ್ಲದೇ ಹೊರ ದೇಶದಲ್ಲೂ ಬೇಡಿಕೆಯಿದೆ. ದುಬೈ, ಸೌದಿ ಅರೇಬಿಯಾದಲ್ಲೂ ನಂದಿನಿ ತುಪ್ಪ ಮಾರಾಟವಾಗುತ್ತಿದ್ದು, ಆಸ್ಟ್ರೇಲಿಯಾ, ಕೆನಡಾ ದೇಶಗಳಿಗೂ ಪೂರೈಸಲು ಸಿದ್ದತೆ ಮಾಡಿಕೊಳ್ಳಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ತಿರುಪತಿಯ ಪ್ರಸಿದ್ದ ಲಡ್ಡು ಸವಿಯದವರು ಯಾರಿದ್ದಾರೆ. ಅದಕ್ಕೆ ಸುದೀರ್ಘ ಇತಿಹಾಸವಿದೆ. ಲಡ್ಡುವಿನ ರುಚಿಯ ಹಿಂದಿರುವುದು ಕರ್ನಾಟಕದ ರೈತರು ಉತ್ಪಾದಿಸುವ ಹಾಲಿನಿಂದ ತಯಾರಿಸಿದ ನಂದಿನಿ ತುಪ್ಪ. ಆರು ತಿಂಗಳಿಗೆ ಸುಮಾರು 6 ಸಾವಿರ ಟನ್ ತುಪ್ಪವನ್ನು( 60 ಲಕ್ಷ ಕೆಜಿ) ತಿರುಪತಿ ತಿರುಮಲ ದೇವಸ್ಥಾನ ಸಮಿತಿ( ಟಿಟಿಡಿ) ಯವರು ಲಡ್ಡುಗೆ ಬಳಸಿದರೆ ಇದರಲ್ಲಿ ಕರ್ನಾಟಕದ ಪಾಲೇ ಶೇ 50ರಷ್ಟು. ಅಂದರೆ 3 ಸಾವಿರ ಟನ್ ತುಪ್ಪವನ್ನು ಕರ್ನಾಟಕ ಹಾಲು ಮಹಾಮಂಡಲ ವ್ಯಾಪ್ತಿಯ ಹಾಲು ಒಕ್ಕೂಟಗಳಿಂದಲೇ ಸರಬರಾಜು ಮಾಡಲಾಗುತ್ತಿದೆ.</p><p>ನಾಲ್ಕೈದು ವರ್ಷದ ಹಿಂದೆ ದರದ ಕಾರಣದಿಂದ ನಂದಿನಿ ತುಪ್ಪದ ಸರಬರಾಜು ಪ್ರಮಾಣ ಕಡಿಮೆ ಮಾಡಿ ಉತ್ತರ ಭಾರತದಿಂದ ಪಡೆಯುವುದಕ್ಕೆ ಟಿಟಿಡಿ ಚಾಲನೆ ನೀಡಿತ್ತು. ಆನಂತರ ತುಪ್ಪದ ಗುಣಮಟ್ಟದ ಕುರಿತು ಚರ್ಚೆಗಳು ಏರ್ಪಟ್ಟು ಮತ್ತೆ ನಂದಿನಿಗೆ ಟಿಟಿಡಿ ಮಣೆ ಹಾಕಿದೆ. ಇದಕ್ಕೆ ಕಾರಣ ನಂದಿನಿ ತುಪ್ಪದ ಶುದ್ದತೆ.</p><p>ಆರು ತಿಂಗಳಿನಿಂದ ಕರ್ನಾಟಕ ಸಹಕಾರ ಸಂಸ್ಥೆ ಹಾಲು ಮಹಾಮಂಡಳ(ಕೆಎಂಎಫ್) ನಂದಿನಿ ತುಪ್ಪಕ್ಕೆ ತಿರುಪತಿ ದೇವಾಲಯದಿಂದ ಹೆಚ್ಚಿನ ಬೇಡಿಕೆ ಬರುತ್ತಿದೆ. ಈಗ ಆ ಪ್ರಮಾಣ ಹೆಚ್ಚಳವಾಗುತ್ತಿದ್ದು. ನಮ್ಮ ಹಾಲು ಒಕ್ಕೂಟಗಳೇ ಸಿಂಹಪಾಲು ಪಡೆದುಕೊಂಡಿವೆ. ಮೊದಲ ಹಂತದಲ್ಲಿ ಬೆಂಗಳೂರು ಒಕ್ಕೂಟ( ಬಮುಲ್) 2 ಸಾವಿರ ಟನ್( 20 ಲಕ್ಷ ಕೆಜಿ) ತುಪ್ಪ ಒದಗಿಸುವುದಕ್ಕೆ ಶುರು ಮಾಡಿದೆ. ಕೆಎಂಎಫ್ನ ಮದರ್ ಡೇರಿ ಹಾಗೂ ಮಂಡ್ಯ, ತುಮಕೂರು ಹಾಲು ಒಕ್ಕೂಟದಿಂದಲೂ ಇನ್ನೂ 1 ಸಾವಿರ ಟನ್ ತುಪ್ಪ ಖರೀದಿ ಆದೇಶ ಸಿಗುವ ನಿರೀಕ್ಷೆಯಿದೆ.</p><p>ಟಿಟಿಡಿಗೆ ಉತ್ತರ ಭಾರತದಿಂದ ಸರಬರಾಜು ಆಗುತ್ತಿದ್ದ ತುಪ್ಪ ನಕಲಿ ಎನ್ನುವುದು ದೃಢಪಟ್ಟ ನಂತರ ತಿರುಪತಿ ಲಡ್ಡುವಿನಲ್ಲಿ ಗುಣಮಟ್ಟ ಕಾಪಾಡಿಕೊಳ್ಳಲು ನಂದಿನಿ ತುಪ್ಪವನ್ನೇ ಇನ್ನಷ್ಟು ಖರೀದಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಮೂರು ವರ್ಷದ ಸ್ಥಗಿತದ ನಂತರ ಒಂದು ವರ್ಷದಿಂದ ಕೆಎಂಎಫ್ ತಿರುಪತಿಗೆ ತುಪ್ಪ ಸರಬರಾಜು ಮಾಡುತ್ತಿದೆ. ಕಳಪೆ ತುಪ್ಪದ ಬೆಳವಣಿಗೆ ನಡುವೆ ಈ ತಿಂಗಳಿನಲ್ಲಿಯೇ ತುಪ್ಪ ಖರೀದಿ ಟೆಂಡರ್ ಪ್ರಕ್ರಿಯೆ ನಡೆಯಲಿದ್ದು, ಕೆಎಂಎಫ್ ಹೆಚ್ಚುವರಿ ತುಪ್ಪ ಸರಬರಾಜು ಮಾಡಲು ಅಣಿಯಾಗುತ್ತಿದೆ ಎನ್ನುವುದು ಕೆಎಂಎಫ್ ಅಧಿಕಾರಿಗಳು ನೀಡುವ ವಿವರಣೆ,</p><p><strong>ತಿರುಪತಿ ನಂಟು</strong></p><p>ತಿರುಪತಿ ಹಾಗೂ ಕೆಎಂಎಫ್ ನಂದಿನಿಯ ನಂಟು ಒಂದೂವರೆ ದಶಕದಿಂದಲೂ ಇದೆ. ಹಿಂದೆ ಸ್ವಲ್ಪ ಪ್ರಮಾಣದಲ್ಲಿ ನಂದಿನಿ ತುಪ್ಪವನ್ನು ತಿರುಪತಿ ದೇವಸ್ಥಾನದಿಂದ ಖರೀದಿಸಲಾಗುತ್ತಿತ್ತು. 2013ರಲ್ಲಿ ಮೊದಲ ಬಾರಿಗೆ 1700 ಟನ್ ತುಪ್ಪ ಖರೀದಿಸಿ 2016ರ ಹೊತ್ತಿಗೆ 3000 ಟನ್ಗೆ ತಲುಪಿತು. ಆನಂತರ ದರ ದುಬಾರಿ ಎನ್ನುವ ಕಾರಣ ನೀಡಿ ನಂದಿನಿ ತುಪ್ಪದ ಪ್ರಮಾಣವನ್ನು ಕಡಿಮೆ ಮಾಡುತ್ತಾ ಬರಲಾಯಿತು. 2020ರಲ್ಲಿ ಮತ್ತೆ ಪ್ರಮಾಣ ಹೆಚ್ಚಿಸಿ ವರ್ಷದ ನಂತರ ಕಡಿಮೆ ಮಾಡಲಾಯಿತು.</p><p>ಕಳೆದ ವರ್ಷದ ಸೆಪ್ಟಂಬರ್ನಲ್ಲಿ ನಂದಿನಿ ತುಪ್ಪವನ್ನೇ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಲು ಪುನಃ ಆರಂಭಿಸಲಾಯಿತು. 3000 ಟನ್ ತುಪ್ಪವನ್ನು ಸರಬರಾಜು ಮಾಡಲಾಗಿತ್ತು. ಈಗ ಹೊಸದಾಗಿ ಕರೆದ ಟೆಂಡರ್ನಲ್ಲಿ ಬೆಂಗಳೂರು ಹಾಲು ಒಕ್ಕೂಟಕ್ಕೂ 2 ಸಾವಿರ ಟನ್ ಸರಬರಾಜು ಆದೇಶ ಸಿಕ್ಕಿದೆ. ಇನ್ನೂ ಹೆಚ್ಚಿನ ಬೇಡಿಕೆ ಕೆಎಂಎಫ್ಗೆ ಬರುವ ನಿರೀಕ್ಷೆಯಿದೆ.</p><p>‘ತಿರುಪತಿಯಲ್ಲಿನ ತುಪ್ಪದ ಗುಣಮಟ್ಟದ ಕುರಿತಾಗಿ ತನಿಖೆ ನಡೆದು ನಂದಿನಿಯ ವಿಶ್ವಾಸಾರ್ಹತೆಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವರ್ಷದಲ್ಲಿ 6 ಸಾವಿರ ಟನ್ ತುಪ್ಪಕ್ಕಾಗಿ ಟಿಟಿಡಿ ಎರಡು ಬಾರಿ ಟೆಂಡರ್ ಕರೆದು ಖರೀದಿ ಮಾಡುತ್ತದೆ. ಈ ತಿಂಗಳಲ್ಲಿ ನಡೆಯುವ ಟೆಂಡರ್ನಲ್ಲಿ ನಮಗೆ ಹೆಚ್ಚುವರಿ ಬೇಡಿಕೆ ಬರಬಹುದು’ ಎಂದು ಕೆಎಂಎಫ್ನ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.</p><p><strong>ನಾನಾ ಕಡೆಯಿಂದ ಸರಬರಾಜು</strong></p><p>ಕರ್ನಾಟಕದಲ್ಲಿ ಬೆಂಗಳೂರು, ಮೈಸೂರು, ತುಮಕೂರು,ಮಂಡ್ಯ, ಹಾಸನ, ಶಿವಮೊಗ್ಗ, ವಿಜಯಪುರ ಸಹಿತ 13 ಹಾಲು ಒಕ್ಕೂಟಗಳು ನಂದಿನಿ ಉತ್ಪನ್ನಗಳನ್ನು ತಯಾರು ಮಾಡುತ್ತಿವೆ. ಇದರಲ್ಲಿ ಮಂಡ್ಯ, ತುಮಕೂರಿನಲ್ಲೂ ತುಪ್ಪದ ಘಟಕಗಳಿದ್ದು. ಅಲ್ಲಿಂದಲೂ ಹೆಚ್ಚಿನ ತುಪ್ಪವನ್ನು ತಿರುಪತಿಗೆ ಸರಬರಾಜು ಮಾಡಲಾಗುತ್ತಿದೆ. ಕಳೆದ ವರ್ಷ ಮಂಡ್ಯದ ಮನ್ಮುಲ್, ಈ ವರ್ಷದ ಆಗಸ್ಟ್ನಲ್ಲಿ ತುಮಕೂರಿನಿಂದ ನಂದಿನಿ ತುಪ್ಪವನ್ನು ಕಳುಹಿಸಲಾಗಿತ್ತು. ಆದರೆ ಬೆಂಗಳೂರಿನ ಕೆಎಂಎಫ್ ಘಟಕದಿಂದಲೇ ಹೆಚ್ಚಿನ ಪ್ರಮಾಣದ ತುಪ್ಪ ಉತ್ಪಾದಿಸಿ ತಿರುಪತಿಗೆ ಕಳುಹಿಸಲಾಗುತ್ತಿದೆ.</p><p>ಬೆಂಗಳೂರು ಹಾಲು ಒಕ್ಕೂಟವೂ ತಿರುಪತಿಗೆ ತುಪ್ಪ ಸರಬರಾಜು ಮಾಡುವ ಒಪ್ಪಂದ ಮಾಡಿಕೊಂಡಿದೆ. ಇದರ ಮೊತ್ತ ₹136 ಕೋಟಿ. ಪ್ರತಿನಿತ್ಯ 12.5 ಟನ್ ನಂತೆ ಮುಂದಿನ ಆರು ತಿಂಗಳು ತುಪ್ಪ ಸರಬರಾಜು ಆಗಲಿದೆ. ಬಮುಲ್ ಒಕ್ಕೂಟ ಟಿಟಿಡಿ ಜೊತೆ ಪ್ರತ್ಯೇಕವಾಗಿ ಒಪ್ಪಂದ ಮಾಡಿಕೊಂಡು ಈ ಸರಬರಾಜು ಮಾಡುತ್ತಿದೆ. ಗುಣಮಟ್ಟದಲ್ಲಿ, ರುಚಿಯಲ್ಲಿ ನಂದಿನಿ ತುಪ್ಪ ರಾಷ್ಟ್ರ ಮಟ್ಟದಲ್ಲಿ ಹೆಸರನ್ನು ಗಳಿಸಿದೆ ಎಂದು ತುಪ್ಪ ಸಾಗಣೆಗೆ ಬುಧವಾರ ಚಾಲನೆ ನೀಡಿದ ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ ತಿಳಿಸಿದರು.</p><p><strong>ವಿದೇಶಕ್ಕೂ ವ್ಯಾಪಿಸಿದ ನಂದಿನಿ</strong></p><p>ಕರ್ನಾಟಕ ಡೇರಿ ಅಭಿವೃದ್ದಿ ಸಂಸ್ಥೆಯಡಿ ಹಿಂದಿನಿಂದಲೂ ಕರ್ನಾಟಕದಲ್ಲಿ ಹಾಲಿನ ಉತ್ಪನ್ನಗಳ ಉತ್ಪಾದನೆ ಹಾಗೂ ಮಾರಾಟವಿದೆ. ಆದರೆ 1983ರಲ್ಲಿ ಇದನ್ನು ಕರ್ನಾಟಕ ಹಾಲು ಮಹಾಮಂಡಳ ಎನ್ನುವ ಹೆಸರಿನಡಿ ತಂದು ನಂದಿನಿ ಅಡಿ ಉತ್ಪಾದಿಸಲಾಗುತ್ತಿದೆ.</p><p>ತುಪ್ಪವೂ ನಾಲ್ಕು ದಶಕದಿಂದ ಪ್ರಮುಖ ಉತ್ಪನ್ನವೇ ಆಗಿ ಈಗ ಕರ್ನಾಟಕ ಮಾತ್ರವಲ್ಲದೇ ಉತ್ತರ ಭಾರತಕ್ಕೂ ವ್ಯಾಪ್ತಿಸಿದೆ. ಭಾರತ ಮಾತ್ರವಲ್ಲದೇ ಹೊರ ದೇಶದಲ್ಲೂ ಬೇಡಿಕೆಯಿದೆ. ದುಬೈ, ಸೌದಿ ಅರೇಬಿಯಾದಲ್ಲೂ ನಂದಿನಿ ತುಪ್ಪ ಮಾರಾಟವಾಗುತ್ತಿದ್ದು, ಆಸ್ಟ್ರೇಲಿಯಾ, ಕೆನಡಾ ದೇಶಗಳಿಗೂ ಪೂರೈಸಲು ಸಿದ್ದತೆ ಮಾಡಿಕೊಳ್ಳಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>