<p>ವೃತ್ತ (ಸರ್ಕಲ್)ಗಳು ಎಂದ ಕೂಡಲೇ ಸಾಮಾನ್ಯವಾಗಿ ಅವು ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಇರುವವು ಎಂದು ಭಾವಿಸುತ್ತೇವೆ. ಆದರೆ ಮೈಸೂರಿನ ಪ್ರತಿಯೊಂದು ವೃತ್ತಗಳು ಇತಿಹಾಸದ ಕಥೆ ಹೇಳುತ್ತವೆ....</p><p>ಬೆಳೆದು ನಿಂತಿರುವ ಮೈಸೂರು ನಗರವೀಗ ಪ್ರವಾಸಿಗರ ಅಚ್ಚುಮೆಚ್ಚಿನ ಪ್ರದೇಶ. ಅರಮನೆ, ಚಾಮುಂಡಿ ಬೆಟ್ಟ, ಮೃಗಾಲಯದಂತಹ ಪ್ರವಾಸಿ ತಾಣಗಳನ್ನು ನೋಡುವುದರ ಜೊತೆಗೆ ಈ ನಗರದ ಸೂಕ್ಷ್ಮತೆಗಳನ್ನೂ ಅರ್ಥೈಸಿಕೊಳ್ಳಬೇಕಿದೆ. ನಾವು ಸಂಚರಿಸುವ ರಸ್ತೆಗಳು, ತಿರುವು ಪಡೆಯುವ ವೃತ್ತಗಳಲ್ಲೂ ರಾಜರ ಕಥೆಗಳಿವೆ, ಹೋರಾಟದ ಸಾಕ್ಷಿಗಳಿವೆ.</p><p>1892ರ ಕಥೆಯಿದು, ಆಗಿನ ಅರಸ 10ನೇ ಚಾಮರಾಜ ಒಡೆಯರ್ ರಸ್ತೆಗಳ ನಿರ್ಮಾಣಕ್ಕಾಗಿ ಸಮಿತಿ ರಚಿಸುತ್ತಾರೆ. ಅರಮನೆಯಲ್ಲಿ ರೂಪುರೇಷೆ ರೂಪಿಸಿ, ನಗರದಲ್ಲಿ ನೇರವಾದ ಹಾಗೂ ಎಲ್ಲಾ ಭಾಗಕ್ಕೂ ಹರಡಿಕೊಂಡಿರುವ ರಸ್ತೆಗಳು ಮತ್ತು ಆಗಿನ ಕಾಲಕ್ಕೆ ವಿಶಾಲವಾದ ವೃತ್ತಗಳ ನಿರ್ಮಾಣವಾಗುತ್ತದೆ.</p><p>1894ರಲ್ಲಿ ಅವರು ಮೃತಪಟ್ಟ ಬಳಿಕ, ಅವರ ಮಗ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪರವಾಗಿ ತಾಯಿ ಕೆಂಪನಂಜಮ್ಮಣ್ಣಿ ವಾಣಿ ವಿಲಾಸ ಸನ್ನಿಧಾನ ಅವರು ಆಡಳಿತ ನೋಡಿಕೊಂಡಿರುತ್ತಾರೆ. ಈ ವೇಳೆ ಪುಣೆಯಲ್ಲಿ 10ನೇ ಚಾಮರಾಜ ಒಡೆಯರ್ ಅವರ ಪ್ರತಿಮೆಯನ್ನು ಕೆತ್ತಿಸಿ, ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗದ ವೃತ್ತದಲ್ಲಿ ಸ್ಥಾಪನೆ ಮಾಡುತ್ತಾರೆ. ಇದು ರಾಜಸ್ಥಾನ್ ಮಾರ್ಬಲ್ ಬಳಸಿ ಇನ್ಲೇ ಶೈಲಿಯಲ್ಲಿ ನಿರ್ಮಾಣವಾಯಿತು. ಹೀಗಾಗಿ ಈ ವೃತ್ತಕ್ಕೆ ಚಾಮರಾಜ ವೃತ್ತ ಎಂಬ ಹೆಸರು ಬಂದಿದೆ.</p>.<p>ಈಗಿನ ಕೆ.ಆರ್ ವೃತ್ತವು ಹಿಂದೆ ಫೌಂಟೇನ್ ಇತ್ತು. 10ನೇ ಚಾಮರಾಜ ಒಡೆಯರ್ ಕಾಲದಲ್ಲಿ ಅವರ ಆಹ್ವಾನ ಮಣ್ಣಿಸಿ, ಬ್ರಿಟಿಸ್ ಅಧಿಕಾರಿ ಲಾರ್ಡ್ ಎಲಿಗೆಂಟ್ ಮೈಸೂರಿಗೆ ಬರುತ್ತಾರೆ. ಅವರ ನೆನಪಿನಲ್ಲಿ ಫೌಂಟೇನ್ ನಿರ್ಮಿಸಲಾಗಿತ್ತು. ನಂತರ ಅದನ್ನು ಇರ್ವಿನ್ ರಸ್ತೆಯ ಜಂಕ್ಷನ್ಗೆ ಸ್ಥಳಾಂತರಿಸಿ, ಅಲ್ಲಿಂದ ಈಗ ಮೈಸೂರು– ಬೆಂಗಳೂರು ರಸ್ತೆಯಲ್ಲಿನ ವೃತ್ತಕ್ಕೆ ಸ್ಥಳಾಂತರ ಮಾಡಲಾಯಿತು. ಆ ವೃತ್ತ ಫೌಂಟೇನ್ ವೃತ್ತವೆಂದು ಪ್ರತೀತಿಯಾಗಿದೆ. </p><p>1952ರಲ್ಲಿ ಕಾಮತ್ ಎಂಬ ಶಿಲ್ಪಿಯು ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ನಿರ್ಮಿಸುತ್ತಾರೆ. ಆ ವೃತ್ತವೇ ಕೆ.ಆರ್ ವೃತ್ತವೆಂದು ಜನಜನಿತವಾಗಿದೆ. ಈಗ ಅದು ನಗರದ ಪ್ರಮುಖ ವೃತ್ತವಾಗಿದ್ದು, ದಸರಾ ಸಮಯದಲ್ಲಿ ಜಂಬೂಸವಾರಿ ಅರಮನೆಯಿಂದ ಸಯ್ಯಾಜಿರಾವ್ ರಸ್ತೆಗೆ ತಿರುಗುವ ಮನಮೋಹಕ ದೃಶ್ಯವು ಈ ವೃತ್ತದಲ್ಲಿ ಕಾಣಸಿಗುತ್ತದೆ. ಈ ವೃತ್ತವನ್ನು ಉದ್ಘಾಟಿಸಲು ಬಂದಿದ್ದ ಸರ್.ಎಂ.ವಿಶ್ವೇಶ್ವರಯ್ಯ ಅವರು ಕೃಷ್ಣರಾಜ ಒಡೆಯರ್ ಮೇಲಿನ ಅಭಿಮಾನದಿಂದ ಬಲರಾಮ ದ್ವಾರದಿಂದ ಕೆ.ಆರ್ ವೃತ್ತಕ್ಕೆ ಬರಿಗಾಲಿನಲ್ಲಿ ಬಂದು ಪ್ರತಿಮೆ ಉದ್ಘಾಟಿಸಿದ್ದರು ಎನ್ನುತ್ತಾರೆ ಇತಿಹಾಸ ತಜ್ಞರು.</p>.<p>ಅವರ ಮೈಸೂರು ಅರಮನೆಯ ಜಯಮಾರ್ತಾಂಡ ಗೇಟ್ ಮತ್ತು ದಸರಾ ವಸ್ತುಪ್ರದರ್ಶನ ಮೈದಾನದ ಹತ್ತಿರ ಬಳಿಯ ಹಾರ್ಡಿಂಜ್ ವೃತ್ತದಲ್ಲಿ ಕೊನೆಯ ರಾಜ ಜಯಚಾಮರಾಜೇಂದ್ರ ಪ್ರತಿಮೆಯಿದೆ. </p><p>1913 ರಲ್ಲಿ ವೈಸ್ರಾಯ್ ಲಾರ್ಡ್ ಹಾರ್ಡಿಂಜ್ ಭೇಟಿಯ ನೆನಪಿಗಾಗಿ ಈ ವೃತ್ತಕ್ಕೆ ಹಾರ್ಡಿಂಜ್ ವೃತ್ತ ನಿರ್ಮಿಸಲಾಯಿತು ಮತ್ತು ನಂತರ ಜಯಚಾಮರಾಜೇಂದ್ರ ಒಡೆಯರ್ ಅವರ ಪ್ರತಿಮೆ ಸ್ಥಾಪಿಸಲಾಯಿತು. ಅರುಣ್ ಯೋಗಿರಾಜ್ ಅವರು ಈ ಪ್ರತಿಮೆ ಸ್ಥಾಪಿಸಿದರು. ಈ ರೀತಿ ಒಂದೇ ರಸ್ತೆಯ ಮೂರು ವೃತ್ತಗಳಲ್ಲಿ ಮೈಸೂರು ಆಳಿದ ಮೂವರು ರಾಜರ ಪ್ರತಿಮೆಗಳು ರಾರಾಜಿಸುತ್ತಿವೆ.</p><p>‘ಈ ಪ್ರತಿಮೆಗಳಲ್ಲಿ ತಲೆಯ ಹಿಂಬಾಗ ಗೌನ್ ರೀತಿಯ ರಚನೆ ಇದೆ. ಅವು ಬ್ರಿಟಿಷರು ಮೈಸೂರಿನ ರಾಜರಿಗೆ ನೀಡಿದ ಗ್ರಾಂಡ್ ಕಮಾಂಡರ್ ಸ್ಟಾರ್ಸ್ ಆಫ್ ಇಂಡಿಯಾ ಎಂಬ ಗೌರವದ ಸಂಕೇತವಾಗಿದ್ದು, ಟಿಪ್ಪು ನಂತರ ಬಂದ ರಾಜರಲ್ಲಿ ಇವು ಕಾಣಸಿಗುತ್ತವೆ’ ಎಂದು ಪಾರಂಪರಿಕ ತಜ್ಞ ಪ್ರೊ.ಎನ್.ಎಸ್.ರಂಗರಾಜು ತಿಳಿಸಿದರು.</p>.<p>ರಾಮಸ್ವಾಮಿ ವೃತ್ತವು ಇವುಗಳಿಗಿಂತ ಭಿನ್ನ ಕಥೆ ಹೊಂದಿದೆ. ಸ್ವಾತಂತ್ರ್ಯದ ನಂತರ ಮೈಸೂರು ಸಂಸ್ಥಾನವನ್ನು ಭಾರತೀಯ ಒಕ್ಕೂಟಕ್ಕೆ ಸೇರಿಸಿ, ಪ್ರಜಾಪ್ರಭುತ್ವ ಸರ್ಕಾರ ಸ್ಥಾಪಿಸಲು ಒತ್ತಾಯಿಸಿ ಐತಿಹಾಸಿಕ ಚಳುವಳಿ ನಡೆಯಿತು. ಇದರಲ್ಲಿದ್ದ 14 ನಾಯಕರನ್ನು ಬಂಧಿಸಿ, ಜೈಲಿಗಟ್ಟಲಾಗಿತ್ತು. ಅವರನ್ನು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿ ಮೈಸೂರಿನ ಪ್ರಮುಖ ಕಾಲೇಜಿನ ವಿದ್ಯಾರ್ಥಿಗಳು ಹೋರಾಟ ನಡೆಸಿದ್ದರು.</p><p>‘ವಿದ್ಯಾರ್ಥಿಗಳು ಹೋರಾಟ ನಡೆಸದಂತೆ ಆಗಿನ ಜಿಲ್ಲಾಧಿಕಾರಿ ತಿಳಿಸಿದರೂ ಹೋರಾಟ ಮುಂದುವರೆಯಿತು. ಆಗ ಅವರು ಗುಂಡಿನ ದಾಳಿ ನಡೆಸಿದರು. ಈ ವೇಳೆ ಗುಂಡೇಟಿಗೆ ಹಾರ್ಡ್ವಿಕ್ ಶಾಲೆಯ ರಾಮಸ್ವಾಮಿ, ಲೋಕನಾಯಕ, ರಂಗ ಎಂಬವರಿಗೆ ಗಾಯಗಳಾಗಿ ನಂತರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಹೀಗಾಗಿ ಆ ವೃತ್ತವನ್ನು ರಾಮಸ್ವಾಮಿ ವೃತ್ತ ಎಂದು ನಾಮಕರಣ ಮಾಡಲಾಯಿತು. ಈ ಬಗ್ಗೆ ಪತ್ರಗಾರ ಇಲಾಖೆಯಲ್ಲಿ ಬಹಳಷ್ಟು ದಾಖಲೆಗಳಿವೆ’ ಎನ್ನುತ್ತಾರೆ ಪಾರಂಪರಿಕ ತಜ್ಞ ಪ್ರೊ.ಎನ್.ಎಸ್.ರಂಗರಾಜು. ಇಂದಿಗೂ ಅನೇಕ ಹೋರಾಟಗಳು ಈ ವೃತ್ತದಲ್ಲೇ ನಡೆಯುತ್ತವೆ.</p><p><strong>ಪೂರಕ ಮಾಹಿತಿ: ಪ್ರೊ.ಎನ್.ಎಸ್.ರಂಗರಾಜು, ಪಾರಂಪರಿಕ ತಜ್ಞ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವೃತ್ತ (ಸರ್ಕಲ್)ಗಳು ಎಂದ ಕೂಡಲೇ ಸಾಮಾನ್ಯವಾಗಿ ಅವು ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಇರುವವು ಎಂದು ಭಾವಿಸುತ್ತೇವೆ. ಆದರೆ ಮೈಸೂರಿನ ಪ್ರತಿಯೊಂದು ವೃತ್ತಗಳು ಇತಿಹಾಸದ ಕಥೆ ಹೇಳುತ್ತವೆ....</p><p>ಬೆಳೆದು ನಿಂತಿರುವ ಮೈಸೂರು ನಗರವೀಗ ಪ್ರವಾಸಿಗರ ಅಚ್ಚುಮೆಚ್ಚಿನ ಪ್ರದೇಶ. ಅರಮನೆ, ಚಾಮುಂಡಿ ಬೆಟ್ಟ, ಮೃಗಾಲಯದಂತಹ ಪ್ರವಾಸಿ ತಾಣಗಳನ್ನು ನೋಡುವುದರ ಜೊತೆಗೆ ಈ ನಗರದ ಸೂಕ್ಷ್ಮತೆಗಳನ್ನೂ ಅರ್ಥೈಸಿಕೊಳ್ಳಬೇಕಿದೆ. ನಾವು ಸಂಚರಿಸುವ ರಸ್ತೆಗಳು, ತಿರುವು ಪಡೆಯುವ ವೃತ್ತಗಳಲ್ಲೂ ರಾಜರ ಕಥೆಗಳಿವೆ, ಹೋರಾಟದ ಸಾಕ್ಷಿಗಳಿವೆ.</p><p>1892ರ ಕಥೆಯಿದು, ಆಗಿನ ಅರಸ 10ನೇ ಚಾಮರಾಜ ಒಡೆಯರ್ ರಸ್ತೆಗಳ ನಿರ್ಮಾಣಕ್ಕಾಗಿ ಸಮಿತಿ ರಚಿಸುತ್ತಾರೆ. ಅರಮನೆಯಲ್ಲಿ ರೂಪುರೇಷೆ ರೂಪಿಸಿ, ನಗರದಲ್ಲಿ ನೇರವಾದ ಹಾಗೂ ಎಲ್ಲಾ ಭಾಗಕ್ಕೂ ಹರಡಿಕೊಂಡಿರುವ ರಸ್ತೆಗಳು ಮತ್ತು ಆಗಿನ ಕಾಲಕ್ಕೆ ವಿಶಾಲವಾದ ವೃತ್ತಗಳ ನಿರ್ಮಾಣವಾಗುತ್ತದೆ.</p><p>1894ರಲ್ಲಿ ಅವರು ಮೃತಪಟ್ಟ ಬಳಿಕ, ಅವರ ಮಗ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪರವಾಗಿ ತಾಯಿ ಕೆಂಪನಂಜಮ್ಮಣ್ಣಿ ವಾಣಿ ವಿಲಾಸ ಸನ್ನಿಧಾನ ಅವರು ಆಡಳಿತ ನೋಡಿಕೊಂಡಿರುತ್ತಾರೆ. ಈ ವೇಳೆ ಪುಣೆಯಲ್ಲಿ 10ನೇ ಚಾಮರಾಜ ಒಡೆಯರ್ ಅವರ ಪ್ರತಿಮೆಯನ್ನು ಕೆತ್ತಿಸಿ, ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗದ ವೃತ್ತದಲ್ಲಿ ಸ್ಥಾಪನೆ ಮಾಡುತ್ತಾರೆ. ಇದು ರಾಜಸ್ಥಾನ್ ಮಾರ್ಬಲ್ ಬಳಸಿ ಇನ್ಲೇ ಶೈಲಿಯಲ್ಲಿ ನಿರ್ಮಾಣವಾಯಿತು. ಹೀಗಾಗಿ ಈ ವೃತ್ತಕ್ಕೆ ಚಾಮರಾಜ ವೃತ್ತ ಎಂಬ ಹೆಸರು ಬಂದಿದೆ.</p>.<p>ಈಗಿನ ಕೆ.ಆರ್ ವೃತ್ತವು ಹಿಂದೆ ಫೌಂಟೇನ್ ಇತ್ತು. 10ನೇ ಚಾಮರಾಜ ಒಡೆಯರ್ ಕಾಲದಲ್ಲಿ ಅವರ ಆಹ್ವಾನ ಮಣ್ಣಿಸಿ, ಬ್ರಿಟಿಸ್ ಅಧಿಕಾರಿ ಲಾರ್ಡ್ ಎಲಿಗೆಂಟ್ ಮೈಸೂರಿಗೆ ಬರುತ್ತಾರೆ. ಅವರ ನೆನಪಿನಲ್ಲಿ ಫೌಂಟೇನ್ ನಿರ್ಮಿಸಲಾಗಿತ್ತು. ನಂತರ ಅದನ್ನು ಇರ್ವಿನ್ ರಸ್ತೆಯ ಜಂಕ್ಷನ್ಗೆ ಸ್ಥಳಾಂತರಿಸಿ, ಅಲ್ಲಿಂದ ಈಗ ಮೈಸೂರು– ಬೆಂಗಳೂರು ರಸ್ತೆಯಲ್ಲಿನ ವೃತ್ತಕ್ಕೆ ಸ್ಥಳಾಂತರ ಮಾಡಲಾಯಿತು. ಆ ವೃತ್ತ ಫೌಂಟೇನ್ ವೃತ್ತವೆಂದು ಪ್ರತೀತಿಯಾಗಿದೆ. </p><p>1952ರಲ್ಲಿ ಕಾಮತ್ ಎಂಬ ಶಿಲ್ಪಿಯು ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ನಿರ್ಮಿಸುತ್ತಾರೆ. ಆ ವೃತ್ತವೇ ಕೆ.ಆರ್ ವೃತ್ತವೆಂದು ಜನಜನಿತವಾಗಿದೆ. ಈಗ ಅದು ನಗರದ ಪ್ರಮುಖ ವೃತ್ತವಾಗಿದ್ದು, ದಸರಾ ಸಮಯದಲ್ಲಿ ಜಂಬೂಸವಾರಿ ಅರಮನೆಯಿಂದ ಸಯ್ಯಾಜಿರಾವ್ ರಸ್ತೆಗೆ ತಿರುಗುವ ಮನಮೋಹಕ ದೃಶ್ಯವು ಈ ವೃತ್ತದಲ್ಲಿ ಕಾಣಸಿಗುತ್ತದೆ. ಈ ವೃತ್ತವನ್ನು ಉದ್ಘಾಟಿಸಲು ಬಂದಿದ್ದ ಸರ್.ಎಂ.ವಿಶ್ವೇಶ್ವರಯ್ಯ ಅವರು ಕೃಷ್ಣರಾಜ ಒಡೆಯರ್ ಮೇಲಿನ ಅಭಿಮಾನದಿಂದ ಬಲರಾಮ ದ್ವಾರದಿಂದ ಕೆ.ಆರ್ ವೃತ್ತಕ್ಕೆ ಬರಿಗಾಲಿನಲ್ಲಿ ಬಂದು ಪ್ರತಿಮೆ ಉದ್ಘಾಟಿಸಿದ್ದರು ಎನ್ನುತ್ತಾರೆ ಇತಿಹಾಸ ತಜ್ಞರು.</p>.<p>ಅವರ ಮೈಸೂರು ಅರಮನೆಯ ಜಯಮಾರ್ತಾಂಡ ಗೇಟ್ ಮತ್ತು ದಸರಾ ವಸ್ತುಪ್ರದರ್ಶನ ಮೈದಾನದ ಹತ್ತಿರ ಬಳಿಯ ಹಾರ್ಡಿಂಜ್ ವೃತ್ತದಲ್ಲಿ ಕೊನೆಯ ರಾಜ ಜಯಚಾಮರಾಜೇಂದ್ರ ಪ್ರತಿಮೆಯಿದೆ. </p><p>1913 ರಲ್ಲಿ ವೈಸ್ರಾಯ್ ಲಾರ್ಡ್ ಹಾರ್ಡಿಂಜ್ ಭೇಟಿಯ ನೆನಪಿಗಾಗಿ ಈ ವೃತ್ತಕ್ಕೆ ಹಾರ್ಡಿಂಜ್ ವೃತ್ತ ನಿರ್ಮಿಸಲಾಯಿತು ಮತ್ತು ನಂತರ ಜಯಚಾಮರಾಜೇಂದ್ರ ಒಡೆಯರ್ ಅವರ ಪ್ರತಿಮೆ ಸ್ಥಾಪಿಸಲಾಯಿತು. ಅರುಣ್ ಯೋಗಿರಾಜ್ ಅವರು ಈ ಪ್ರತಿಮೆ ಸ್ಥಾಪಿಸಿದರು. ಈ ರೀತಿ ಒಂದೇ ರಸ್ತೆಯ ಮೂರು ವೃತ್ತಗಳಲ್ಲಿ ಮೈಸೂರು ಆಳಿದ ಮೂವರು ರಾಜರ ಪ್ರತಿಮೆಗಳು ರಾರಾಜಿಸುತ್ತಿವೆ.</p><p>‘ಈ ಪ್ರತಿಮೆಗಳಲ್ಲಿ ತಲೆಯ ಹಿಂಬಾಗ ಗೌನ್ ರೀತಿಯ ರಚನೆ ಇದೆ. ಅವು ಬ್ರಿಟಿಷರು ಮೈಸೂರಿನ ರಾಜರಿಗೆ ನೀಡಿದ ಗ್ರಾಂಡ್ ಕಮಾಂಡರ್ ಸ್ಟಾರ್ಸ್ ಆಫ್ ಇಂಡಿಯಾ ಎಂಬ ಗೌರವದ ಸಂಕೇತವಾಗಿದ್ದು, ಟಿಪ್ಪು ನಂತರ ಬಂದ ರಾಜರಲ್ಲಿ ಇವು ಕಾಣಸಿಗುತ್ತವೆ’ ಎಂದು ಪಾರಂಪರಿಕ ತಜ್ಞ ಪ್ರೊ.ಎನ್.ಎಸ್.ರಂಗರಾಜು ತಿಳಿಸಿದರು.</p>.<p>ರಾಮಸ್ವಾಮಿ ವೃತ್ತವು ಇವುಗಳಿಗಿಂತ ಭಿನ್ನ ಕಥೆ ಹೊಂದಿದೆ. ಸ್ವಾತಂತ್ರ್ಯದ ನಂತರ ಮೈಸೂರು ಸಂಸ್ಥಾನವನ್ನು ಭಾರತೀಯ ಒಕ್ಕೂಟಕ್ಕೆ ಸೇರಿಸಿ, ಪ್ರಜಾಪ್ರಭುತ್ವ ಸರ್ಕಾರ ಸ್ಥಾಪಿಸಲು ಒತ್ತಾಯಿಸಿ ಐತಿಹಾಸಿಕ ಚಳುವಳಿ ನಡೆಯಿತು. ಇದರಲ್ಲಿದ್ದ 14 ನಾಯಕರನ್ನು ಬಂಧಿಸಿ, ಜೈಲಿಗಟ್ಟಲಾಗಿತ್ತು. ಅವರನ್ನು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿ ಮೈಸೂರಿನ ಪ್ರಮುಖ ಕಾಲೇಜಿನ ವಿದ್ಯಾರ್ಥಿಗಳು ಹೋರಾಟ ನಡೆಸಿದ್ದರು.</p><p>‘ವಿದ್ಯಾರ್ಥಿಗಳು ಹೋರಾಟ ನಡೆಸದಂತೆ ಆಗಿನ ಜಿಲ್ಲಾಧಿಕಾರಿ ತಿಳಿಸಿದರೂ ಹೋರಾಟ ಮುಂದುವರೆಯಿತು. ಆಗ ಅವರು ಗುಂಡಿನ ದಾಳಿ ನಡೆಸಿದರು. ಈ ವೇಳೆ ಗುಂಡೇಟಿಗೆ ಹಾರ್ಡ್ವಿಕ್ ಶಾಲೆಯ ರಾಮಸ್ವಾಮಿ, ಲೋಕನಾಯಕ, ರಂಗ ಎಂಬವರಿಗೆ ಗಾಯಗಳಾಗಿ ನಂತರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಹೀಗಾಗಿ ಆ ವೃತ್ತವನ್ನು ರಾಮಸ್ವಾಮಿ ವೃತ್ತ ಎಂದು ನಾಮಕರಣ ಮಾಡಲಾಯಿತು. ಈ ಬಗ್ಗೆ ಪತ್ರಗಾರ ಇಲಾಖೆಯಲ್ಲಿ ಬಹಳಷ್ಟು ದಾಖಲೆಗಳಿವೆ’ ಎನ್ನುತ್ತಾರೆ ಪಾರಂಪರಿಕ ತಜ್ಞ ಪ್ರೊ.ಎನ್.ಎಸ್.ರಂಗರಾಜು. ಇಂದಿಗೂ ಅನೇಕ ಹೋರಾಟಗಳು ಈ ವೃತ್ತದಲ್ಲೇ ನಡೆಯುತ್ತವೆ.</p><p><strong>ಪೂರಕ ಮಾಹಿತಿ: ಪ್ರೊ.ಎನ್.ಎಸ್.ರಂಗರಾಜು, ಪಾರಂಪರಿಕ ತಜ್ಞ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>