<p><strong>ತುಮಕೂರು</strong>: ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿಗೆ ಕಡಿವಾಣ ಬೀಳುತ್ತಿಲ್ಲ. ಕಳೆದ ಒಂದು ವರ್ಷದಲ್ಲಿ 54 ಮಂದಿ ‘ನಕಲಿ’ಗಳನ್ನು ಆರೋಗ್ಯ ಇಲಾಖೆ ಪತ್ತೆ ಹಚ್ಚಿದೆ.</p><p>2024–25ರಲ್ಲಿ 98 ಮಂದಿ ನಕಲಿ ವೈದ್ಯರು ಪತ್ತೆಯಾಗಿದ್ದರು. 2025–26ರಲ್ಲಿ 54 ಮಂದಿಯನ್ನು ಗುರುತಿಸಲಾಗಿದೆ. ಎರಡು ವರ್ಷದಲ್ಲಿ ಪಾವಗಡದಲ್ಲಿಯೇ 75 ಜನ ನಕಲಿಗಳು ಪತ್ತೆಯಾಗಿದ್ದಾರೆ. ಗಡಿಭಾಗದಲ್ಲಿ ಇವರ ವ್ಯಾಪ್ತಿ ವಿಸ್ತಾರಗೊಳ್ಳುತ್ತಿದೆ. ಒಂದು ಗ್ರಾಮದಲ್ಲಿ ಜನರು ಎಚ್ಚೆತ್ತುಕೊಂಡು ಇಲಾಖೆಯ ಗಮನಕ್ಕೆ ತಂದರೆ ಮತ್ತೊಂದು ಹಳ್ಳಿಗೆ ಹೋಗಿ ಕ್ಲಿನಿಕ್ ತೆರೆಯುತ್ತಿದ್ದಾರೆ. ನಕಲಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಆಗುತ್ತಿಲ್ಲ.</p><p>ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದಾಗ ಅರ್ಹತೆ ಇಲ್ಲದವರು, ವೈದ್ಯಕೀಯ ಶಿಕ್ಷಣ ಪಡೆಯದವರು ಜನರಿಗೆ ಚಿಕಿತ್ಸೆ ನೀಡುತ್ತಿರುವುದು ದೃಢ ಪಟ್ಟಿದೆ. ನಕಲಿಗಳನ್ನು ಪತ್ತೆ ಹಚ್ಚುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಆದರೆ ದಂಡ ವಿಧಿಸಿ ಸುಮ್ಮನಾಗುತ್ತಿದ್ದಾರೆ. ಅವರ ವಿರುದ್ಧ ಎಫ್ಐಆರ್ ದಾಖಲಿಸುತ್ತಿಲ್ಲ. ಕಳೆದ ವರ್ಷ ಪತ್ತೆಯಾದ 54 ನಕಲಿಗಳ ಪೈಕಿ ಕನಿಷ್ಠ ಒಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿಲ್ಲ. ಇದು ಅವರ ಪಾಲಿಗೆ ವರವಾಗಿದೆ. ಯಾವುದೇ ಆತಂಕ, ಭಯವಿಲ್ಲದೆ ತಮ್ಮ ಕೆಲಸ ಮುಂದುವರಿಸುತ್ತಿದ್ದಾರೆ.</p><p>‘ವೈದ್ಯರಿಗೆ ಕಾನೂನು, ಇಲಾಖೆಯ ಭಯ ಇಲ್ಲದಂತಾಗಿದೆ. ಈ ಊರು ಬಿಟ್ಟರೆ ಮತ್ತೊಂದು ಊರು ಎಂಬ ಭಾವನೆಯಲ್ಲಿದ್ದಾರೆ. ಯಾವ ರೋಗಕ್ಕೆ ಯಾವ ಔಷಧಿ, ಮಾತ್ರೆ ನೀಡಬೇಕು ಎಂಬ ತಿಳಿವಳಿಕೆ ಇಲ್ಲದವರು ಅಮಾಯಕರ ಪ್ರಾಣಕ್ಕೆ ಕುತ್ತು ತರುತ್ತಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಪಾವಗಡ ತಾಲ್ಲೂಕು ನಾಗಲಮಡಿಕೆಯ ರಾಜಪ್ಪ ಒತ್ತಾಯಿಸಿದರು.</p><p>ಕೆಲವು ಕಡೆಗಳಲ್ಲಿ ವೈದ್ಯರು ಪ್ರಭಾವಿ ರಾಜಕಾರಣಿಗಳ ಬೆಂಬಲದಿಂದ ಕ್ಲಿನಿಕ್ ನಡೆಸುತ್ತಿದ್ದಾರೆ. ಆರೋಗ್ಯ ಇಲಾಖೆಯ ಯಾವುದೇ ನಿಯಮ ಪಾಲಿಸುತ್ತಿಲ್ಲ. ಕ್ಲಿನಿಕ್ನಲ್ಲಿ ಅಗತ್ಯ ಸೌಲಭ್ಯವೂ ಇರುವುದಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಅಗತ್ಯ ಸೇವೆ ಸಿಗುತ್ತಿಲ್ಲ. ಇದೇ ಕಾರಣಕ್ಕೆ ಜನರು ಖಾಸಗಿ ಆಸ್ಪತ್ರೆ, ಕ್ಲಿನಿಕ್ ಹುಡುಕಿಕೊಂಡು ಹೋಗುತ್ತಿದ್ದಾರೆ.</p><p>ಗ್ರಾಮೀಣ ಭಾಗದ ಜನರಿಗೆ ಪ್ರಾಥಮಿಕ ಹಂತದಲ್ಲಿಯೇ ಗುಣಮಟ್ಟದ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಆರಂಭಿಸಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇಲ್ಲಿ ವೈದ್ಯರು, ಸಿಬ್ಬಂದಿ ಇರುತ್ತಿಲ್ಲ. ಸಕಾಲಕ್ಕೆ ಯಾವುದೇ ಚಿಕಿತ್ಸೆ ಸಿಗುತ್ತಿಲ್ಲ. ಇದರಿಂದ ಬೇಸತ್ತ ಸಾರ್ವಜನಿಕರು ಕ್ಲಿನಿಕ್ ಆಶ್ರಯಿಸುತ್ತಿದ್ದಾರೆ.</p><p><strong>5 ಕ್ಲಿನಿಕ್ ಬಂದ್</strong></p><p>ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ಕೆಪಿಎಂಇ) ಕಾಯ್ದೆ ಉಲ್ಲಂಘಿಸಿದ ಕ್ಲಿನಿಕ್ಗಳ ಮೇಲೆ ದಾಳಿ ನಡೆಸಿ, ಅವುಗಳಿಗೆ ಬೀಗ ಹಾಕಿಸಲಾಗುತ್ತಿದೆ.</p><p>ಕೆಪಿಎಂಇ ಕಾಯ್ದೆಯಡಿ ನೋಂದಣಿಯಾಗದ, ಪರವಾನಗಿ ನವೀಕರಣ ಮಾಡಿಸದ ಕ್ಲಿನಿಕ್ಗಳ ವಿರುದ್ಧ ಕ್ರಮಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ 5 ಕ್ಲಿನಿಕ್ ಮುಚ್ಚಿಸಿ, ₹1.50 ಲಕ್ಷ ದಂಡ ವಿಧಿಸಲಾಗಿದೆ.</p>.<div><blockquote>ಕೆಪಿಎಂಇ ಕಾಯ್ದೆ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ನಕಲಿ ವೈದ್ಯರನ್ನು ಪತ್ತೆ ಹಚ್ಚುವ ಕಾರ್ಯವೂ ನಿರಂತರವಾಗಿ ನಡೆಯುತ್ತಿದೆ.</blockquote><span class="attribution">- ಡಾ.ಬಿ.ಎಂ.ಚಂದ್ರಶೇಖರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ</span></div>.<p>ತುಮಕೂರು ನಗರದ ಗಂಗಸಂದ್ರ ವೃತ್ತದ ರುತ್ವಿಕ್ ಮತ್ತು ಮೆಡಿಕಲ್ಸ್ ಕ್ಲಿನಿಕ್, ಗೂಳೂರು ಕೆರೆ ಬಳಿಯ ‘DAR-AL-HAYAT REHAB CENTER’, ಬೆಳ್ಳಾವಿ ಕ್ರಾಸ್ ಹತ್ತಿರದ ಸ್ನೇಹಾ ಕ್ಲಿನಿಕ್, ಗುಬ್ಬಿ ಕೊಂಡ್ಲಿ ಕ್ರಾಸ್ನ ಸಪ್ತಗಿರಿ ಕ್ಲಿನಿಕ್, ಗುಬ್ಬಿ ಕೆ.ಜಿ.ಟೆಂಪಲ್ನ ಎಸ್ಆರ್ಎಸ್ ಕ್ಲಿನಿಕ್ ಮುಚ್ಚಿಸಲಾಗಿದೆ.</p><p>ನಗರದ ಎಸ್ಎಸ್ಐಟಿ ಬಳಿಯ ವಿಘ್ನೇಶ್ವರ ಕ್ಲಿನಿಕ್, ಯಲ್ಲಾಪುರದ ಯಲ್ಲಾಪುರ ಕ್ಲಿನಿಕ್ಗೆ ತಲಾ ₹50 ಸಾವಿರ ದಂಡ ವಿಧಿಸಲಾಗಿದೆ. ನೋಂದಣಿಯಾಗದ ಮತ್ತು ಪರವಾನಗಿ ನವೀಕರಣ ಮಾಡಿಸದವರಿಗೆ ಆರೋಗ್ಯ ಇಲಾಖೆಯಿಂದ 3 ಬಾರಿ ನೋಟಿಸ್ ಜಾರಿ ಮಾಡಲಾಗುತ್ತದೆ. ನಂತರ ಕುಂದುಕೊರತೆ ಸಭೆಯಲ್ಲಿ ಚರ್ಚಿಸಿ, ದಂಡ ವಿಧಿಸಿ ಮುಚ್ಚಿಸಲು ಕ್ರಮ ವಹಿಸಲಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು</strong>: ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿಗೆ ಕಡಿವಾಣ ಬೀಳುತ್ತಿಲ್ಲ. ಕಳೆದ ಒಂದು ವರ್ಷದಲ್ಲಿ 54 ಮಂದಿ ‘ನಕಲಿ’ಗಳನ್ನು ಆರೋಗ್ಯ ಇಲಾಖೆ ಪತ್ತೆ ಹಚ್ಚಿದೆ.</p><p>2024–25ರಲ್ಲಿ 98 ಮಂದಿ ನಕಲಿ ವೈದ್ಯರು ಪತ್ತೆಯಾಗಿದ್ದರು. 2025–26ರಲ್ಲಿ 54 ಮಂದಿಯನ್ನು ಗುರುತಿಸಲಾಗಿದೆ. ಎರಡು ವರ್ಷದಲ್ಲಿ ಪಾವಗಡದಲ್ಲಿಯೇ 75 ಜನ ನಕಲಿಗಳು ಪತ್ತೆಯಾಗಿದ್ದಾರೆ. ಗಡಿಭಾಗದಲ್ಲಿ ಇವರ ವ್ಯಾಪ್ತಿ ವಿಸ್ತಾರಗೊಳ್ಳುತ್ತಿದೆ. ಒಂದು ಗ್ರಾಮದಲ್ಲಿ ಜನರು ಎಚ್ಚೆತ್ತುಕೊಂಡು ಇಲಾಖೆಯ ಗಮನಕ್ಕೆ ತಂದರೆ ಮತ್ತೊಂದು ಹಳ್ಳಿಗೆ ಹೋಗಿ ಕ್ಲಿನಿಕ್ ತೆರೆಯುತ್ತಿದ್ದಾರೆ. ನಕಲಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಆಗುತ್ತಿಲ್ಲ.</p><p>ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದಾಗ ಅರ್ಹತೆ ಇಲ್ಲದವರು, ವೈದ್ಯಕೀಯ ಶಿಕ್ಷಣ ಪಡೆಯದವರು ಜನರಿಗೆ ಚಿಕಿತ್ಸೆ ನೀಡುತ್ತಿರುವುದು ದೃಢ ಪಟ್ಟಿದೆ. ನಕಲಿಗಳನ್ನು ಪತ್ತೆ ಹಚ್ಚುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಆದರೆ ದಂಡ ವಿಧಿಸಿ ಸುಮ್ಮನಾಗುತ್ತಿದ್ದಾರೆ. ಅವರ ವಿರುದ್ಧ ಎಫ್ಐಆರ್ ದಾಖಲಿಸುತ್ತಿಲ್ಲ. ಕಳೆದ ವರ್ಷ ಪತ್ತೆಯಾದ 54 ನಕಲಿಗಳ ಪೈಕಿ ಕನಿಷ್ಠ ಒಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿಲ್ಲ. ಇದು ಅವರ ಪಾಲಿಗೆ ವರವಾಗಿದೆ. ಯಾವುದೇ ಆತಂಕ, ಭಯವಿಲ್ಲದೆ ತಮ್ಮ ಕೆಲಸ ಮುಂದುವರಿಸುತ್ತಿದ್ದಾರೆ.</p><p>‘ವೈದ್ಯರಿಗೆ ಕಾನೂನು, ಇಲಾಖೆಯ ಭಯ ಇಲ್ಲದಂತಾಗಿದೆ. ಈ ಊರು ಬಿಟ್ಟರೆ ಮತ್ತೊಂದು ಊರು ಎಂಬ ಭಾವನೆಯಲ್ಲಿದ್ದಾರೆ. ಯಾವ ರೋಗಕ್ಕೆ ಯಾವ ಔಷಧಿ, ಮಾತ್ರೆ ನೀಡಬೇಕು ಎಂಬ ತಿಳಿವಳಿಕೆ ಇಲ್ಲದವರು ಅಮಾಯಕರ ಪ್ರಾಣಕ್ಕೆ ಕುತ್ತು ತರುತ್ತಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಪಾವಗಡ ತಾಲ್ಲೂಕು ನಾಗಲಮಡಿಕೆಯ ರಾಜಪ್ಪ ಒತ್ತಾಯಿಸಿದರು.</p><p>ಕೆಲವು ಕಡೆಗಳಲ್ಲಿ ವೈದ್ಯರು ಪ್ರಭಾವಿ ರಾಜಕಾರಣಿಗಳ ಬೆಂಬಲದಿಂದ ಕ್ಲಿನಿಕ್ ನಡೆಸುತ್ತಿದ್ದಾರೆ. ಆರೋಗ್ಯ ಇಲಾಖೆಯ ಯಾವುದೇ ನಿಯಮ ಪಾಲಿಸುತ್ತಿಲ್ಲ. ಕ್ಲಿನಿಕ್ನಲ್ಲಿ ಅಗತ್ಯ ಸೌಲಭ್ಯವೂ ಇರುವುದಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಅಗತ್ಯ ಸೇವೆ ಸಿಗುತ್ತಿಲ್ಲ. ಇದೇ ಕಾರಣಕ್ಕೆ ಜನರು ಖಾಸಗಿ ಆಸ್ಪತ್ರೆ, ಕ್ಲಿನಿಕ್ ಹುಡುಕಿಕೊಂಡು ಹೋಗುತ್ತಿದ್ದಾರೆ.</p><p>ಗ್ರಾಮೀಣ ಭಾಗದ ಜನರಿಗೆ ಪ್ರಾಥಮಿಕ ಹಂತದಲ್ಲಿಯೇ ಗುಣಮಟ್ಟದ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಆರಂಭಿಸಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇಲ್ಲಿ ವೈದ್ಯರು, ಸಿಬ್ಬಂದಿ ಇರುತ್ತಿಲ್ಲ. ಸಕಾಲಕ್ಕೆ ಯಾವುದೇ ಚಿಕಿತ್ಸೆ ಸಿಗುತ್ತಿಲ್ಲ. ಇದರಿಂದ ಬೇಸತ್ತ ಸಾರ್ವಜನಿಕರು ಕ್ಲಿನಿಕ್ ಆಶ್ರಯಿಸುತ್ತಿದ್ದಾರೆ.</p><p><strong>5 ಕ್ಲಿನಿಕ್ ಬಂದ್</strong></p><p>ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ಕೆಪಿಎಂಇ) ಕಾಯ್ದೆ ಉಲ್ಲಂಘಿಸಿದ ಕ್ಲಿನಿಕ್ಗಳ ಮೇಲೆ ದಾಳಿ ನಡೆಸಿ, ಅವುಗಳಿಗೆ ಬೀಗ ಹಾಕಿಸಲಾಗುತ್ತಿದೆ.</p><p>ಕೆಪಿಎಂಇ ಕಾಯ್ದೆಯಡಿ ನೋಂದಣಿಯಾಗದ, ಪರವಾನಗಿ ನವೀಕರಣ ಮಾಡಿಸದ ಕ್ಲಿನಿಕ್ಗಳ ವಿರುದ್ಧ ಕ್ರಮಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ 5 ಕ್ಲಿನಿಕ್ ಮುಚ್ಚಿಸಿ, ₹1.50 ಲಕ್ಷ ದಂಡ ವಿಧಿಸಲಾಗಿದೆ.</p>.<div><blockquote>ಕೆಪಿಎಂಇ ಕಾಯ್ದೆ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ನಕಲಿ ವೈದ್ಯರನ್ನು ಪತ್ತೆ ಹಚ್ಚುವ ಕಾರ್ಯವೂ ನಿರಂತರವಾಗಿ ನಡೆಯುತ್ತಿದೆ.</blockquote><span class="attribution">- ಡಾ.ಬಿ.ಎಂ.ಚಂದ್ರಶೇಖರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ</span></div>.<p>ತುಮಕೂರು ನಗರದ ಗಂಗಸಂದ್ರ ವೃತ್ತದ ರುತ್ವಿಕ್ ಮತ್ತು ಮೆಡಿಕಲ್ಸ್ ಕ್ಲಿನಿಕ್, ಗೂಳೂರು ಕೆರೆ ಬಳಿಯ ‘DAR-AL-HAYAT REHAB CENTER’, ಬೆಳ್ಳಾವಿ ಕ್ರಾಸ್ ಹತ್ತಿರದ ಸ್ನೇಹಾ ಕ್ಲಿನಿಕ್, ಗುಬ್ಬಿ ಕೊಂಡ್ಲಿ ಕ್ರಾಸ್ನ ಸಪ್ತಗಿರಿ ಕ್ಲಿನಿಕ್, ಗುಬ್ಬಿ ಕೆ.ಜಿ.ಟೆಂಪಲ್ನ ಎಸ್ಆರ್ಎಸ್ ಕ್ಲಿನಿಕ್ ಮುಚ್ಚಿಸಲಾಗಿದೆ.</p><p>ನಗರದ ಎಸ್ಎಸ್ಐಟಿ ಬಳಿಯ ವಿಘ್ನೇಶ್ವರ ಕ್ಲಿನಿಕ್, ಯಲ್ಲಾಪುರದ ಯಲ್ಲಾಪುರ ಕ್ಲಿನಿಕ್ಗೆ ತಲಾ ₹50 ಸಾವಿರ ದಂಡ ವಿಧಿಸಲಾಗಿದೆ. ನೋಂದಣಿಯಾಗದ ಮತ್ತು ಪರವಾನಗಿ ನವೀಕರಣ ಮಾಡಿಸದವರಿಗೆ ಆರೋಗ್ಯ ಇಲಾಖೆಯಿಂದ 3 ಬಾರಿ ನೋಟಿಸ್ ಜಾರಿ ಮಾಡಲಾಗುತ್ತದೆ. ನಂತರ ಕುಂದುಕೊರತೆ ಸಭೆಯಲ್ಲಿ ಚರ್ಚಿಸಿ, ದಂಡ ವಿಧಿಸಿ ಮುಚ್ಚಿಸಲು ಕ್ರಮ ವಹಿಸಲಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>