<p><strong>ಮೈಸೂರು:</strong> ಅರಮನೆಯಲ್ಲಿ ನಗರಿಯಲ್ಲೊಂದು ನದಿಯೊಂದು ಹರಿದಿತ್ತೆ? ಹೀಗೊಂದು ಪ್ರಶ್ನೆಯನ್ನು ಜಲತಜ್ಞರಿಗೆ ಕೇಳಿದರೆ, ಹೌದು ಎನ್ನುತ್ತಾರೆ!</p>.<p>ಇದು ಮಂದಗಾಮಿಯಾಗಿ ಹರಿಯುತ್ತಿರುವ ‘ಎಣ್ಣೆಹೊಳೆ’ಯ ಕಥನ. ಇಲವಾಲದ ಎತ್ತರ ಪ್ರದೇಶದಲ್ಲಿ ಹುಟ್ಟಿ 45 ಕಿ.ಮೀ ಹರಿದು ಕಬಿನಿ ನದಿಯ ಉಪನದಿಯಾಗಿ ಸೇರುವ ಹೊಳೆಯೊಂದರ ಹಾಡು. </p>.<p>ಪ್ರವಾಸಿಗರನ್ನು ಸೆಳೆಯುವ ಪಾರಂಪರಿಕ ನಗರಿಯ ಕೆರೆಜಾಲವನ್ನು ನೋಡಿದರೆ ಎಣ್ಣೆಹೊಳೆಯ ಹರಿವನ್ನು ತಡೆದು ‘ಜಲನಿಧಿ’ಗಳನ್ನು ಸೃಷ್ಟಿಸಿ ನಂದನವನ ಆಗು ಮಾಡಿದ ಹಿರಿಯರನ್ನು ನೆನೆಯಬೇಕೆನ್ನಿಸುತ್ತದೆ.</p>.<p>ಕುಕ್ಕರಹಳ್ಳಿ–ಮಳಲವಾಡಿ ಕೆರೆ, ಮಾದಗಳ್ಳಿ– ಲಿಂಗಾಂಬುಧಿ ಕೆರೆ, ನಾಗವಾಲ– ಹುಯಿಲಾಳು– ಮೂಗನಹುಂಡಿ ಕೆರೆ, ಕಾರಂಜಿ ಕೆರೆ– ದೊಡ್ಡಕೆರೆ– ದಳವಾಯಿ ಕೆರೆ ಜಾಲಗಳಲ್ಲಿ ತಣ್ಣಗೆ ಎಣ್ಣೆಹೊಳೆ ಹರಿಯುತ್ತಿದೆ. ಇದು ಮೈಸೂರಿಗರಿಗೆ ಗೊತ್ತಿಲ್ಲ. ಮೈಸೂರನ್ನು ‘ವೆನಿಸ್’, ‘ಜಿನಿವಾ’ ಮಾಡುವ ಅವಕಾಶ ಏನಾದರೂ ಇದೆಯೇ ಎಂಬ ಕನಸೇನಾದರೂ ಎಂಜಿನಿಯರ್ಗಳಿಗೆ ಬಿದ್ದರೆ, ಖಂಡಿತ ಈ ನದಿಯತ್ತ ಬಂದು ನೋಡಬಹುದು. ನದಿ ಹಾದಿಗುಂಟ ನಡೆಯಬಹುದು. </p>.<p>ದಿಗಂತ ಕಾಣುವುದಿಲ್ಲ: ಎಣ್ಣೆಹೊಳೆಯ ದರ್ಶನ ಸಿಗಬೇಕಾದರೆ, ದಕ್ಷಿಣ ಭಾಗದಲ್ಲಿರುವ ಸಿಂಧುವಳ್ಳಿ– ಕಳಲವಾಡಿ ಗ್ರಾಮಗಳ ಬಳಿ ಬರಬೇಕು. ಈ ‘ಎಣ್ಣೆಹೊಳೆ’ಗೆ ಅಡ್ಡಲಾಗಿ ಬಹು ಎತ್ತರದ ಒಡ್ಡು ನಿರ್ಮಿಸಲಾಗಿದೆ. ಅದರಿಂದ ಉಂಟಾಗಿರುವ ‘ರಾಯನ ಕೆರೆ’ ಎಂಬ ಜಲನಿಧಿಯ ನಯನ ಮನೋಹರ ದೃಶ್ಯವನ್ನು ಕಣ್ತುಂಬಿಕೊಳ್ಳಬೇಕು. ಅದರಲ್ಲೂ ಸಂಜೆ ವೇಳೆ ನೀವೊಮ್ಮೆ ನೋಡಿ ಬರಬೇಕು. ಅಗಾಧ ಜಲರಾಶಿ ಹೊಂದಿರುವ ಈ ಕೆರೆಯ ಏರಿಯಿಂದ ಪಶ್ಚಿಮದ ಕಡೆ ಕಣ್ಣು ಹಾಯಿಸಿದರೆ ದಿಗಂತ ಕಾಣುವುದೇ ಇಲ್ಲ. </p>.<p>45 ಕಿ.ಮೀ ಉದ್ದದ ಹೊಳೆ: ಕೂರ್ಗಳ್ಳಿ, ಇಲವಾಲದ ಎತ್ತರ ಪ್ರದೇಶದಲ್ಲಿ ಹುಟ್ಟುವ ಹೊಳೆಯ ಹಾದಿ ಬರೊಬ್ಬರಿ 45 ಕಿ.ಮೀ! ನಂಜನಗೂಡು ತಾಲ್ಲೂಕಿನ ಇಮ್ಮಾವು ಗ್ರಾಮದ ಬಳಿ ಕಬಿನಿ ನದಿ ಸೇರುತ್ತದೆ. ಮೈಸೂರಿನಿಂದ ನಂಜನಗೂಡಿಗೆ ಹೋಗುವವರು ಕಡಕೊಳ ಗ್ರಾಮಕ್ಕೂ ಮೊದಲು ಈ ಹೊಳೆಗೆ ಸೇತುವೆ ಕಟ್ಟಿರುವುದನ್ನು ಗಮನಿಸಿದರೆ ವರ್ಷವಿಡೀ ಹರಿಯುವ ಹೊಳೆಯನ್ನು ಕಣ್ತುಂಬಿಕೊಳ್ಳಬಹುದು. ಇಡೀ ಮೈಸೂರು ತಾಲ್ಲೂಕಿನ ದಕ್ಷಿಣ ಭಾಗಕ್ಕೆ ಅಂತರ್ಜಲದ ಗಣಿಯಾಗಿರುವ ಹೊಳೆಯ ಕೆರೆ ಜಾಲವನ್ನು ಹುಡುಕುತ್ತಾ ಹೋಗುವುದೇ ಒಂದು ವಿಸ್ಮಯ. </p>.<p>ರಾಯನಕೆರೆ ಎಂಬ ಜಲನಿಧಿ: ಬೇಸಿಗೆಯಲ್ಲೂ ನೀರು ಬತ್ತದ ಕೆರೆಯ ವಿಸ್ತೀರ್ಣ 181.39 ಎಕರೆ ಎಂದು ‘ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ’ಯು (ಇಎಂಪಿಆರ್ಐ) ಹಲವು ವರ್ಷಗಳ ಹಿಂದೆಯೇ ಸಲ್ಲಿಸಿರುವ ವರದಿಯಲ್ಲಿ (ಮೈಸೂರು-ನಂಜನಗೂಡು ಯೋಜನಾ ಪ್ರದೇಶದಲ್ಲಿ ಜಲಮೂಲಗಳ ಸುಸ್ಥಿರ ಸಂರಕ್ಷಣೆಗೆ ಕಾರ್ಯತಂತ್ರ) ಗುರುತಿಸಿದೆ. ಅಲ್ಲದೇ ಕೆರೆಯ ಸರ್ವೆ ಸಂಖ್ಯೆ 22 ಎಂದೂ ಹೇಳಿದೆ. ಕೆರೆಯ ಒಂದು ದಿಕ್ಕಿನಲ್ಲಿ ಹಾದು ಹೋದರೆ ಬಳಸಿ ಬರಲು 8 ಕಿ.ಮೀ ನಡೆಯಬೇಕಾಗುತ್ತದೆ. ಅಂದರೆ ಕುಕ್ಕರಹಳ್ಳಿ ಕೆರೆಯ ಎರಡೂವರೆ ಪಟ್ಟು ದೊಡ್ಡದಾಗಿದೆ. </p>.<p>ಕೆರೆಯ ಉತ್ತರಕ್ಕಿರುವ ರಾಯನಕೆರೆ ಗ್ರಾಮದ ಬಳಿ ತ್ಯಾಜ್ಯ ನೀರು ಸಂಸ್ಕರಣ ಘಟಕವಿದ್ದು, ಅಲ್ಲಿಂದ ಬರುವ ಚರಂಡಿ ನೀರು ಇಲ್ಲಿಗೆ ಹರಿದು ಬರುತ್ತಿದೆ. ಕೆರೆಯ ಪಕ್ಕದಲ್ಲಿಯೇ ಸಿಂಧುವಳ್ಳಿ ಗ್ರಾಮದ ಸುಬೇದಾರ್ ವೀರಣ್ಣ ಕೆರೆಯೂ ಇದೆ. ಕಾಲುವೆಗಳಿಂದ ನೀರನ್ನು ತೆಂಗಿನ ತೋಟಗಳು, ಭತ್ತದ ಗದ್ದೆಗಳಿಗೆ ಹರಿಸಲಾಗುತ್ತಿದೆ. ಕೆರೆಯ ವಾಯುವ್ಯ ಭಾಗದಲ್ಲಿ ಒತ್ತುವರಿಯೂ ನಡೆದಿದೆ. </p>.<p>ಆಗದಿರಲಿ ವೃಷಭಾವತಿ! </p>.<p>ಅವೈಜ್ಞಾನಿಕವಾಗಿ ಪರಿಸರ ಕೇಂದ್ರಿತ ಅಭಿವೃದ್ಧಿ ಇಲ್ಲದ್ದರಿಂದಲೇ ಬೆಂಗಳೂರಿನ ‘ವೃಷಭಾವತಿ’ ಎಂಬ ಜೀವನದಿ ಚರಂಡಿಯಾಗಿ ಬದಲಾಗಿರುವುದು ಕಣ್ಣ ಮುಂದಿದೆ. ಎಣ್ಳೆಹೊಳೆಗೂ ಇದೇ ಪರಿಸ್ಥಿತಿ ಬರಲಿದೆ. ಮೈಸೂರು ಬೃಹತ್ ಆಗುತ್ತಿದೆ. ಈ ನದಿಯ ಕೆರೆ ಜಾಲವನ್ನು ಚರಂಡಿ ನೀರಿನ ತೊಟ್ಟಿಗಳಾಗಿ ಮಾಡಿದರೆ, ಕಡಕೊಳ ಗ್ರಾಮವು ‘ಕೆಂಗೇರಿ’ ಮೋರಿ ಆಗುತ್ತದೆ ಎನ್ನುತ್ತಾರೆ ಜಲತಜ್ಞ ಯು.ಎನ್.ರವಿಕುಮಾರ್. </p>.<p>‘ಮೈಸೂರು– ಮಾನಂದವಾಡಿ ರಸ್ತೆಯ ಪರಸಯ್ಯನಹುಂಡಿಯಿಂದ ಎಡಕ್ಕೆ ತಿರುಗಿ ಎಣ್ಣೆಹೊಳೆ ಹಾದು ಹೋಗಿರುವ ತೋಟಗಳಲ್ಲಿ ನೀವೊಮ್ಮೆ ಹಾದು ಹೋದರೆ ಸಾಕು, ಸರಸ್ವತಿಪುರಂ, ಕುವೆಂಪುನಗರ, ಶ್ರೀರಾಂಪುರ, ರಾಮಕೃಷ್ಣನಗರ, ವಿಜಯನಗರ ಸೇರಿದಂತೆ ಇಡೀ ಮೈಸೂರಿನ ದಕ್ಷಿಣ ಹಾಗೂ ಪಶ್ಚಿಮದ ಚರಂಡಿ ನೀರು ಕಪ್ಪು ಬಣ್ಣದಲ್ಲಿ ಹರಿಯುತ್ತಿದೆ. ಅದು ಎಣ್ಣೆ ಹೊಳೆ ಒಡಲನ್ನು ಸೇರುತ್ತಿರುವುದು ನಮಗೆ ಎಚ್ಚರಿಕೆ ಗಂಟೆ ಆಗಬೇಕಿದೆ. ನಗರದೊಳಗೆ ಈ ಮಾದರಿಯ ನದಿಯೊಂದೇನಾದರೂ ಪಾಶ್ಚಾತ್ಯ ದೇಶಗಳಲ್ಲಿ ಇದ್ದರೆ, ಅದು ವೆನಿಸ್, ಜಿನಿವಾ ಆಗಿಬಿಡುತ್ತಿತ್ತು. ‘ಎಣ್ಣೆಹೊಳೆ’ ರಕ್ಷಣೆ; ಕೆರೆ ಜಾಲದ ಸಂರಕ್ಷಣೆಯೇ ಆಗಿದೆ’ ಎನ್ನುತ್ತಾರೆ ಅವರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಅರಮನೆಯಲ್ಲಿ ನಗರಿಯಲ್ಲೊಂದು ನದಿಯೊಂದು ಹರಿದಿತ್ತೆ? ಹೀಗೊಂದು ಪ್ರಶ್ನೆಯನ್ನು ಜಲತಜ್ಞರಿಗೆ ಕೇಳಿದರೆ, ಹೌದು ಎನ್ನುತ್ತಾರೆ!</p>.<p>ಇದು ಮಂದಗಾಮಿಯಾಗಿ ಹರಿಯುತ್ತಿರುವ ‘ಎಣ್ಣೆಹೊಳೆ’ಯ ಕಥನ. ಇಲವಾಲದ ಎತ್ತರ ಪ್ರದೇಶದಲ್ಲಿ ಹುಟ್ಟಿ 45 ಕಿ.ಮೀ ಹರಿದು ಕಬಿನಿ ನದಿಯ ಉಪನದಿಯಾಗಿ ಸೇರುವ ಹೊಳೆಯೊಂದರ ಹಾಡು. </p>.<p>ಪ್ರವಾಸಿಗರನ್ನು ಸೆಳೆಯುವ ಪಾರಂಪರಿಕ ನಗರಿಯ ಕೆರೆಜಾಲವನ್ನು ನೋಡಿದರೆ ಎಣ್ಣೆಹೊಳೆಯ ಹರಿವನ್ನು ತಡೆದು ‘ಜಲನಿಧಿ’ಗಳನ್ನು ಸೃಷ್ಟಿಸಿ ನಂದನವನ ಆಗು ಮಾಡಿದ ಹಿರಿಯರನ್ನು ನೆನೆಯಬೇಕೆನ್ನಿಸುತ್ತದೆ.</p>.<p>ಕುಕ್ಕರಹಳ್ಳಿ–ಮಳಲವಾಡಿ ಕೆರೆ, ಮಾದಗಳ್ಳಿ– ಲಿಂಗಾಂಬುಧಿ ಕೆರೆ, ನಾಗವಾಲ– ಹುಯಿಲಾಳು– ಮೂಗನಹುಂಡಿ ಕೆರೆ, ಕಾರಂಜಿ ಕೆರೆ– ದೊಡ್ಡಕೆರೆ– ದಳವಾಯಿ ಕೆರೆ ಜಾಲಗಳಲ್ಲಿ ತಣ್ಣಗೆ ಎಣ್ಣೆಹೊಳೆ ಹರಿಯುತ್ತಿದೆ. ಇದು ಮೈಸೂರಿಗರಿಗೆ ಗೊತ್ತಿಲ್ಲ. ಮೈಸೂರನ್ನು ‘ವೆನಿಸ್’, ‘ಜಿನಿವಾ’ ಮಾಡುವ ಅವಕಾಶ ಏನಾದರೂ ಇದೆಯೇ ಎಂಬ ಕನಸೇನಾದರೂ ಎಂಜಿನಿಯರ್ಗಳಿಗೆ ಬಿದ್ದರೆ, ಖಂಡಿತ ಈ ನದಿಯತ್ತ ಬಂದು ನೋಡಬಹುದು. ನದಿ ಹಾದಿಗುಂಟ ನಡೆಯಬಹುದು. </p>.<p>ದಿಗಂತ ಕಾಣುವುದಿಲ್ಲ: ಎಣ್ಣೆಹೊಳೆಯ ದರ್ಶನ ಸಿಗಬೇಕಾದರೆ, ದಕ್ಷಿಣ ಭಾಗದಲ್ಲಿರುವ ಸಿಂಧುವಳ್ಳಿ– ಕಳಲವಾಡಿ ಗ್ರಾಮಗಳ ಬಳಿ ಬರಬೇಕು. ಈ ‘ಎಣ್ಣೆಹೊಳೆ’ಗೆ ಅಡ್ಡಲಾಗಿ ಬಹು ಎತ್ತರದ ಒಡ್ಡು ನಿರ್ಮಿಸಲಾಗಿದೆ. ಅದರಿಂದ ಉಂಟಾಗಿರುವ ‘ರಾಯನ ಕೆರೆ’ ಎಂಬ ಜಲನಿಧಿಯ ನಯನ ಮನೋಹರ ದೃಶ್ಯವನ್ನು ಕಣ್ತುಂಬಿಕೊಳ್ಳಬೇಕು. ಅದರಲ್ಲೂ ಸಂಜೆ ವೇಳೆ ನೀವೊಮ್ಮೆ ನೋಡಿ ಬರಬೇಕು. ಅಗಾಧ ಜಲರಾಶಿ ಹೊಂದಿರುವ ಈ ಕೆರೆಯ ಏರಿಯಿಂದ ಪಶ್ಚಿಮದ ಕಡೆ ಕಣ್ಣು ಹಾಯಿಸಿದರೆ ದಿಗಂತ ಕಾಣುವುದೇ ಇಲ್ಲ. </p>.<p>45 ಕಿ.ಮೀ ಉದ್ದದ ಹೊಳೆ: ಕೂರ್ಗಳ್ಳಿ, ಇಲವಾಲದ ಎತ್ತರ ಪ್ರದೇಶದಲ್ಲಿ ಹುಟ್ಟುವ ಹೊಳೆಯ ಹಾದಿ ಬರೊಬ್ಬರಿ 45 ಕಿ.ಮೀ! ನಂಜನಗೂಡು ತಾಲ್ಲೂಕಿನ ಇಮ್ಮಾವು ಗ್ರಾಮದ ಬಳಿ ಕಬಿನಿ ನದಿ ಸೇರುತ್ತದೆ. ಮೈಸೂರಿನಿಂದ ನಂಜನಗೂಡಿಗೆ ಹೋಗುವವರು ಕಡಕೊಳ ಗ್ರಾಮಕ್ಕೂ ಮೊದಲು ಈ ಹೊಳೆಗೆ ಸೇತುವೆ ಕಟ್ಟಿರುವುದನ್ನು ಗಮನಿಸಿದರೆ ವರ್ಷವಿಡೀ ಹರಿಯುವ ಹೊಳೆಯನ್ನು ಕಣ್ತುಂಬಿಕೊಳ್ಳಬಹುದು. ಇಡೀ ಮೈಸೂರು ತಾಲ್ಲೂಕಿನ ದಕ್ಷಿಣ ಭಾಗಕ್ಕೆ ಅಂತರ್ಜಲದ ಗಣಿಯಾಗಿರುವ ಹೊಳೆಯ ಕೆರೆ ಜಾಲವನ್ನು ಹುಡುಕುತ್ತಾ ಹೋಗುವುದೇ ಒಂದು ವಿಸ್ಮಯ. </p>.<p>ರಾಯನಕೆರೆ ಎಂಬ ಜಲನಿಧಿ: ಬೇಸಿಗೆಯಲ್ಲೂ ನೀರು ಬತ್ತದ ಕೆರೆಯ ವಿಸ್ತೀರ್ಣ 181.39 ಎಕರೆ ಎಂದು ‘ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ’ಯು (ಇಎಂಪಿಆರ್ಐ) ಹಲವು ವರ್ಷಗಳ ಹಿಂದೆಯೇ ಸಲ್ಲಿಸಿರುವ ವರದಿಯಲ್ಲಿ (ಮೈಸೂರು-ನಂಜನಗೂಡು ಯೋಜನಾ ಪ್ರದೇಶದಲ್ಲಿ ಜಲಮೂಲಗಳ ಸುಸ್ಥಿರ ಸಂರಕ್ಷಣೆಗೆ ಕಾರ್ಯತಂತ್ರ) ಗುರುತಿಸಿದೆ. ಅಲ್ಲದೇ ಕೆರೆಯ ಸರ್ವೆ ಸಂಖ್ಯೆ 22 ಎಂದೂ ಹೇಳಿದೆ. ಕೆರೆಯ ಒಂದು ದಿಕ್ಕಿನಲ್ಲಿ ಹಾದು ಹೋದರೆ ಬಳಸಿ ಬರಲು 8 ಕಿ.ಮೀ ನಡೆಯಬೇಕಾಗುತ್ತದೆ. ಅಂದರೆ ಕುಕ್ಕರಹಳ್ಳಿ ಕೆರೆಯ ಎರಡೂವರೆ ಪಟ್ಟು ದೊಡ್ಡದಾಗಿದೆ. </p>.<p>ಕೆರೆಯ ಉತ್ತರಕ್ಕಿರುವ ರಾಯನಕೆರೆ ಗ್ರಾಮದ ಬಳಿ ತ್ಯಾಜ್ಯ ನೀರು ಸಂಸ್ಕರಣ ಘಟಕವಿದ್ದು, ಅಲ್ಲಿಂದ ಬರುವ ಚರಂಡಿ ನೀರು ಇಲ್ಲಿಗೆ ಹರಿದು ಬರುತ್ತಿದೆ. ಕೆರೆಯ ಪಕ್ಕದಲ್ಲಿಯೇ ಸಿಂಧುವಳ್ಳಿ ಗ್ರಾಮದ ಸುಬೇದಾರ್ ವೀರಣ್ಣ ಕೆರೆಯೂ ಇದೆ. ಕಾಲುವೆಗಳಿಂದ ನೀರನ್ನು ತೆಂಗಿನ ತೋಟಗಳು, ಭತ್ತದ ಗದ್ದೆಗಳಿಗೆ ಹರಿಸಲಾಗುತ್ತಿದೆ. ಕೆರೆಯ ವಾಯುವ್ಯ ಭಾಗದಲ್ಲಿ ಒತ್ತುವರಿಯೂ ನಡೆದಿದೆ. </p>.<p>ಆಗದಿರಲಿ ವೃಷಭಾವತಿ! </p>.<p>ಅವೈಜ್ಞಾನಿಕವಾಗಿ ಪರಿಸರ ಕೇಂದ್ರಿತ ಅಭಿವೃದ್ಧಿ ಇಲ್ಲದ್ದರಿಂದಲೇ ಬೆಂಗಳೂರಿನ ‘ವೃಷಭಾವತಿ’ ಎಂಬ ಜೀವನದಿ ಚರಂಡಿಯಾಗಿ ಬದಲಾಗಿರುವುದು ಕಣ್ಣ ಮುಂದಿದೆ. ಎಣ್ಳೆಹೊಳೆಗೂ ಇದೇ ಪರಿಸ್ಥಿತಿ ಬರಲಿದೆ. ಮೈಸೂರು ಬೃಹತ್ ಆಗುತ್ತಿದೆ. ಈ ನದಿಯ ಕೆರೆ ಜಾಲವನ್ನು ಚರಂಡಿ ನೀರಿನ ತೊಟ್ಟಿಗಳಾಗಿ ಮಾಡಿದರೆ, ಕಡಕೊಳ ಗ್ರಾಮವು ‘ಕೆಂಗೇರಿ’ ಮೋರಿ ಆಗುತ್ತದೆ ಎನ್ನುತ್ತಾರೆ ಜಲತಜ್ಞ ಯು.ಎನ್.ರವಿಕುಮಾರ್. </p>.<p>‘ಮೈಸೂರು– ಮಾನಂದವಾಡಿ ರಸ್ತೆಯ ಪರಸಯ್ಯನಹುಂಡಿಯಿಂದ ಎಡಕ್ಕೆ ತಿರುಗಿ ಎಣ್ಣೆಹೊಳೆ ಹಾದು ಹೋಗಿರುವ ತೋಟಗಳಲ್ಲಿ ನೀವೊಮ್ಮೆ ಹಾದು ಹೋದರೆ ಸಾಕು, ಸರಸ್ವತಿಪುರಂ, ಕುವೆಂಪುನಗರ, ಶ್ರೀರಾಂಪುರ, ರಾಮಕೃಷ್ಣನಗರ, ವಿಜಯನಗರ ಸೇರಿದಂತೆ ಇಡೀ ಮೈಸೂರಿನ ದಕ್ಷಿಣ ಹಾಗೂ ಪಶ್ಚಿಮದ ಚರಂಡಿ ನೀರು ಕಪ್ಪು ಬಣ್ಣದಲ್ಲಿ ಹರಿಯುತ್ತಿದೆ. ಅದು ಎಣ್ಣೆ ಹೊಳೆ ಒಡಲನ್ನು ಸೇರುತ್ತಿರುವುದು ನಮಗೆ ಎಚ್ಚರಿಕೆ ಗಂಟೆ ಆಗಬೇಕಿದೆ. ನಗರದೊಳಗೆ ಈ ಮಾದರಿಯ ನದಿಯೊಂದೇನಾದರೂ ಪಾಶ್ಚಾತ್ಯ ದೇಶಗಳಲ್ಲಿ ಇದ್ದರೆ, ಅದು ವೆನಿಸ್, ಜಿನಿವಾ ಆಗಿಬಿಡುತ್ತಿತ್ತು. ‘ಎಣ್ಣೆಹೊಳೆ’ ರಕ್ಷಣೆ; ಕೆರೆ ಜಾಲದ ಸಂರಕ್ಷಣೆಯೇ ಆಗಿದೆ’ ಎನ್ನುತ್ತಾರೆ ಅವರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>