<p><strong>ಗುರುಮಠಕಲ್ (ಯಾದಗಿರಿ ಜಿಲ್ಲೆ)</strong>: ಬಿಸಿಲಿನಲ್ಲಿ ನೋಡುಗರಿಗೆ ಮುತ್ತಿನ ರಾಶಿಯಂತೆ ಸೆಳೆಯುವ, ತಿಂದಷ್ಟು ಮತ್ತೆ ಬೇಕೆಂಬ ಬಯಕೆಯನ್ನು ತರುವ ಸ್ವಾದಿಷ್ಟವಾದ ತಾಲ್ಲೂಕಿನ ಯಲ್ಹೇರಿ ಹಾಗೂ ಸುತ್ತಲಿನ ಪ್ರದೇಶದಲ್ಲಿ ಬೆಳೆಯುವ ‘ಯಲ್ಹೇರಿ ಬಿಳಿ ಜೋಳ‘ವು ಬಹು ಬೇಡಿಕೆಯನ್ನು ಹೊಂದಿದೆ.</p><p>ಸಾಧಾರಣ ಜೋಳಕ್ಕಿಂತ ಗಾತ್ರದಲ್ಲಿ ತುಸು ದೊಡ್ಡದಾಗಿ, ಬಿಳಿ ಬಣ್ಣದ ಮುತ್ತಿನಂತೆ ಕಂಗೊಳಿಸುವ ಜತೆಗೆ ಇದರಿಂದ ತಯಾರಾದ ರೊಟ್ಟಿಯು ಮುಟ್ಟಿದಾಗ ಹತ್ತಿಯಂತೆ ಮೃದುವಾಗಿ, ಬಾಯಿಯಲ್ಲಿ ಇರಿಸಿದಾಗ ಆಸ್ವಾದವನ್ನು ನೀಡುವುದು ಈ ತಳಿಯ ಹೆಗ್ಗಳಿಕೆ.</p><p>ಜವಾರಿ ತಳಿಯ ಜೋಳವು ಈ ಪ್ರದೇಶದ ಭೂಮಿಯ ಫಲವತ್ತತೆ ಮತ್ತು ಮಣ್ಣಿನ ಗುಣಧರ್ಮಕ್ಕೆ ಅನುಗುಣವಾಗಿ ಗಾತ್ರ, ಬಣ್ಣ ಮತ್ತು ರುಚಿಯಲ್ಲಿ ಹೆಚ್ಚಿನ ಗುಣಮಟ್ಟವನ್ನು ಹೊಂದಿದೆ. ಯಲ್ಹೇರಿ, ಕೊಂಕಲ್ ಸೇರಿದಂತೆ ಸುತ್ತಲಿನ ಕೆಲ ಗ್ರಾಮಗಳು ಹಾಗೂ ಚಪೆಟ್ಲಾ-ಗಾಜರಕೋಟ ರಸ್ತೆಯ ಕೆಲ ಕಪ್ಪು ಮಣ್ಣಿನ ಜಮೀನುಗಳಲ್ಲಿ ಬೆಳೆಯುವ ಜೋಳಕ್ಕೆ ರುಚಿ ಮತ್ತು ಮೃದುತ್ವದ ಕಾರಣ ಎಲ್ಲಿಲ್ಲದ ಬೇಡಿಕೆ.</p><p>‘ನಮ್ಮ ಗ್ರಾಮದ ಸುತ್ತಲಿನಲ್ಲಿ ಬೆಳೆದ ಜೋಳವನ್ನು ದೂರದ ನಗರಗಳಲ್ಲಿಯೂ ಹೆಚ್ಚು ಬೇಡಿಕೆಯಿಂದ ಖರೀದಿಸುತ್ತಾರೆ. ಈ ವರ್ಷ ಇಳುವರಿ ಕಡಿಮೆಯಾದ್ದರಿಂದ ಬೆಳೆದ ಬಹುತೇಕ ಜೋಳ ಮಾರಾಟವಾಗಿದೆ’ ಎಂದು ರೈತರು ಹೆಮ್ಮೆಯಿಂದ ಹೇಳುತ್ತಾರೆ.</p><p>ಜೋಳದ ಜತೆಗೆ ಜೋಳದ ಒಣ ದಂಟು (ಕಣಕಿ) ಜಾನುವಾರುಗಳಿಗೆ ಬಲು ರುಚಿ. ಹೀಗಾಗಿ, ಹೈನುಗಾರಿಕೆ ಮಾಡುವ ದೊಡ್ಡ-ದೊಡ್ಡ ಫಾರ್ಮ್ಗಳಲ್ಲಿ ಯಲ್ಹೇರಿ ಜೋಳದ ಕಣಕಿಯ ಮೇವನ್ನು ಖರೀದಿಸಿ ಬಣವೆ ಹಾಕುತ್ತಾರೆ. ಕಣಿಕಿ ಸಹ ರೈತರ ಆದಾಯದ ಮೂಲವಾಗಿದೆ.</p>.<p>ಕೆಲವು ವ್ಯಾಪಾರಿಗಳು ಸ್ಥಳೀಯವಾಗಿ ಸಾವಿರಾರು ಟ್ರ್ಯಾಕ್ಟರ್ಗಳಷ್ಟು ಕಣಕಿ ಮೇವನ್ನು ಖರೀದಿಸಿ, ಆಯಾ ಗ್ರಾಮಗಳ ಹೊರವಲಯದ ಜಮೀನುಗಳಲ್ಲಿ ಒಂದೆಡೆ ಬಣವೆ ಹಾಕುತ್ತಾರೆ. ಹೈನುಗಾರರಿಗೆ ಅವಶ್ಯಕವಿದ್ದಾಗ ಮೇವನ್ನು ಅಳತೆಗೆ ತಕ್ಕಂತೆ ಕತ್ತರಿಸಿ ಮಾರಾಟ ಮಾಡುತ್ತಾರೆ ಎನ್ನುತ್ತಾರೆ ರೈತರು.</p><p><strong>ಜಿಯೋ ಟ್ಯಾಗ್ ಸಿದ್ಧತೆ:</strong> ‘ಜನವರಿ ತಿಂಗಳಲ್ಲಿ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕೃಷಿಕರ ತಂಡವೊಂದು ಯಲ್ಹೇರಿ ಗ್ರಾಮಕ್ಕೆ ಬಂದು ಪರಿಶೀಲನೆ ನಡೆಸಿತ್ತು. 'ಜಿಯೋ ಟ್ಯಾಗ್' ನೀಡುವ ನಿಟ್ಟಿನಲ್ಲಿ ಕಾರ್ಯಾರಂಭ ನಡೆದಿದೆ. ಚೆನ್ನೈ ನಗರದಲ್ಲಿನ ಕಚೇರಿಗೆ ಏಜೆನ್ಸಿಯ ಮೂಲಕ ಮಣ್ಣು ಮತ್ತು ಪೋಷಕಾಂಶಗಳ ಪರೀಕ್ಷೆ, ಪೂರಕ ದಾಖಲೆಗಳೊಂದಿಗೆ ಜಿಯೋ ಟ್ಯಾಗ್ಗೆ ಅರ್ಜಿಸಲಿಸುವ ಸಿದ್ಧತೆ ನಡೆದಿದೆ’ ಎನ್ನುತ್ತಾರೆ ಯುವ ಕೃಷಿಕರೂ ಆಗಿರುವ ಎಂ.ಕಾಂ. ಪದವೀಧರ ವಿಶ್ವಶಂಕರ ಶಿವರಾಯ.</p><p>ಕೃಷಿ ಇಲಾಖೆಯ ಮಾಹಿತಿಯಂತೆ ಪ್ರಸಕ್ತ 2025-26ರ ಹಿಂಗಾರು ಅವಧಿಯಲ್ಲಿ ಕೇವಲ ಯಲ್ಹೇರಿ ಗ್ರಾಮದ ಕಂದಾಯ ವ್ಯಾಪ್ತಿಯಲ್ಲಿ 850 ಹೆಕ್ಟರ್ ಪ್ರದೇಶದಲ್ಲಿ 'ಯಲ್ಹೇರಿ ಜೋಳ' ಬೆಳೆಯಲಾಗಿದೆ. ಯಲ್ಹೇರಿ ಗ್ರಾಮದ ಸುತ್ತಲಿನ ಗ್ರಾಮಗಳ ವ್ಯಾಪ್ತಿಯಲ್ಲೂ ಬೆಳೆಯಗಿದೆ.</p><p>ಟನ್ಗಟ್ಟಲೆ ನೇರ ಮಾರಾಟ: ಯಲ್ಹೇರಿ ರೈತರು ಬೆಳೆದ ಜೋಳಕ್ಕೆ ಬೇಡಿಕೆ ಇರುವುದರಿಂದ ಗ್ರಾಹಕರಿಗೆ ನೇರವಾಗಿಯೇ ಮಾರಾಟ ಮಾಡುತ್ತಾರೆ. ಪ್ರತಿ ವರ್ಷ ಈ ಭಾಗದಲ್ಲಿ ಟನ್ಗಟ್ಟಲೆ ಬೆಳೆದ ಜೋಳವನ್ನು 'ರೊಟ್ಟಿ ಉಣ್ಣುವ ಗ್ರಾಹಕರು' ನೇರವಾಗಿ ಖರೀದಿಸುತ್ತಾರೆ ಎಂದು ಶರಣು ಯಲ್ಹೇರಿ ಹೇಳುತ್ತಾರೆ.</p><p><strong>ಜಿಲ್ಲಾಡಳಿತ ಗಮನಹರಿಸಲಿ</strong></p><p>ಯಲ್ಹೇರಿ ಬಿಳಿ ಜೋಳಕ್ಕೆ 'ಪ್ರಾದೇಶಿಕ ಮಾನ್ಯತೆ' (ಜಿಯೋ ಟ್ಯಾಗ್) ಪಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಗಮನಹರಿಸಲಿ ಎಂದು ಗ್ರಾಮದ ರೈತರು ಮನವಿ ಮಾಡಿದರು. ಈಗಾಗಲೇ ರಾಜ್ಯದ ಕೆಲ ಭಾಗಗಳಲ್ಲಿ ಅಲ್ಲಿನ ವಿಶಿಷ್ಟವಾದ ತಿನಿಸು, ಆಟಿಕೆ, ಕಲೆಗಳು ಸೇರಿದಂತೆ ವಿಶೇಷತೆಗಳಿಗೆ 'ಜಿಯೋ ಟ್ಯಾಗ್' ಪಡೆಯುವಲ್ಲಿ ಅಲ್ಲಿನ ಜಿಲ್ಲಾಡಳಿತಗಳು ವಿಶೇಷ ಆಧ್ಯತೆ ನೀಡಿವೆ. ಆದರೆ, ನಮ್ಮ ಜಿಲ್ಲಾಡಳಿತಕ್ಕೆ ಮಾತ್ರ ಆಸಕ್ತಿ ಕಾಣುತ್ತಿಲ್ಲ ಎನ್ನುವುದು ಗ್ರಾಮಸ್ಥರ ನೋವಿನ ಮಾತು.</p><p>ಏಜೆನ್ಸಿಯ ಮೂಲಕ ಅಗತ್ಯ ಲ್ಯಾಬ್ ವರದಿ, ದಾಖಲೆಗಳ ಸಂಗ್ರಹದಂತಹ ಕೆಲಸಕ್ಕೆ ಆರ್ಥಿಕ ಸಂಪನ್ಮೂಲದ ಅವಶ್ಯಕತೆಯಿದೆ. ಜಿಲ್ಲಾಡಳಿತ ಇತ್ತ ಆಸಕ್ತಿ ತೋರಬೇಕು ಎನ್ನುವುದು ಯಲ್ಹೇರಿ ರೈತರ ಕೋರಿಕೆ.</p><p><strong>ತಳಿ ಸಂರಕ್ಷಣೆಗೆ ಪಾರಂಪರಿಕ ವಿಧಾನ<br></strong>ಯಲ್ಹೇರಿ ಗ್ರಾಮದಲ್ಲಿನ ವಿಶಿಷ್ಟವಾದ ಈ ಜವಾರಿ ಜೋಳದ ತಳಿ ಸಂರಕ್ಷಣೆ ಮತ್ತು ಬಿತ್ತನೆ ಬೀಜಕ್ಕಾಗಿ ಪಾರಂಪರಿಕ ವಿಧಾನದಲ್ಲಿ ಸಂಸ್ಕರಿಸಿ ಸಂರಕ್ಷಣೆ ಮಾಡಲಾಗುತ್ತಿದೆ.</p><p>ರೈತರು ತಮ್ಮ ಜೋಳದ ಕಟಾವು ಮಾಡುವ ವೇಳೆ ಉತ್ತಮ ಗಾತ್ರದ ಮತ್ತು ಯಾವುದೇ ರೀತಿಯ ಕಾಡಿಗೆ ಬಾರದ (ಕಪ್ಪಾಗಿ ಇರದ) ತೆನೆಗಳನ್ನು ಆಯ್ದು, ಪ್ರತ್ಯೇಕವಾಗಿಸುತ್ತಾರೆ. ಬೇವು , ಎಕ್ಕೆ ಸೇರಿದಂತೆ ಕೆಲವು ಎಲೆಗಳನ್ನು ಹಾಕಿ ರಾಶಿ ಮಾಡುತ್ತಾರೆ.</p><p>ರಾಶಿಯ ನಂತರ ಹುಳು-ಕೀಟ ಬಾಧೆಯಿಂದ ಬೀಜವನ್ನು ರಕ್ಷಿಸಲು ಬೇವಿನ ಎಲೆ ಮತ್ತು ಕುಳ್ಳು (ಸೆಗಣಿ) ಬೂದಿಯನ್ನು ಸೇರಿಸಿ ತುಂಬಿಡುತ್ತಾರೆ. ಮತ್ತೆ ಬಿತ್ತನೆಯ ಕಾಲಕ್ಕೆ ಬೀಜವನ್ನು ಸ್ವಚ್ಛ ಮಾಡಿ ಬಿತ್ತನೆ ಮಾಡುವರು.</p>.<div><blockquote>ಯಲ್ಹೇರಿ ಜೋಳದ ಬಿತ್ತನೆ ಬೀಜವನ್ನು ಬೇರೆಡೆ ನೀಡಿದ್ದೆವು. ಉತ್ತಮ ಫಸಲು ಲಭಿಸಿದೆ. ಆದರೆ, ಯಲ್ಹೇರಿ ಭಾಗದಲ್ಲಿರುವಷ್ಟು ರುಚಿ ಮತ್ತು ಫಸಲು ಬಂದಿಲ್ಲ<br></blockquote><span class="attribution">– ವಿಶ್ವಶಂಕರ, ಯಲ್ಹೇರಿಯ ನವನಂದಿ ಫಾರ್ಮ್ ಮಾಲೀಕ</span></div>.<div><blockquote>ಸಾಧಾರಣವಾಗಿ ನಮ್ಮ ಜೋಳದ ತೆನೆಯು 12 ರಿಂದ 18 ಇಂಚಿನಷ್ಟು ಅಳತೆಯಲ್ಲಿರುತ್ತದೆ. ಇಳಿವರಿಯ ದೃಷ್ಟಿಯಲ್ಲಿಯೂ ರೈತರಿಗೆ ಲಾಭದಾಯಕ ಮತ್ತು ತಿನ್ನಲ್ಲೂ ಕೂಡ ರುಚಿಕರವಾಗಿದೆ.</blockquote><span class="attribution">– ಭೀಮರಾಯ ವೆಂಕಟರಾಯನೋರ, ರೈತ ಮುಖಂಡ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುರುಮಠಕಲ್ (ಯಾದಗಿರಿ ಜಿಲ್ಲೆ)</strong>: ಬಿಸಿಲಿನಲ್ಲಿ ನೋಡುಗರಿಗೆ ಮುತ್ತಿನ ರಾಶಿಯಂತೆ ಸೆಳೆಯುವ, ತಿಂದಷ್ಟು ಮತ್ತೆ ಬೇಕೆಂಬ ಬಯಕೆಯನ್ನು ತರುವ ಸ್ವಾದಿಷ್ಟವಾದ ತಾಲ್ಲೂಕಿನ ಯಲ್ಹೇರಿ ಹಾಗೂ ಸುತ್ತಲಿನ ಪ್ರದೇಶದಲ್ಲಿ ಬೆಳೆಯುವ ‘ಯಲ್ಹೇರಿ ಬಿಳಿ ಜೋಳ‘ವು ಬಹು ಬೇಡಿಕೆಯನ್ನು ಹೊಂದಿದೆ.</p><p>ಸಾಧಾರಣ ಜೋಳಕ್ಕಿಂತ ಗಾತ್ರದಲ್ಲಿ ತುಸು ದೊಡ್ಡದಾಗಿ, ಬಿಳಿ ಬಣ್ಣದ ಮುತ್ತಿನಂತೆ ಕಂಗೊಳಿಸುವ ಜತೆಗೆ ಇದರಿಂದ ತಯಾರಾದ ರೊಟ್ಟಿಯು ಮುಟ್ಟಿದಾಗ ಹತ್ತಿಯಂತೆ ಮೃದುವಾಗಿ, ಬಾಯಿಯಲ್ಲಿ ಇರಿಸಿದಾಗ ಆಸ್ವಾದವನ್ನು ನೀಡುವುದು ಈ ತಳಿಯ ಹೆಗ್ಗಳಿಕೆ.</p><p>ಜವಾರಿ ತಳಿಯ ಜೋಳವು ಈ ಪ್ರದೇಶದ ಭೂಮಿಯ ಫಲವತ್ತತೆ ಮತ್ತು ಮಣ್ಣಿನ ಗುಣಧರ್ಮಕ್ಕೆ ಅನುಗುಣವಾಗಿ ಗಾತ್ರ, ಬಣ್ಣ ಮತ್ತು ರುಚಿಯಲ್ಲಿ ಹೆಚ್ಚಿನ ಗುಣಮಟ್ಟವನ್ನು ಹೊಂದಿದೆ. ಯಲ್ಹೇರಿ, ಕೊಂಕಲ್ ಸೇರಿದಂತೆ ಸುತ್ತಲಿನ ಕೆಲ ಗ್ರಾಮಗಳು ಹಾಗೂ ಚಪೆಟ್ಲಾ-ಗಾಜರಕೋಟ ರಸ್ತೆಯ ಕೆಲ ಕಪ್ಪು ಮಣ್ಣಿನ ಜಮೀನುಗಳಲ್ಲಿ ಬೆಳೆಯುವ ಜೋಳಕ್ಕೆ ರುಚಿ ಮತ್ತು ಮೃದುತ್ವದ ಕಾರಣ ಎಲ್ಲಿಲ್ಲದ ಬೇಡಿಕೆ.</p><p>‘ನಮ್ಮ ಗ್ರಾಮದ ಸುತ್ತಲಿನಲ್ಲಿ ಬೆಳೆದ ಜೋಳವನ್ನು ದೂರದ ನಗರಗಳಲ್ಲಿಯೂ ಹೆಚ್ಚು ಬೇಡಿಕೆಯಿಂದ ಖರೀದಿಸುತ್ತಾರೆ. ಈ ವರ್ಷ ಇಳುವರಿ ಕಡಿಮೆಯಾದ್ದರಿಂದ ಬೆಳೆದ ಬಹುತೇಕ ಜೋಳ ಮಾರಾಟವಾಗಿದೆ’ ಎಂದು ರೈತರು ಹೆಮ್ಮೆಯಿಂದ ಹೇಳುತ್ತಾರೆ.</p><p>ಜೋಳದ ಜತೆಗೆ ಜೋಳದ ಒಣ ದಂಟು (ಕಣಕಿ) ಜಾನುವಾರುಗಳಿಗೆ ಬಲು ರುಚಿ. ಹೀಗಾಗಿ, ಹೈನುಗಾರಿಕೆ ಮಾಡುವ ದೊಡ್ಡ-ದೊಡ್ಡ ಫಾರ್ಮ್ಗಳಲ್ಲಿ ಯಲ್ಹೇರಿ ಜೋಳದ ಕಣಕಿಯ ಮೇವನ್ನು ಖರೀದಿಸಿ ಬಣವೆ ಹಾಕುತ್ತಾರೆ. ಕಣಿಕಿ ಸಹ ರೈತರ ಆದಾಯದ ಮೂಲವಾಗಿದೆ.</p>.<p>ಕೆಲವು ವ್ಯಾಪಾರಿಗಳು ಸ್ಥಳೀಯವಾಗಿ ಸಾವಿರಾರು ಟ್ರ್ಯಾಕ್ಟರ್ಗಳಷ್ಟು ಕಣಕಿ ಮೇವನ್ನು ಖರೀದಿಸಿ, ಆಯಾ ಗ್ರಾಮಗಳ ಹೊರವಲಯದ ಜಮೀನುಗಳಲ್ಲಿ ಒಂದೆಡೆ ಬಣವೆ ಹಾಕುತ್ತಾರೆ. ಹೈನುಗಾರರಿಗೆ ಅವಶ್ಯಕವಿದ್ದಾಗ ಮೇವನ್ನು ಅಳತೆಗೆ ತಕ್ಕಂತೆ ಕತ್ತರಿಸಿ ಮಾರಾಟ ಮಾಡುತ್ತಾರೆ ಎನ್ನುತ್ತಾರೆ ರೈತರು.</p><p><strong>ಜಿಯೋ ಟ್ಯಾಗ್ ಸಿದ್ಧತೆ:</strong> ‘ಜನವರಿ ತಿಂಗಳಲ್ಲಿ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕೃಷಿಕರ ತಂಡವೊಂದು ಯಲ್ಹೇರಿ ಗ್ರಾಮಕ್ಕೆ ಬಂದು ಪರಿಶೀಲನೆ ನಡೆಸಿತ್ತು. 'ಜಿಯೋ ಟ್ಯಾಗ್' ನೀಡುವ ನಿಟ್ಟಿನಲ್ಲಿ ಕಾರ್ಯಾರಂಭ ನಡೆದಿದೆ. ಚೆನ್ನೈ ನಗರದಲ್ಲಿನ ಕಚೇರಿಗೆ ಏಜೆನ್ಸಿಯ ಮೂಲಕ ಮಣ್ಣು ಮತ್ತು ಪೋಷಕಾಂಶಗಳ ಪರೀಕ್ಷೆ, ಪೂರಕ ದಾಖಲೆಗಳೊಂದಿಗೆ ಜಿಯೋ ಟ್ಯಾಗ್ಗೆ ಅರ್ಜಿಸಲಿಸುವ ಸಿದ್ಧತೆ ನಡೆದಿದೆ’ ಎನ್ನುತ್ತಾರೆ ಯುವ ಕೃಷಿಕರೂ ಆಗಿರುವ ಎಂ.ಕಾಂ. ಪದವೀಧರ ವಿಶ್ವಶಂಕರ ಶಿವರಾಯ.</p><p>ಕೃಷಿ ಇಲಾಖೆಯ ಮಾಹಿತಿಯಂತೆ ಪ್ರಸಕ್ತ 2025-26ರ ಹಿಂಗಾರು ಅವಧಿಯಲ್ಲಿ ಕೇವಲ ಯಲ್ಹೇರಿ ಗ್ರಾಮದ ಕಂದಾಯ ವ್ಯಾಪ್ತಿಯಲ್ಲಿ 850 ಹೆಕ್ಟರ್ ಪ್ರದೇಶದಲ್ಲಿ 'ಯಲ್ಹೇರಿ ಜೋಳ' ಬೆಳೆಯಲಾಗಿದೆ. ಯಲ್ಹೇರಿ ಗ್ರಾಮದ ಸುತ್ತಲಿನ ಗ್ರಾಮಗಳ ವ್ಯಾಪ್ತಿಯಲ್ಲೂ ಬೆಳೆಯಗಿದೆ.</p><p>ಟನ್ಗಟ್ಟಲೆ ನೇರ ಮಾರಾಟ: ಯಲ್ಹೇರಿ ರೈತರು ಬೆಳೆದ ಜೋಳಕ್ಕೆ ಬೇಡಿಕೆ ಇರುವುದರಿಂದ ಗ್ರಾಹಕರಿಗೆ ನೇರವಾಗಿಯೇ ಮಾರಾಟ ಮಾಡುತ್ತಾರೆ. ಪ್ರತಿ ವರ್ಷ ಈ ಭಾಗದಲ್ಲಿ ಟನ್ಗಟ್ಟಲೆ ಬೆಳೆದ ಜೋಳವನ್ನು 'ರೊಟ್ಟಿ ಉಣ್ಣುವ ಗ್ರಾಹಕರು' ನೇರವಾಗಿ ಖರೀದಿಸುತ್ತಾರೆ ಎಂದು ಶರಣು ಯಲ್ಹೇರಿ ಹೇಳುತ್ತಾರೆ.</p><p><strong>ಜಿಲ್ಲಾಡಳಿತ ಗಮನಹರಿಸಲಿ</strong></p><p>ಯಲ್ಹೇರಿ ಬಿಳಿ ಜೋಳಕ್ಕೆ 'ಪ್ರಾದೇಶಿಕ ಮಾನ್ಯತೆ' (ಜಿಯೋ ಟ್ಯಾಗ್) ಪಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಗಮನಹರಿಸಲಿ ಎಂದು ಗ್ರಾಮದ ರೈತರು ಮನವಿ ಮಾಡಿದರು. ಈಗಾಗಲೇ ರಾಜ್ಯದ ಕೆಲ ಭಾಗಗಳಲ್ಲಿ ಅಲ್ಲಿನ ವಿಶಿಷ್ಟವಾದ ತಿನಿಸು, ಆಟಿಕೆ, ಕಲೆಗಳು ಸೇರಿದಂತೆ ವಿಶೇಷತೆಗಳಿಗೆ 'ಜಿಯೋ ಟ್ಯಾಗ್' ಪಡೆಯುವಲ್ಲಿ ಅಲ್ಲಿನ ಜಿಲ್ಲಾಡಳಿತಗಳು ವಿಶೇಷ ಆಧ್ಯತೆ ನೀಡಿವೆ. ಆದರೆ, ನಮ್ಮ ಜಿಲ್ಲಾಡಳಿತಕ್ಕೆ ಮಾತ್ರ ಆಸಕ್ತಿ ಕಾಣುತ್ತಿಲ್ಲ ಎನ್ನುವುದು ಗ್ರಾಮಸ್ಥರ ನೋವಿನ ಮಾತು.</p><p>ಏಜೆನ್ಸಿಯ ಮೂಲಕ ಅಗತ್ಯ ಲ್ಯಾಬ್ ವರದಿ, ದಾಖಲೆಗಳ ಸಂಗ್ರಹದಂತಹ ಕೆಲಸಕ್ಕೆ ಆರ್ಥಿಕ ಸಂಪನ್ಮೂಲದ ಅವಶ್ಯಕತೆಯಿದೆ. ಜಿಲ್ಲಾಡಳಿತ ಇತ್ತ ಆಸಕ್ತಿ ತೋರಬೇಕು ಎನ್ನುವುದು ಯಲ್ಹೇರಿ ರೈತರ ಕೋರಿಕೆ.</p><p><strong>ತಳಿ ಸಂರಕ್ಷಣೆಗೆ ಪಾರಂಪರಿಕ ವಿಧಾನ<br></strong>ಯಲ್ಹೇರಿ ಗ್ರಾಮದಲ್ಲಿನ ವಿಶಿಷ್ಟವಾದ ಈ ಜವಾರಿ ಜೋಳದ ತಳಿ ಸಂರಕ್ಷಣೆ ಮತ್ತು ಬಿತ್ತನೆ ಬೀಜಕ್ಕಾಗಿ ಪಾರಂಪರಿಕ ವಿಧಾನದಲ್ಲಿ ಸಂಸ್ಕರಿಸಿ ಸಂರಕ್ಷಣೆ ಮಾಡಲಾಗುತ್ತಿದೆ.</p><p>ರೈತರು ತಮ್ಮ ಜೋಳದ ಕಟಾವು ಮಾಡುವ ವೇಳೆ ಉತ್ತಮ ಗಾತ್ರದ ಮತ್ತು ಯಾವುದೇ ರೀತಿಯ ಕಾಡಿಗೆ ಬಾರದ (ಕಪ್ಪಾಗಿ ಇರದ) ತೆನೆಗಳನ್ನು ಆಯ್ದು, ಪ್ರತ್ಯೇಕವಾಗಿಸುತ್ತಾರೆ. ಬೇವು , ಎಕ್ಕೆ ಸೇರಿದಂತೆ ಕೆಲವು ಎಲೆಗಳನ್ನು ಹಾಕಿ ರಾಶಿ ಮಾಡುತ್ತಾರೆ.</p><p>ರಾಶಿಯ ನಂತರ ಹುಳು-ಕೀಟ ಬಾಧೆಯಿಂದ ಬೀಜವನ್ನು ರಕ್ಷಿಸಲು ಬೇವಿನ ಎಲೆ ಮತ್ತು ಕುಳ್ಳು (ಸೆಗಣಿ) ಬೂದಿಯನ್ನು ಸೇರಿಸಿ ತುಂಬಿಡುತ್ತಾರೆ. ಮತ್ತೆ ಬಿತ್ತನೆಯ ಕಾಲಕ್ಕೆ ಬೀಜವನ್ನು ಸ್ವಚ್ಛ ಮಾಡಿ ಬಿತ್ತನೆ ಮಾಡುವರು.</p>.<div><blockquote>ಯಲ್ಹೇರಿ ಜೋಳದ ಬಿತ್ತನೆ ಬೀಜವನ್ನು ಬೇರೆಡೆ ನೀಡಿದ್ದೆವು. ಉತ್ತಮ ಫಸಲು ಲಭಿಸಿದೆ. ಆದರೆ, ಯಲ್ಹೇರಿ ಭಾಗದಲ್ಲಿರುವಷ್ಟು ರುಚಿ ಮತ್ತು ಫಸಲು ಬಂದಿಲ್ಲ<br></blockquote><span class="attribution">– ವಿಶ್ವಶಂಕರ, ಯಲ್ಹೇರಿಯ ನವನಂದಿ ಫಾರ್ಮ್ ಮಾಲೀಕ</span></div>.<div><blockquote>ಸಾಧಾರಣವಾಗಿ ನಮ್ಮ ಜೋಳದ ತೆನೆಯು 12 ರಿಂದ 18 ಇಂಚಿನಷ್ಟು ಅಳತೆಯಲ್ಲಿರುತ್ತದೆ. ಇಳಿವರಿಯ ದೃಷ್ಟಿಯಲ್ಲಿಯೂ ರೈತರಿಗೆ ಲಾಭದಾಯಕ ಮತ್ತು ತಿನ್ನಲ್ಲೂ ಕೂಡ ರುಚಿಕರವಾಗಿದೆ.</blockquote><span class="attribution">– ಭೀಮರಾಯ ವೆಂಕಟರಾಯನೋರ, ರೈತ ಮುಖಂಡ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>