ಧಾರವಾಡ: ಹುಬ್ಬಳ್ಳಿಯ ಶ್ರೀ ಶಿರಡಿ ಸಾಯಿ ಮಂದಿರದ ಆಡಳಿತ ವ್ಯವಸ್ಥೆ, ಅರ್ಚಕರ ಬದಲಾವಣೆ ಮತ್ತು ಮಂದಿರದ ಆಸ್ತಿ ವಿವಾದ ಕುರಿತು ಮುಂದಿನ ವಿಚಾರಣಾ ದಿನಾಂಕದ ವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸದ್ಯದ ಆಡಳಿತ ಮಂಡಳಿಗೆ ಇಲ್ಲಿನ ಜಿಲ್ಲಾ ನ್ಯಾಯಾಲಯ ಮಧ್ಯಂತರ ಆದೇಶ ನೀಡಿ, ಎದುರುಗಾರರಿಗೆ ತುರ್ತು ನೋಟಿಸ್ ಜಾರಿ ಮಾಡಿದೆ. ಸಾಯಿ ಮಂದಿರದ ಆಡಳಿತ ಮತ್ತು ಹಣ ದುರುಪಯೋಗವಾಗುತ್ತಿದ್ದು, ಆಡಳಿತಾಧಿಕಾರಿ ನೇಮಕ ಮಾಡುವಂತೆ ಕೋರಿ ದೀಪಕ ಜಾಧವ ಮತ್ತು ಮತ್ತೊಬ್ಬರು ದಾಖಲಿಸಿರುವ ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಧೀಶ ರಾಮಚಂದ್ರ ಹುದ್ದಾರ ಈ ಆದೇಶ ನೀಡಿದ್ದಾರೆ.