ಸಾವಿರಾರು ಹೆಕ್ಟೇರ್ ತೊಗರಿ, ಹತ್ತಿ ಇತರ ಬೆಳೆಗಳು ಜಲಾವೃತಗೊಂಡಿವೆ. ಶುಕ್ರವಾರ ಸುರಪುರ ವಲಯದಲ್ಲಿ 117.2 ಮಿ.ಮೀ, ಕಕ್ಕೇರಾ ವಲಯದಲ್ಲಿ 52 ಮಿ.ಮೀ, ಕೆಂಭಾವಿ ವಲಯದಲ್ಲಿ 48.6 ಮಿ.ಮೀ ಮಳೆ ಬಿದ್ದಿದೆ. ವಣಿಕ್ಯಾಳ ಗ್ರಾಮದ ಸುಡುಗಾಡು ಸಿದ್ದರ ಕಾಲೊನಿಯ ಮನೆಗಳಿಗೆ ನೀರು ನುಗ್ಗಿದೆ. ಪಕ್ಕದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂಪೂರ್ಣ ಜಲಾವೃತವಾಗಿದೆ. ದೇವಿಕೇರಾ ಗ್ರಾಮದ ಸರ್ಕಾರಿ ಪ್ರೌಢಶಾಲೆಯೂ ನೀರಲ್ಲಿ ನಿಂತಿದೆ.