ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹75 ಲಕ್ಷ ವಂಚನೆ: ತಹಶೀಲ್ದಾರ್‌ ಕಚೇರಿಯ ಪ್ರಥಮ ದರ್ಜೆ ಸಹಾಯಕ ಅಮಾನತು

ತಹಶೀಲ್ದಾರ್‌ ಖಾತೆಯಲ್ಲಿದ್ದ ‍ಹಣ ವಂಚನೆ ಪ್ರಕರಣ
Last Updated 25 ಸೆಪ್ಟೆಂಬರ್ 2020, 1:32 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಸುರಪುರ ತಹಶೀಲ್ದಾರ್‌ ಖಾತೆಯಲ್ಲಿದ್ದ ₹75.59 ಲಕ್ಷ ವಂಚನೆಗೆ ಸಂಬಂಧಿಸಿ ದಂತೆ ತಹಶೀಲ್ದಾರ್‌ ಕಚೇರಿಯ ಪ್ರಥಮ ದರ್ಜೆ ಸಹಾಯಕ ಸಿ.ಎಸ್. ರಾಜು ಅವರನ್ನು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್‌. ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಅಲ್ಲದೆ, ತಹಶೀಲ್ದಾರ್ ಮತ್ತು ಶಿರಸ್ತೇದಾರರಿಗೂ ಶೋಕಾಸ್‌ ನೋಟಿಸ್‌ ನೀಡಿದ್ದಾರೆ. ಈ ಮೂಲಕ ಹಣ ವಂಚನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ.

‘ಎಫ್‌ಡಿಎ ಸಿ.ಎಸ್.ರಾಜು ಅವ ರನ್ನು ಅಮಾನತು ಮಾಡಲಾಗಿದೆ. ಇಂಥ ಕೃತ್ಯದಲ್ಲಿ ಯಾರೇ ತೊಡಗಿಸಿ ಕೊಂಡರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ’ ಎಂದುಜಿಲ್ಲಾಧಿಕಾರಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಆಕ್ಸಿಸ್‌ಬ್ಯಾಂಕ್‌ ವ್ಯವಸ್ಥಾಪಕ ರದ್ದು ಇದರಲ್ಲಿ ಲೋಪ ಕಂಡು ಬಂದಿದೆ. ಹೀಗಾಗಿ ಇವರ ವಿರುದ್ಧವೂ ಶಿಸ್ತು ಕ್ರಮಕ್ಕೆ ಪತ್ರ ಬರೆಯಲಾಗಿದೆ. ಲೀಡ್‌ ಬ್ಯಾಂಕ್‌ ವ್ಯವಸ್ಥಾಪರಿಗೆ ಈ ಬಗ್ಗೆ ಸೂಚಿಸಲಾಗಿದೆ. ಅಮಾನತು ಮಾಡಲು ತಿಳಿಸಲಾಗಿದೆ. ಈಗಾಗಲೇ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ. ಮುಂಬಯಿ ಶಾಖೆಯವರು ಕ್ರಮ ತೆಗೆದುಕೊಳ್ಳು ತ್ತಾರೆ.ಅಲ್ಲದೆ ಬ್ಯಾಂಕ್‌ ಸಿಬ್ಬಂದಿ ಕೈವಾಡದಬಗ್ಗೆಯೂ ತನಿಖೆ ನಡೆಯುತ್ತಿದೆ. ಯಾರೇ ತಪ್ಪು ಮಾಡಿದರೂ ಕಠಿಣ ಕ್ರಮ ತೆಗೆದು ಕೊಳ್ಳಲಾಗುವುದು’ ಎಂದರು.

ನೈಸರ್ಗಿಕ ವಿಕೋಪದಡಿ ಸುರಪುರ ನಗರದಲ್ಲಿರುವ ಅಕ್ಸಿಸ್ ಬ್ಯಾಂಕ್‌ಶಾಖೆಯಲ್ಲಿ ಸುರಪುರ ತಹಶೀಲ್ದಾರ್‌ ಹೆಸರಿನ ಖಾತೆ ಸಂಖ್ಯೆ 91901008033954ಗೆ 2019ರ ಅಕ್ಟೋಬರ್ 19 ರಂದು ₹1,55,00,000, 2020ರ ಮೇ 20ರಂದು ₹1,00,00,000, ಜುಲೈ 23ರಂದು₹1,00,00,000 ಹೀಗೆ ಒಟ್ಟು ₹3,55,00,000 ಖಾತೆಗೆ ಅನುದಾನ ಜಮಾ ಆಗಿತ್ತು. ಇದರಲ್ಲಿ ₹75.59 ಲಕ್ಷ ಹಣ ವರ್ಗಾವಣೆ ಮಾಡಿಕೊಂಡು ವಂಚಿಸಲಾಗಿದೆ ಎಂದು ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT