ನಗರದ ವಿವಿಧೆಡೆ ಆರಂಭವಾಗಿರುವ ಪಡಿತರ ಕೇಂದ್ರಗಳಿಗೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ಸದ್ಯ ಗುರುವಾರ ಅಕ್ಕಿ ಮಾತ್ರ ಬಂದಿದೆ.ಶುಕ್ರವಾರಗೋಧಿ ಬಂದರೆ ಅದನ್ನು ವಿತರಿಸಲಾಗುವುದು. ಜನ ಗುಂಪುಗೂಡದಂತೆ ಮಾಡಲು ಸರ್ಕಾರಿ ಶಾಲೆಗಳಲ್ಲಿಯೂ ಪಡಿತರ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. 5 ಕಿ.ಮೀ. ಅಂತರದಲ್ಲಿ ಒಂದು ಕೇಂದ್ರ ತೆರೆದು ಅಲ್ಲಿಯೇ ವಿತರಿಸಲಾಗುವುದು’ ಎಂದರು.