ಹುಣಸಗಿ: ಎರಡು ಭಾರಿ ಬೆಲೆ ಕುಸಿತ, ರಸಗೊಬ್ಬರ ಬೆಲೆ ಏರಿಕೆ ಮಧ್ಯೆಯೂ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಹುಣಸಗಿ ಸೇರಿದಂತೆ ಸುತ್ತಮುತ್ತಲಿನ ತಾಲ್ಲೂಕಿನ ರೈತರು ಭತ್ತ ನಾಟಿಗೆ ಅಣಿಯಾಗುತ್ತಿದ್ದಾರೆ. 3 ವಾರಗಳ ಹಿಂದೆ ಹಾಕಿದ್ದ ಭತ್ತದ ಸಸಿಗಳು ಚೆನ್ನಾಗಿ ಬಂದಿದ್ದು, ಕಾಲುವೆಗೆ ನೀರು ಬಿಡುವದಕ್ಕಾಗಿ ಕಾದು ಕುಳಿತಿದ್ದೇವೆ ಎಂಬ ಮಾತುಗಳು ರೈತ ವಲಯದಲ್ಲಿ ಕೇಳಿ ಬರುತ್ತಿವೆ.