ವಿಜ್ಞಾನಿ ಡಾ.ಗುರುಪ್ರಸಾದ. ಎಚ್ ಮಾತನಾಡಿ, ‘ಕೃಷಿಯಲ್ಲಿ ಕೀಟಗಳನ್ನು ನಿಯಂತ್ರಿಸಲು ಕೀಟನಾಶಕ ಬಳಕೆಯಿಂದ ಮಾನವ, ಪ್ರಾಣಿ, ಪಕ್ಷಿಗಳಿಗೆ ಹಾನಿಯಾಗುವದಲ್ಲದೆ. ಕೆಲವೊಂದು ಕ್ಷುಲ್ಲಕ ಕೀಟಗಳು ಪ್ರಮುಖ ಕೀಟವಾಗಿ ಪರಿಣಮಿಸಬಹುದು. ಸಾವಯುವ ಕೃಷಿಯಲ್ಲಿ ಸಸ್ಯಮೂಲ, ಕೀಟನಾಶಕ ಮತ್ತು ಜೈವಿಕ ಕೀಟನಾಶಕಗಳ ಬಳಕೆ ಕೀಟ ನಿರ್ವಹಣೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆಯುತ್ತಿದೆ’ ಎಂದು ಹೇಳಿದರು.