ಬೇರೆ ಬೇರೆ ನಗರಗಳಲ್ಲಿ ನಾಗಾಸಾಧುಗಳ ಸೇವೆ ಮಾಡಿ ಅವರಿಂದ ನಾಟಿ ವೈದ್ಯ ಪದ್ಧತಿ ಕಲಿತರು. ಸುರಪುರದ ವೆಂಕಟೇಶ ಸುಗಂಧಿ ಅವರಲ್ಲಿ ಅಯುರ್ವೇದಿಕ್ ಔಷಧಿ ಪದ್ಧತಿ ಕಲಿತುಕೊಂಡರು. ಯಂಕಪ್ಪ ಮೊದಮೊದಲು ನೀರಿನ ಮೇಲೆ ಮಲಗಿ ಜಾಗೃತಾವಸ್ಥೆಯಲ್ಲಿ ತೇಲುವುದನ್ನು ಕಲಿತುಕೊಂಡರು. ನಂತರ ಎದೆ, ಮುಖ, ಹೊಟ್ಟೆಯ ಭಾಗ ತೇಲಿಸುವುದನ್ನು ಕಲಿತರು. ತದನಂತರ ತಲೆಯಿಂದ ಕಾಲಿನವರೆಗೆ ಇಡೀ ದೇಹವನ್ನೆ ತೇಲಿಸುವ ವಿಧಾನ ವೃದ್ಧಿಸಿಕೊಂಡರು.