ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರ; ಆನಂದ ವಿದ್ಯಾಲಯದ ಅಮೃತ ಮಹೋತ್ಸವ 30ರಂದು

Last Updated 26 ನವೆಂಬರ್ 2022, 4:30 IST
ಅಕ್ಷರ ಗಾತ್ರ

ಸುರಪುರ: ನಗರದ ಆನಂದ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ ಸಮಾರಂಭವನ್ನು ನ.30 ರಂದು ಬೆಳಿಗ್ಗೆ 10.30ಕ್ಕೆ ಆಚರಿಸಲಾಗುವುದು ಎಂದು ಮುಖ್ಯಶಿಕ್ಷಕ ಮಹೇಶ ಜಾಗೀರದಾರ ತಿಳಿಸಿದರು.

ಶುಕ್ರವಾರ ಶಾಲೆಯ ಅಮೃತ ಮಹೋತ್ಸವ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಿಲ್ಲಾ ಮೇಲ್ವಿಚಾರಕ ಸುನಂದ ಕುಮಾರ ಮಾತನಾಡಿ, 1943ರಲ್ಲಿ ಅಮೆರಿಕಾದಿಂದ ಆಗಮಿಸಿದ್ದ ಮಿಷನರಿ ಪ್ರತಿನಿಧಿ ಬೊಬ್ಬೆ ಈ ಶಾಲೆ ಸ್ಥಾಪಿಸಿದ್ದರು. ಬೆಂಗಳೂರನ ಬಿಆರ್‍ಸಿ ಮತ್ತು ಜಿಆರ್‍ಸಿ ಬಿಷಪ್ ಎನ್.ಎಲ್.ಕರಕರೆ ಮತ್ತು ಕಮಲ್ ಕರಕರೆ ಮುಖ್ಯ ಅತಿಥಿಗಳಾಗಿರುತ್ತಾರೆ. ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಮಾಜಿ ಶಾಸಕ ತಿಪ್ಪರಾಜು ಹವಲ್ದಾರ್, ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶಾಂತಗೌಡ ಪಾಟೀಲ, ಬಿಇಒ ಮಹೇಶ ಪೂಜಾರ ಭಾಗವಹಿಸಲಿದ್ದಾರೆ.

ರಾಜಾ ಮದನಗೋಪಾಲ ನಾಯಕ, ರಾಜಾ ವೆಂಕಟಪ್ಪ ನಾಯಕ, ತಿಪ್ಪರಾಜ ಹವಲ್ದಾರ್ ಸೇರಿ ಮೂವರು ಶಾಸಕರು ಮತ್ತು ಸಂಸದರಾಗಿದ್ದ ರಾಜಾ ರಂಗಪ್ಪ ನಾಯಕ ಅವರು ಇದೇ ಶಾಲೆಯಲ್ಲಿ ಅಭ್ಯಾಸ ಮಾಡಿರುತ್ತಾರೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ ಎಂದು ಹೇಳಿದರು.

ಸಭಾಪಾಲಕ ಪ್ರಕಾಶ ಹಂಚನಾಳ, ಶಿಕ್ಷಕರಾದ ಸುನೀಲಾ ಶಾಂತಕುಮಾರ, ಜಯಪ್ಪ, ಪಾಲನಾಯಕ್, ರಾಜಾ ಕುಮಾರ ನಾಯಕ , ಧನರಾಜ್ , ರಮೇಶ ಬಿರಾದಾರ, ನಿಂಗಪ್ಪ ಮಾಳೇಗಾರ, ಜ್ಞಾನಮಿತ್ರ, ಈರಣ್ಣ , ಮ್ಯಾಥ್ಯು ಸ್ಯಾಮುವೆಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT