ಆಶ್ರಮದ ಜಿಲ್ಲಾ ಸಂಚಾಲಕ ಪಿ.ವೇಣುಗೋಪಾಲ ಮಾತನಾಡಿ, ವಿದ್ಯಾರ್ಥಿಗಳೇ ಶಿವಮಹಾಪುರಾಣ ಪಾರಾಯಣ ಮಾಡಿರುವುದು ವಿಶೇಷವಾಗಿದೆ. ಇಂಥ ಮಾದರಿ ಕಾರ್ಯಕ್ರಮಗಳು ಎಲ್ಲೆಡೆ ನಡೆದಾಗ ಮಾತ್ರ ಶಾಂತಿ, ನೆಮ್ಮದಿ, ಸೌಹಾರ್ದತೆ, ಭಾವೈಕ್ಯತೆ ನೆಲೆಸಲು ಸಾಧ್ಯ. ವಿಶೇಷವಾಗಿ ಯುವಕರೇ ಸೇರಿಕೊಂಡು ಶಿವಪುರಾಣ ಪಾರಾಯಣದಲ್ಲಿ ಭಾಗಿಯಾಗಿರುವುದು ಮಾದರಿಯಾಗಿದೆ ಎಂದು ಹೇಳಿದರು.