‘ಇಡೀ ರಾಜ್ಯವನ್ನು ಮೂರು ಬಾರಿ ಸುತ್ತಿದೆ. ಜನರ ಆಶೀರ್ವಾದ ನಮ್ಮ ಕಡೆಗೆ ಇತ್ತು. 122 ಸ್ಥಾನಗಳಿದ್ದ ಕಾಂಗ್ರೆಸ್ 78 ಸ್ಥಾನಗಳಿಗೆ ಕುಸಿಯಿತು. ಸಿದ್ದರಾಮಯ್ಯನವರೇ, ಎಲ್ಲಿಯವರೆಗೆ ರಾಜಕಾರಣ ನಡೆಯಿತು. ನಿಮ್ಮ ವಿರುದ್ಧ ಈಜಲು ಜಿ.ಟಿ.ದೇವೇಗೌಡರನ್ನು ಕಣಕ್ಕೆ ಇಳಿಸಿ, ಸೋಲಿಸಿ, ಅಪಮಾನ ಮಾಡಿದರು. ನೀವು ತಮಾಷೆ, ಅವಮಾನ ಮಾಡಿಕೊಂಡಿರಿ. ಜಮೀರ್ ಅಹಮದ್, ಬಾಲಕೃಷ್ಣ, ಚೆಲುವರಾಯಸ್ವಾಮಿ ಅವರಿಗೆ ಕುಮಾರಸ್ವಾಮಿ ಮೋಸ ಮಾಡಿದರು. ಕುರ್ಚಿಗಾಗಿ ಏನು ಬೇಕಾದರೂ ಮಾಡಲು ಜೆಡಿಎಸ್ನವರು ತಯಾರಿದ್ದಾರೆ’ ಎಂದು ಕಿಡಿಕಾರಿದರು.