ಗಮನ ಸೆಳೆದ ಚಿಕ್ಕ ಮಕ್ಕಳ ಛದ್ಮವೇಷ :ಶಾಲೆಯ ಹಲವಾರು ಮಕ್ಕಳು ಶ್ರೀಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ಕೃಷ್ಣ, ರಾಧೆಯ ವೇಷ ಧರಿಸಿ ಶಾಲೆಗೆ ಆಗಮಿಸಿದ್ದರು. ಪುಟ್ಟ ಪುಟ್ಟ ಮಕ್ಕಳು ನಿವಿಲುಗರಿ, ಕಿರೀಟ, ಕೊಳಲು ಹಿಡಿದದು ಅಂಕು ಡೊಂಕಾದ ಹೆಜ್ಜೆಯನ್ನಾಕುತ್ತಾ ಅನೇಕ ಮಕ್ಕಳು ಸಾಕ್ಷಾತ್ ಬಾಲಕೃಷ್ಣನ ತದ್ರೂಪದಂತೆ ಕಂಡರು. ಚಿಣ್ಣರು ಅತ್ಯಂತ ಶ್ರದ್ಧೆಯಿಂದ ಕೃಷ್ಣರಾಧೆಯರ ವೇಷದಲ್ಲಿ ಕುಣಿದು ಕುಪ್ಪಳಿಸಿದರು. ಪೋಷಕರು ತಮ್ಮ ವೇಷಧಾರಿ ಮಕ್ಕಳೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದರ ಮೂಲಕವಾಗಿ ಸಂಭ್ರಮಿಸಿದ್ದು ಕಂಡುಬಂದಿತು.
ಈ ಸಂದರ್ಭದಲ್ಲಿ ಅನೀಲ ದೇಶಪಾಂಡೆ, ರವೀಂದ್ರ ಕುಲಕರ್ಣಿ, ಶಂಕ್ರಪ್ಪ ಅರುಣಿ, ರಿಯಾಜ್ ಪಟೇಲ್, ಹಣಮಂತರೆಡ್ಡಿ, ಮಹೇಶಕುಮಾರ, ದೀಪಕ್ ಪೋದ್ದರ ಇದ್ದರು.