ಈಗಾಗಲೇ ಗ್ರಾಮದ ಮುಖ್ಯ ರಸ್ತೆಯು ಸಂಪೂರ್ಣ ದುರಸ್ತಿಗೊಂಡಿದ್ದು, ಗ್ರಾಮದ ಇತರೆ ರಸ್ತೆಗಳಲ್ಲಿ ಕಾಮಗಾರಿಗಳು ಜರುಗುತ್ತಿವೆ. ಗುರುಮಠಕಲ್ ಪಟ್ಟಣದ ಆರಂಭದಿಂದ ಮೊದಲುಗೊಂಡು, ಚಂಡರಕಿ ಗ್ರಾಮದಲ್ಲಿ ಮುಖ್ಯಮಂತ್ರಿಗಳು ವಾಸ್ತವ್ಯ ಮಾಡಲಿರುವ ಶಾಲೆಯ ಆವರಣದವರೆಗೂ ಜೆಡಿಎಸ್ ಧ್ವಜಗಳು, ಮುಖ್ಯಮಂತ್ರಿಗಳಿಗೆ ಸ್ವಾಗತಿಸುವಂತಹ ಕಮಾನುಗಳು ರಾರಾಜಿಸುತ್ತಿವೆ.
ಯಾದಗಿರಿಯಲ್ಲಿ ನೈಟ್ರೋಜನ್ ಬಲೂನ್, ಸ್ವಾಗತ ಕಾಮಾನು, ಬೃಹತ್ಕಾರದ ಸಿಎಂ ಕಟೌಟ್ಗಳು ರಾರಾಜಿಸುತ್ತಿವೆ.