ಅಂದಿನ ಸರ್ಕರದ ಆದೇಶ ದಂತೆ ರಸ್ತೆ ಮೇಲೆ ಇರುವ ಅನಧಿಕೃತ ವೃತ್ತ, ಭಾವಚಿತ್ರಗಳನ್ನು ಆಯಾ ಸಮುದಾಯದ ಜನರ ಮನವೊಲಿಸಿ ತೆರವುಗೊಳಿಸಿದ್ದು ರಾಜ್ಯ ಮಟ್ಟದಲ್ಲಿ ಸದ್ದು ಮಾಡಿತ್ತು. ಅತಿಕ್ರಮಗೊಂಡಿದ್ದ ಪೊಲೀಸ್ ಇಲಾಖೆಯ 14 ಎಕರೆ ಜಾಗವನ್ನು ವಶಪಡಿಸಿಕೊಂಡು 3 ಎಕರೆ ಪ್ರದೇಶದಲ್ಲಿ ವಿವಿಧ ಹಣ್ಣಿನ ಗಿಡಗಳನ್ನು ಬೆಳೆಸಿದ್ದು ಹಿರಿಯ ಅಧಿಕಾರಿಗಳ ಮತ್ತು ಅಂದಿನ ಗೃಹ ಸಚಿವರಾಗಿದ್ದ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನ ಸೆಳೆದಿತ್ತು.