‘ಎಪಿಎಂಸಿ ಮಾರುಕಟ್ಟೆ ಅಥವಾಖರೀದಿ ಕೇಂದ್ರದಲ್ಲಿ ರೈತರು ನೇರವಾಗಿ ಬಂದು ಮಾರಾಟ ಮಾಡಬೇಕು. ಅನಧಿಕೃತ ಅಂಗಡಿಗಳಲ್ಲಿ ಮಾರಾಟ ಮಾಡಿದರೆ ಮೋಸ ಹೋಗುವುದೇ ಜಾಸ್ತಿ. ಈಗಾಗಲೇ ಅನಧಿಕೃತ ಅಂಗಡಿಗಳ ಮೇಲೆ ದಾಳಿ ನಡೆಸಿ, ದಂಡ ವಿಧಿಸಿ ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ರೈತರು ಯಾವುದೇಕಾರಣಕ್ಕೂ ಅನಧಿಕೃತ ವ್ಯಾಪಾರಿಗಳ ಮೊರೆ ಹೋಗಬಾರದು’ ಎಂದುಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಭೀಮರಾಯ ಎಂ.ಹೇಳುತ್ತಾರೆ.ಒಂದೂವರೆ ತಿಂಗಳಲ್ಲಿ ಅನಧಿಕೃತ ಹತ್ತಿ ಖರೀದಿ ಕೇಂದ್ರಗಳಿಗೆ ತೆರಳಿ ಅವುಗಳನ್ನು ತೆರವುಗೊಳಿಸಿ ಅವರಿಂದ ದಂಡ ವಸೂಲಿ ಮಾಡಲಾಗಿದೆ ಎಂದುಭೀಮರಾಯತಿಳಿಸಿದರು.