ಕಳೆದ ಎರಡು ವಾರಗಳ ಹಿಂದೆ ತಂಪಾದ ಗಾಳಿ ಮತ್ತು ಆಗಾಗ ಜಿಟಿ ಮಳೆ ಇತ್ತು. ಇದರಿಂದಾಗಿ ಅಲ್ಲಲ್ಲಿ ಭತ್ತ ನೆಲಕ್ಕೆ ಬಿದ್ದಿತ್ತು, ಅಲ್ಲದೇ ಭತ್ತ ಕಟಾವಿಗೆ ವಿಳಂಬ ಮಾಡಲಾಗಿತ್ತು. ಇದೇ ಸ್ಥಿತಿ ಮುಂದುವರಿದ ಕಾರಣ ಅಳಿದುಳಿದ ಕೈಗೆ ಬಂದ ತುತ್ತು ಎಲ್ಲ ಮತ್ತೆ ಕೈ ಜಾರಿ ಹೋಗುತ್ತದೆಯೋ ಎಂಬ ಭೀತಿ ನಮ್ಮಲ್ಲಿ ಮನೆ ಮಾಡಿದೆ ಎಂದು ಗೆದ್ದಲಮರಿ, ರಾಜನಕೋಳೂರ, ಬೊಮ್ಮನಗುಡ್ಡ, ಗುಳಬಾಳ ಗ್ರಾಮದ ರೈತರು ತಿಳಿಸಿದರು.