ರಾಜ್ಯದ ಭೂಮಿಯನ್ನು ಭೂಗಳ್ಳರಿಗೆ ನೀಡಲು ಈ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಇದು ರೈತ ವಿರೋಧಿ ಕ್ರಮವಾಗಿದೆ. ಹೀಗಾಗಿ ರೈತರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಆದರೆ ಇದಕ್ಕೆ ಸರ್ಕಾರ ಕಿವಿಗೊಟ್ಟಿಲ್ಲ. ಇದು ರೈತ ಪರ ಸರ್ಕಾರವಲ್ಲ. ಆದಾನಿ, ಅಂಬಾನಿ, ಜಿಂದಾಲ್, ದುಬೈ, ಸಿಂಗಾಪುರ ಉದ್ಯಮಿಗಳ ಪರವಾಗಿರುವ ಸರ್ಕಾರವಾಗಿದೆ’ ಎಂದು ಅಪಾದಿಸಿದರು.