ತಾಲ್ಲೂಕಿನ ಕೋನಹಳ್ಳಿ ಗ್ರಾಮದ ಕೆಬಿಎನ್ ಆಗ್ರೋ ಏಜೆನ್ಸಿಯ ಮಾಲೀಕ ಮಹಮದ್ ಹುಸೇನ್ ಹಾಗೂ ಖಾಜಾ ಹುಸೇನಿ ಅವರುಮಧ್ಯವರ್ತಿ ಸಾಬಣ್ಣ ನಾಗನಟಗಿ ಅವರಿಗೆ ಮೊಬೈಲ್ ಮೂಲಕ ಸಂಪರ್ಕಿಸಿ, ಮಂಗಳ ಡಿಎಪಿ ರಸಗೊಬ್ಬರ ಕೋಡಿಸುವಂತೆ ಬೇಡಿಕೆ ಇರಿಸಿದ್ದರು. ಮುಂಗಡವಾಗಿ ₹2 ಲಕ್ಷ ಸಹ ಅವರ ಖಾತೆಗೆ ಜಮೆ
ಮಾಡಿದ್ದರು. ಮೇ 7ರಂದು ಮಧ್ಯವರ್ತಿಯು 130 ಮೂಟೆ ರಸಗೊಬ್ಬರ ಕಳುಹಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.