ಜಿಲ್ಲಾ ಕಾಂಗ್ರೆಸ್ ಅದ್ಯಕ್ಷ ಮರಿಗೌಡ ಪಾಟೀಲ ಹುಲಕಲ್ ಮಾತನಾಡಿ ‘ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಶಕ್ತಿ ಕುಂದಿಸಲು ಡಿ.ಕೆ.ಶಿವಕುಮಾರ ಅವರನ್ನು ಕೇಂದ್ರ ಸರ್ಕಾರ ಕುತಂತ್ರದಿಂದ ಬಂಧನ ಮಾಡಿಸಿದೆ. ಬರುವ ದಿನಗಳಲ್ಲಿ ಕೇಂದ್ರ ಸರ್ಕಾರಕ್ಕೆ ಜನರೆ ಸೂಕ್ತ ಉತ್ತರ ಕೊಡಲಿದ್ದಾರೆ’ ಎಂದರು.
ಪಕ್ಷದ ಮುಖಂಡರಾದ ಶ್ರೀನಿವಾಸರೆಡ್ಡಿ ಕಂದಕೂರ, ಚಿದಾನಂದಪ್ಪ ಕಾಳೆಬೆಳಗುಂದಿ, ರಾಜಾ ವೇಣುಗೋಪಾಲ್ ನಾಯಕ್, ಲಾಯಕ್ ಹುಸೇನ್ ಬಾದಲ್, ಸುದರ್ಶನ್ ನಾಯಕ, ಭೀಮರಾಯ ಠಾಣಗುಂದಿ, ಚನ್ನಕೇಶವ ಬಾಣತಿಹಾಳ, ಮಾಣಿಕರೆಡ್ಡಿ ಕುರಕುಂದಿ, ಮಂಜುಳಾ ಗೂಳಿ, ವೆಂಕಟರೆಡ್ಡಿ ವನಕೇರಿ, ರಾಘವೇಂದ್ರ ಮಾನಸಗಲ್, ಮಹ್ಮದ್ ಜಿಲಾನಿ, ಬಸವರಾಜ ಬಾಚವಾರ, ಸಂಜಯ ಕಾವಲಿ, ಅಬ್ದುಲ್ ರಜಾಕ್ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.