<p><strong>ಯಾದಗಿರಿ</strong>: ರೈತರು ಬೆಳೆದ ಬೆಳೆಗೆ ಉತ್ತಮ ಧಾರಣಿ ಹಾಗೂ ಬೆಲೆ ಕುಸಿತ ತಡೆಯುವ ಉದ್ದೇಶದಿಂದ ಸರ್ಕಾರ ಬೆಂಬಲ ಬೆಲೆ (ಎಂಎಸ್ಪಿ) ಅಡಿಯಲ್ಲಿ ಭಾರತೀಯ ಹತ್ತಿ ನಿಗಮದ ಅಡಿಯಲ್ಲಿ ಜಿಲ್ಲೆಯಲ್ಲಿ 21 ಹತ್ತಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಿದೆ. ಆದರೆ ಅನುಕೂಲಕ್ಕಿಂತ ಅನಾನೂಕೂಲ ಅಧಿಕವಾಗಿದೆ ಎಂಬ ದೂರು ರೈತರಿಂದ ಕೇಳಿ ಬರುತ್ತಿವೆ.</p>.<p>2024-25ನೇ ಸಾಲಿನ ಭಾರತೀಯ ಹತ್ತಿ ನಿಗಮ ಹುಬ್ಬಳ್ಳಿ ಘಟಕದಿಂದ 21 ಖರೀದಿ ಸ್ಥಾಪನೆ ಮಾಡಲಾಗಿದೆ. ಮಧ್ಯಮ ಎಳೆ ನೂಲು ಕ್ವಿಂಟಲ್ಗೆ ₹7,121, ಉದ್ದನೆಯ ನೂಲು ₹7,521 ಬೆಂಬಲ ಬೆಲೆ ಯೋಜನೆಯಡಿ ಹತ್ತಿ ಖರೀದಿ ಮಾಡಲಾಗುತ್ತಿದೆ. ಹತ್ತಿ ಖರೀದಿಯೂ ವಾರದ 5 ದಿನ ಅಂದರೆ ಸೋಮವಾರದಿಂದ ಶುಕ್ರವಾರದ ವರೆಗೆ ಮಾತ್ರ ಇರುತ್ತದೆ. </p>.<p>ಲಾರಿ, ಈಚರ್, ಮಿನಿ ಟ್ರಕ್ಗಳಲ್ಲಿ ತಂದ ಹತ್ತಿಯನ್ನು ತೆಗೆದುಕೊಳ್ಳುವುದಿಲ್ಲ. ಒಂದು ದಿನದಲ್ಲಿ 40 ಕ್ವಿಂಟಲ್ ಮೇಲ್ಪಟ್ಟು ಮಾರಾಟ ಮಾಡದಲ್ಲಿ ದಾಖಲೆ ಮರುಶೀಲನೆ ಕಡ್ಡಾಯವಾಗಿದೆ. ಇಂಥ ನಿಯಮಗಳು ರೈತರನ್ನು ಖಾಸಗಿ ಖರೀದಿಯತ್ತ ಮುಖ ಮಾಡುವಂತೆ ಮಾಡಿದೆ.</p>.<p>ಜಿಲ್ಲೆಯಲ್ಲಿ 1.86 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇತ್ತು. ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಹೆಚ್ಚಿನ ಕ್ಷೇತ್ರದಲ್ಲಿ ವಾಣಿಜ್ಯ ಬೆಳೆಯಾಗಿರುವ ಹತ್ತಿ ಸದ್ಯಕ್ಕೆ ಮಾರುಕಟ್ಟೆಗೆ ಲಗ್ಗೆ ಹಾಕಿದೆ.</p>.<p>‘ಸಂಕಷ್ಟದ ನಡುವೆ ರೈತರು ಖರೀದಿ ಕೇಂದ್ರಕ್ಕೆ ಹತ್ತಿ ತಂದರೆ ಪಹಣಿ ಪತ್ರಿಕೆಯಲ್ಲಿ ಹತ್ತಿ ಬೆಳೆ ನಮೂದು ಆಗಿಲ್ಲ. ಖರೀದಿಸಲು ಸಾಧ್ಯವಿಲ್ಲ ಎಂದು ಭಾರತೀಯ ಹತ್ತಿ ಖರೀದಿ ಕೇಂದ್ರ ಫರ್ಮಾನು ಹೊರಡಿಸಿದೆ. ಇದರಿಂದ ರೈತರು ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಆಗಿದೆ. ಸಮಸ್ಯೆ ಪರಿಹರಿಸಬೇಕಾದ ಕಂದಾಯ ಇಲಾಖೆ ಮೌನಕ್ಕೆ ಶರಣಾಗಿದೆ. ಅನಿವಾರ್ಯವಾಗಿ ರೈತರು ರಸ್ತೆ ಬದಿಯಲ್ಲಿನ ದಲ್ಲಾಳಿಗೆ ಇಲ್ಲವೆ ಖರೀದಿ ಕೇಂದ್ರದಲ್ಲಿ ಸ್ಥಾಪಿಸಿದ ದಲ್ಲಾಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಿ ಕೈ ಸುಟ್ಟುಕೊಳ್ಳುವ ಅಸಹಾಯಕ ಸ್ಥಿತಿ ರೈತರಿಗೆ ಬಂದಿದೆ’ ಎಂದು ರೈತ ಮುಖಂಡ ಚನ್ನಪ್ಪ ಆನೇಗುಂದಿ ಆರೋಪಿಸಿದ್ದಾರೆ.</p>.<p>ಸಾಮಾನ್ಯವಾಗಿ ಕಂದಾಯ ಇಲಾಖೆಯ ಪ್ರಸಕ್ತ ಸಾಲಿನ ಪಹಣಿಯಲ್ಲಿ ರೈತರು ಬೆಳೆದ ಬೆಳೆಯನ್ನು ಮೇ ತಿಂಗಳಲ್ಲಿ ನಮೂದಿಸುತ್ತಾರೆ. ತಾತ್ಕಾಲಿಕವಾಗಿ ಗ್ರಾಮ ಲೆಕ್ಕಾಧಿಕಾರಿಯಿದ ದೃಢೀಕರಣ ಪತ್ರ ಪಡೆದುಕೊಂಡು ರೈತರು ಹತ್ತಿ ಮಾರಾಟ ಮಾಡಲು ಅವಕಾಶವಿದೆ. ಆದರೆ ಖರೀದಿ ಕೇಂದ್ರದವರು ಒಪ್ಪುತ್ತಿಲ್ಲ ಎಂಬ ಸಹಾಯಕತೆಯನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದರು.</p>.<p>ತೇವಾಂಶ ಹೆಚ್ಚಿರುವ ಹತ್ತಿಯನ್ನು ಖರೀದಿ ಮಾಡುತ್ತಿಲ್ಲ ಎಂದು ರೈತರ ಆರೋಪ ಸಾಮಾನ್ಯವಾಗಿದೆ. ಅನಿವಾರ್ಯವಾಗಿ ರೈತರು ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಅದನ್ನೇ ಮಿಲ್ನವರು ಮತ್ತೆ ಹತ್ತಿ ಖರೀದಿ ಕೇಂದ್ರಕ್ಕೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಇತ್ತಿಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಜನಪ್ರತಿನಿಧಿಗಳು ಆರೋಪಿಸಿದ್ದರು.</p>.<p>‘ಜಿಲ್ಲಾಧಿಕಾರಿ ಅವರು ಮಧ್ಯ ಪ್ರವೇಶಿಸಿ ತಕ್ಷಣ ಭಾರತೀಯ ಹತ್ತಿ ನಿಗಮದ ಅಡಿಯ ಕೇಂದ್ರದಲ್ಲಿ ಖರೀದಿಸುವ ವ್ಯವಸ್ಥೆ ಮಾಡಬೇಕು. ಇಲ್ಲದೆ ಹೋದರೆ ಅನಿವಾರ್ಯವಾಗಿ ರೈತರು ಹೋರಾಟ ಮಾಡಬೇಕಾಗುತ್ತದೆ’ ಎಂದು ರೈತ ಮುಖಂಡ ಯಲ್ಲಯ್ಯ ನಾಯಕ ವನದುರ್ಗ ಎಚ್ಚರಿಕೆ ನೀಡಿದ್ದಾರೆ. </p>.<p><strong>ಹತ್ತಿ ಖರೀದಿ ಕೇಂದ್ರದ ಬಗ್ಗೆ ಮೌನ</strong></p><p> ಹತ್ತಿ ಖರೀದಿ ಸ್ಥಾಪಿಸುವಂತೆ ಕೆಲ ರೈತ ಸಂಘಟನೆಗಳ ಮುಖಂಡರು ಒತ್ತಾಯಿಸಿ ಸ್ವತಃ ಖರೀದಿ ಕೇಂದ್ರದ ಕಾರ್ಯಕ್ರಮಕ್ಕೆ ಭಾಗವಹಿಸಿದ್ದರು. ಆದರೆ ಹತ್ತಿ ನಿಗಮ ಖರೀದಿಸಲು ನಿರಾಕರಿಸುತ್ತಿರುವ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂಬುವುದು ರೈತರಿಗೆ ಬೇಸರ ಉಂಟು ಮಾಡಿದೆ. ರೈತ ಸಂಘಟನೆಗಳು ರೈತರ ಹಿತ ಕಾಪಾಡುತ್ತವೆ ಇಲ್ಲಾ ಹತ್ತಿ ಖರೀದಿ ಕೇಂದ್ರದ ಮರ್ಜಿ ಕಾಯುತ್ತವೆ ಎಂಬ ಅನುಮಾನವನ್ನು ಹತ್ತಿ ಬೆಳೆದ ರೈತರು ವ್ಯಕ್ತಪಡಿಸಿದ್ದಾರೆ.</p>.<p><strong>ತುಟಿ ಬಿಚ್ಚದ ಬಿಜೆಪಿ ಮುಖಂಡರು</strong></p><p> ‘ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಹತ್ತಿ ಬೆಳೆದ ರೈತರ ಸಂಕಷ್ಟವು ಬಿಜೆಪಿ ಪಕ್ಷದ ಮುಖಂಡರಿಗೆ ಕಣ್ಣಿಗೆ ಕಾಣುತ್ತಿದ್ದರೂ ತುಟಿ ಬಿಚ್ಚುತ್ತಿಲ್ಲ. ಕೇವಲ ವಕ್ಫ್ ಆಸ್ತಿಯ ಜಪ ಮಾಡುತ್ತಿದ್ದಾರೆ. ಸ್ಥಳೀಯ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತದೆ ಇರುವುದು ಪಕ್ಷದ ಧೋರಣೆಯು ನೋವುಂಟು ಮಾಡಿದೆ’ ಎಂದು ರೈತ ಮುಖಂಡ ಮಲ್ಲಣ್ಣ ಬೇಸರ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ</strong>: ರೈತರು ಬೆಳೆದ ಬೆಳೆಗೆ ಉತ್ತಮ ಧಾರಣಿ ಹಾಗೂ ಬೆಲೆ ಕುಸಿತ ತಡೆಯುವ ಉದ್ದೇಶದಿಂದ ಸರ್ಕಾರ ಬೆಂಬಲ ಬೆಲೆ (ಎಂಎಸ್ಪಿ) ಅಡಿಯಲ್ಲಿ ಭಾರತೀಯ ಹತ್ತಿ ನಿಗಮದ ಅಡಿಯಲ್ಲಿ ಜಿಲ್ಲೆಯಲ್ಲಿ 21 ಹತ್ತಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಿದೆ. ಆದರೆ ಅನುಕೂಲಕ್ಕಿಂತ ಅನಾನೂಕೂಲ ಅಧಿಕವಾಗಿದೆ ಎಂಬ ದೂರು ರೈತರಿಂದ ಕೇಳಿ ಬರುತ್ತಿವೆ.</p>.<p>2024-25ನೇ ಸಾಲಿನ ಭಾರತೀಯ ಹತ್ತಿ ನಿಗಮ ಹುಬ್ಬಳ್ಳಿ ಘಟಕದಿಂದ 21 ಖರೀದಿ ಸ್ಥಾಪನೆ ಮಾಡಲಾಗಿದೆ. ಮಧ್ಯಮ ಎಳೆ ನೂಲು ಕ್ವಿಂಟಲ್ಗೆ ₹7,121, ಉದ್ದನೆಯ ನೂಲು ₹7,521 ಬೆಂಬಲ ಬೆಲೆ ಯೋಜನೆಯಡಿ ಹತ್ತಿ ಖರೀದಿ ಮಾಡಲಾಗುತ್ತಿದೆ. ಹತ್ತಿ ಖರೀದಿಯೂ ವಾರದ 5 ದಿನ ಅಂದರೆ ಸೋಮವಾರದಿಂದ ಶುಕ್ರವಾರದ ವರೆಗೆ ಮಾತ್ರ ಇರುತ್ತದೆ. </p>.<p>ಲಾರಿ, ಈಚರ್, ಮಿನಿ ಟ್ರಕ್ಗಳಲ್ಲಿ ತಂದ ಹತ್ತಿಯನ್ನು ತೆಗೆದುಕೊಳ್ಳುವುದಿಲ್ಲ. ಒಂದು ದಿನದಲ್ಲಿ 40 ಕ್ವಿಂಟಲ್ ಮೇಲ್ಪಟ್ಟು ಮಾರಾಟ ಮಾಡದಲ್ಲಿ ದಾಖಲೆ ಮರುಶೀಲನೆ ಕಡ್ಡಾಯವಾಗಿದೆ. ಇಂಥ ನಿಯಮಗಳು ರೈತರನ್ನು ಖಾಸಗಿ ಖರೀದಿಯತ್ತ ಮುಖ ಮಾಡುವಂತೆ ಮಾಡಿದೆ.</p>.<p>ಜಿಲ್ಲೆಯಲ್ಲಿ 1.86 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇತ್ತು. ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಹೆಚ್ಚಿನ ಕ್ಷೇತ್ರದಲ್ಲಿ ವಾಣಿಜ್ಯ ಬೆಳೆಯಾಗಿರುವ ಹತ್ತಿ ಸದ್ಯಕ್ಕೆ ಮಾರುಕಟ್ಟೆಗೆ ಲಗ್ಗೆ ಹಾಕಿದೆ.</p>.<p>‘ಸಂಕಷ್ಟದ ನಡುವೆ ರೈತರು ಖರೀದಿ ಕೇಂದ್ರಕ್ಕೆ ಹತ್ತಿ ತಂದರೆ ಪಹಣಿ ಪತ್ರಿಕೆಯಲ್ಲಿ ಹತ್ತಿ ಬೆಳೆ ನಮೂದು ಆಗಿಲ್ಲ. ಖರೀದಿಸಲು ಸಾಧ್ಯವಿಲ್ಲ ಎಂದು ಭಾರತೀಯ ಹತ್ತಿ ಖರೀದಿ ಕೇಂದ್ರ ಫರ್ಮಾನು ಹೊರಡಿಸಿದೆ. ಇದರಿಂದ ರೈತರು ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಆಗಿದೆ. ಸಮಸ್ಯೆ ಪರಿಹರಿಸಬೇಕಾದ ಕಂದಾಯ ಇಲಾಖೆ ಮೌನಕ್ಕೆ ಶರಣಾಗಿದೆ. ಅನಿವಾರ್ಯವಾಗಿ ರೈತರು ರಸ್ತೆ ಬದಿಯಲ್ಲಿನ ದಲ್ಲಾಳಿಗೆ ಇಲ್ಲವೆ ಖರೀದಿ ಕೇಂದ್ರದಲ್ಲಿ ಸ್ಥಾಪಿಸಿದ ದಲ್ಲಾಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಿ ಕೈ ಸುಟ್ಟುಕೊಳ್ಳುವ ಅಸಹಾಯಕ ಸ್ಥಿತಿ ರೈತರಿಗೆ ಬಂದಿದೆ’ ಎಂದು ರೈತ ಮುಖಂಡ ಚನ್ನಪ್ಪ ಆನೇಗುಂದಿ ಆರೋಪಿಸಿದ್ದಾರೆ.</p>.<p>ಸಾಮಾನ್ಯವಾಗಿ ಕಂದಾಯ ಇಲಾಖೆಯ ಪ್ರಸಕ್ತ ಸಾಲಿನ ಪಹಣಿಯಲ್ಲಿ ರೈತರು ಬೆಳೆದ ಬೆಳೆಯನ್ನು ಮೇ ತಿಂಗಳಲ್ಲಿ ನಮೂದಿಸುತ್ತಾರೆ. ತಾತ್ಕಾಲಿಕವಾಗಿ ಗ್ರಾಮ ಲೆಕ್ಕಾಧಿಕಾರಿಯಿದ ದೃಢೀಕರಣ ಪತ್ರ ಪಡೆದುಕೊಂಡು ರೈತರು ಹತ್ತಿ ಮಾರಾಟ ಮಾಡಲು ಅವಕಾಶವಿದೆ. ಆದರೆ ಖರೀದಿ ಕೇಂದ್ರದವರು ಒಪ್ಪುತ್ತಿಲ್ಲ ಎಂಬ ಸಹಾಯಕತೆಯನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದರು.</p>.<p>ತೇವಾಂಶ ಹೆಚ್ಚಿರುವ ಹತ್ತಿಯನ್ನು ಖರೀದಿ ಮಾಡುತ್ತಿಲ್ಲ ಎಂದು ರೈತರ ಆರೋಪ ಸಾಮಾನ್ಯವಾಗಿದೆ. ಅನಿವಾರ್ಯವಾಗಿ ರೈತರು ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಅದನ್ನೇ ಮಿಲ್ನವರು ಮತ್ತೆ ಹತ್ತಿ ಖರೀದಿ ಕೇಂದ್ರಕ್ಕೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಇತ್ತಿಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಜನಪ್ರತಿನಿಧಿಗಳು ಆರೋಪಿಸಿದ್ದರು.</p>.<p>‘ಜಿಲ್ಲಾಧಿಕಾರಿ ಅವರು ಮಧ್ಯ ಪ್ರವೇಶಿಸಿ ತಕ್ಷಣ ಭಾರತೀಯ ಹತ್ತಿ ನಿಗಮದ ಅಡಿಯ ಕೇಂದ್ರದಲ್ಲಿ ಖರೀದಿಸುವ ವ್ಯವಸ್ಥೆ ಮಾಡಬೇಕು. ಇಲ್ಲದೆ ಹೋದರೆ ಅನಿವಾರ್ಯವಾಗಿ ರೈತರು ಹೋರಾಟ ಮಾಡಬೇಕಾಗುತ್ತದೆ’ ಎಂದು ರೈತ ಮುಖಂಡ ಯಲ್ಲಯ್ಯ ನಾಯಕ ವನದುರ್ಗ ಎಚ್ಚರಿಕೆ ನೀಡಿದ್ದಾರೆ. </p>.<p><strong>ಹತ್ತಿ ಖರೀದಿ ಕೇಂದ್ರದ ಬಗ್ಗೆ ಮೌನ</strong></p><p> ಹತ್ತಿ ಖರೀದಿ ಸ್ಥಾಪಿಸುವಂತೆ ಕೆಲ ರೈತ ಸಂಘಟನೆಗಳ ಮುಖಂಡರು ಒತ್ತಾಯಿಸಿ ಸ್ವತಃ ಖರೀದಿ ಕೇಂದ್ರದ ಕಾರ್ಯಕ್ರಮಕ್ಕೆ ಭಾಗವಹಿಸಿದ್ದರು. ಆದರೆ ಹತ್ತಿ ನಿಗಮ ಖರೀದಿಸಲು ನಿರಾಕರಿಸುತ್ತಿರುವ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂಬುವುದು ರೈತರಿಗೆ ಬೇಸರ ಉಂಟು ಮಾಡಿದೆ. ರೈತ ಸಂಘಟನೆಗಳು ರೈತರ ಹಿತ ಕಾಪಾಡುತ್ತವೆ ಇಲ್ಲಾ ಹತ್ತಿ ಖರೀದಿ ಕೇಂದ್ರದ ಮರ್ಜಿ ಕಾಯುತ್ತವೆ ಎಂಬ ಅನುಮಾನವನ್ನು ಹತ್ತಿ ಬೆಳೆದ ರೈತರು ವ್ಯಕ್ತಪಡಿಸಿದ್ದಾರೆ.</p>.<p><strong>ತುಟಿ ಬಿಚ್ಚದ ಬಿಜೆಪಿ ಮುಖಂಡರು</strong></p><p> ‘ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಹತ್ತಿ ಬೆಳೆದ ರೈತರ ಸಂಕಷ್ಟವು ಬಿಜೆಪಿ ಪಕ್ಷದ ಮುಖಂಡರಿಗೆ ಕಣ್ಣಿಗೆ ಕಾಣುತ್ತಿದ್ದರೂ ತುಟಿ ಬಿಚ್ಚುತ್ತಿಲ್ಲ. ಕೇವಲ ವಕ್ಫ್ ಆಸ್ತಿಯ ಜಪ ಮಾಡುತ್ತಿದ್ದಾರೆ. ಸ್ಥಳೀಯ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತದೆ ಇರುವುದು ಪಕ್ಷದ ಧೋರಣೆಯು ನೋವುಂಟು ಮಾಡಿದೆ’ ಎಂದು ರೈತ ಮುಖಂಡ ಮಲ್ಲಣ್ಣ ಬೇಸರ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>