ಈ ಕುರಿತು ಮಾಹಿತಿ ನೀಡಿದ ಪಿಎಫ್ಐ ಜಿಲ್ಲಾ ಘಟಕದ ಅಧ್ಯಕ್ಷ ಮಹಮ್ಮದ್ ಮುಖ್ತಾರ್ ಕುರಕುಂದಿ, ’ಕಳೆದ ವರ್ಷ ಕೋವಿಡ್ನಿಂದ ಮೃತಪಟ್ಟ ವ್ಯಕ್ತಿಗಳನ್ನು ಜೆಸಿಬಿ ಯಂತ್ರದ ಮೂಲಕ ತಳ್ಳಿ ಅಂತ್ಯಸಂಸ್ಕಾರ ನಡೆಸುವುದನ್ನು ಕಂಡು ನನ್ನ ಮನಸ್ಸು ಕಲುಕಿತು. ನಮಗೆ ಯಾವುದೇ ಜಾತಿ, ಧರ್ಮ ಸಾವಿನಲ್ಲಿ ಬೇಕಾಗಿಲ್ಲ. ಮನುಜ ಪಥದಲ್ಲಿ ಸಾಗಬೇಕು ಎಂಬ ನಿರ್ಧಾರವನ್ನು ನಮ್ಮ ಸಂಘಟನೆಯ ಸದಸ್ಯರ ಜೊತೆ ಚರ್ಚೆ ನಡೆಸಿದಾಗ ಎಲ್ಲರೂ ಧ್ವನಿಗೂಡಿಸಿದರು. ಅದರಂತೆ ಅಗತ್ಯ ತರಬೇತಿಯನ್ನು ಆರೋಗ್ಯ ಇಲಾಖೆ ನಮಗೆ ನೀಡಿತು‘ ಎಂದರು.