ಶಹಾಪುರ: ‘ಹತ್ತಿ ಬೆಳೆಗೆ ಥ್ರೀಪ್ಸ್( ನುಸಿಯ ಬಾಧೆ) ರೋಗ ಕಾಣಿಸಿಕೊಂಡಿದ್ದು, ಉಲ್ಬಣಗೊಳ್ಳುವ ಲಕ್ಷಣವಿದೆ. ಬೆಳೆಯಲ್ಲಿ ರಸ ಹೀರುವ ಕೀಟಗಳಾದ ಹಸಿರು ಜಿಗಿಹುಳು, ಹೇನು, ಬಿಳಿನೊಣ ಹುಳು ಕಂಡು ಬಂದಿದೆ’ ಎಂದು ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಅಧಿಕಾರಿ ಡಾ.ಬಿ.ಎಸ್.ರೆಡ್ಡಿ ತಿಳಿಸಿದ್ದಾರೆ.