ಜೋರಾದ ಮಳೆಗೆ ಫಲ ಉದುರಿ ಕಾಯಿ ಕೂಡಾ ಕಪ್ಪು ಬಣ್ಣಕ್ಕೆ ತಿರುಗಿವೆ. ಇವೆಲ್ಲದರ ನಡುವೆ ಜಮೀನಿನಲ್ಲಿ ನೀರು ನಿಂತು ಬೆಳೆ ಕೊಳೆತು ಒಣಗಿವೆ. ತಾಲ್ಲೂಕಿನ ಮದ್ರಕಿ, ಮುಡಬೂಳ, ಅಣಬಿ, ಶಿರವಾಳ, ಹುಲಕಲ್ ಸೇರಿದಂತೆ ಕಪ್ಪು ಮಣ್ಣು ಮಿಶ್ರಿತ ಜಮೀನುಗಳಲ್ಲಿ ಹೆಚ್ಚಿನ ನಷ್ಟ ಉಂಟಾಗಿದೆ ಎನ್ನುತ್ತಾರೆ ರೈತ ಮುಖಂಡ ಅಶೋಕರಾವ್ ಮಲ್ಲಾಬಾದಿ.