ಜನತಾ ಕರ್ಫ್ಯೂ ವೇಳೆ ಮನೆಯಿಂದ ಹೊರ ಬರದೇ ಮನೆಯಲ್ಲಿ ಇದ್ದು ಸೋಂಕು ತುಂಡರಿಸಲು ಸಹಕರಿಸಬೇಕು. ಮಧುಮೇಹಿ, ಅಸ್ತಮಾ, ರಕ್ತದೋತ್ತಡ ಇರುವವರು ಜಾಗೃತಿ ವಹಿಸಬೇಕು. ಉಸಿರಾಟ ತೊಂದರೆ ಇದ್ದವರು ಮಾತ್ರ ಆಸ್ಪತ್ರೆಗೆ ತೆರಳಬೇಕು. ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಳ್ಳಬೇಕು. ಇವುಗಳಿಂದ ನಮ್ಮನ್ನು ನಾವು ಕೋವಿಡ್ನಿಂದ ರಕ್ಷಿಸಿಕೊಳ್ಳಲು ಸಾಧ್ಯವಿದೆ.