ಯಾದಗಿರಿ: ಕಳೆದ ಎರಡು ದಿನಗಳಿಂದ ಸುರಿದ ಆಲಿಕಲ್ಲು, ಗಾಳಿ ಮಳೆಯಿಂದ ಹಾನಿಯಾದ ಯಾದಗಿರಿ ಮತಕ್ಷೇತ್ರದ ಅಬ್ಬೆತುಮಕೂರು, ಹೆಡಗಿಮದ್ರಾ, ತಳಕ ಗ್ರಾಮಗಳಿಗೆ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಭೇಟಿ ನೀಡಿ ಪರಿಶೀಲನೆ ಮಾಡಿದರು.
ರೈತರ ಜಮೀನಿನಲ್ಲಿ ಬೆಳೆದ ಭತ್ತದ ಬೆಳೆ ನಾಶವಾಗಿದೆ. ರೈತರಲ್ಲಿ ಸಂಕಷ್ಟ ಹೆಚ್ಚಾಗಿರುವುದನ್ನು ಗಮನಿಸಿದ್ದೇನೆ. ಸರ್ಕಾರದಿಂದ ಬೆಳೆ ನಷ್ಟ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ವೇಳೆ ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಮುಖಂಡರಾದ ಮಲ್ಲಣ್ಣಗೌಡ ಹತ್ತಿಕುಣಿ, ಶರಣಗೌಡ ಬಾಡಿಯಾಳ, ಖಂಡಪ್ಪ ದಾಸನ್, ಸುರೇಶ ರಾಠೋಡ್ ಹಾಗೂ ಪರ್ವತಪ್ಪ ಠಾಣಗುಂದಿ ಸೇರಿದಂತೆ ರೈತರು ಇದ್ದರು.