ಸೈದಾಪುರ ಸುತ್ತಮುತ್ತಲಿನ ಗ್ರಾಮಗಳಾದ ಕಣೇಕಲ್, ಆನೂರು(ಬಿ), ಆನೂರು (ಕೆ), ಗೂಡೂರು, ಭೀಮನಳ್ಳಿ, ಗೊಂದಡಗಿ, ಬೆಳಗುಂದಿ, ಕಡೇಚೂರು, ಶೆಟ್ಟಿಹಳ್ಳಿ, ಬಾಡಿಯಾಲ, ಬಳಿಚಕ್ರ, ಕಿಲ್ಲನಕೇರಾ, ರಾಂಪುರ, ಬಾಲಚೇಡ ಗ್ರಾಮಗಳು ಸೇರಿದಂತೆ ಅನೇಕ ಕಡೆ ಮಂಗಳವಾರ ಮತ್ತು ಬುಧವಾರ ಮಧ್ಯಾಹ್ನ ಗುಡುಗು ಸಹಿತ ಜೋರಾದ ಗಾಳಿ, ಮಳೆಯು ಒಟ್ಟಿಗೆ ಬಂದಿದ್ದರಿಂದ ಕಾಳು ಕಟ್ಟುವ ಹಂತದಲ್ಲಿದ್ದ ಭತ್ತ ನೆಲಕ್ಕೆ ಒರಗಿದೆ.