ಬೆಳಿಗ್ಗೆ 6ಗಂಟೆಯಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಅನುವು ಮಾಡಿಕೊಡಲಾಗಿತ್ತು. ನಂತರ ಪೊಲೀಸರು ಬಲವಂತದಿಂದ ಅಂಗಡಿ ಬಂದ್ ಮಾಡಿಸಿದರು. ಗ್ರಾಮಸ್ಥರು ಅನಿವಾರ್ಯವಾಗಿ ಗ್ರಾಮದ ಕಡೆ ಮುಖ ಮಾಡಿದರು. ಮಧ್ಯಾಹ್ನವಾಗುತ್ತಿದ್ದಂತೆ ವಾಹನಗಳ ಓಡಾಟವು ಕಡಿಮೆಯಾಯಿತು. ಇದರಿಂದ ಹೆದ್ದಾರಿ ಸಂಚಾರ ಬಿಕೊ ಎನ್ನುತ್ತಿತ್ತು.