ಯಾದಗಿರಿ: ‘ಪ್ರಜಾವಾಣಿ’ ಕನ್ನಡ ದಿನ ಪತ್ರಿಕೆ ಹೊರ ತಂದಿರುವ ‘ದೀಪಾವಳಿ’ ವಿಶೇಷಾಂಕವನ್ನು ಜಿಲ್ಲಾಧಿಕಾರಿ ಸ್ನೇಹಲ್ ಆರ್., ತಮ್ಮ ಕಚೇರಿಯಲ್ಲಿ ಗುರುವಾರ ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ‘ದೀಪಾವಳಿ’ ವಿಶೇಷಾಂಕ ವಿಶೇಷವನ್ನು ಹೊಂದಿದೆ. ಕಥೆ, ಕವನ, ಪ್ರವಾಸ ಕಥನ, ಅಡುಗೆ, ಮಕ್ಕಳ ಕಥೆಗಳು, ಸ್ಪರ್ಧಾ ಕಥೆಗಳು ಓದುಗರನ್ನು ಸೆಳೆಯುತ್ತವೆ ಎಂದು ಅಭಿಪ್ರಾಯಿಸಿದರು.
ಪುಟಗಳು ಉತ್ತಮ ವಿನ್ಯಾಸ ಹೊಂದಿದ್ದು, ಓದುಗರನ್ನು ಆಕರ್ಷಿಸುತ್ತವೆ. ಹಲವಾರು ಲೇಖಕರು ತಮ್ಮ ಅನುಭವಗಳನ್ನು ದಾಖಲಿಸಿಟ್ಟಿದ್ದಾರೆ.ಕಥಾ ಸ್ಪರ್ಧೆ, ಮೆಚ್ಚುಗೆ ಪಡೆದ ಕವನಗಳು ಇವೆ ಎಂದರು.
ವಿಶೇಷಾಂಕ ಜೊತೆಗೆ ಸಮೃದ್ಧ ಕರ್ನಾಟಕ ಉಚಿತ ಕೊಡುಗೆ ಲಭ್ಯವಿದೆ.
ಈ ವೇಳೆ ಜಿಲ್ಲಾ ವರದಿಗಾರ ಬಿ.ಜಿ.ಪ್ರವೀಣಕುಮಾರ, ಪ್ರಸರಣ ವಿಭಾಗದ ಪ್ರತಿನಿಧಿ ಮಹಾಂತೇಶ ಬಸಗೊಂಡೆ, ಛಾಯಾಚಿತ್ರ ಗ್ರಾಹಕ ರಾಜಕುಮಾರ ನಳ್ಳಿಕರ ಇದ್ದರು.