ಆಯುಷ್ ಇಲಾಖೆ ಸೂಚಿಸಿದ ರೋಗ ನಿರೋಧಕ ಶಕ್ತಿ ಹೆಚ್ಚುವ ಮಾತ್ರೆ, ಕಷಾಯ ಸೇವಿಸುತ್ತಾ ಬಂದಿದ್ದೇನೆ. ಅಮೃತ ಬಳ್ಳಿ ಕಷಾಯ, ಅಮೃತ ಚೂರ್ಣ ಸೇವಿಸುತ್ತೇನೆ. ಕೊರೊನಾ ಸೋಂಕಿನ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ. ಕೆಮ್ಮು, ನೆಗಡಿ, ತಲೆನೋವು, ಜ್ವರ ಯಾವುದು ಬಂದಿಲ್ಲ. ಪರೀಕ್ಷೆ ಮಾಡಿಸಿದ ಮೇಲೆ ಕೋವಿಡ್ ಇರುವುದು ಗೊತ್ತಾಗಿದೆ. ಹೀಗಾಗಿ ಸಹಜವಾಗಿ ಇರಬೇಕು. ಯಾವುದೇ ಆತಂಕ ಪಡಬಾರದು.