‘ಭೀಮಾ ಪ್ಲ್ಯಾಂಕ್ ಕಾಮಗಾರಿಯೂ ₹32.19 ಕೋಟಿ ಅಂದಾಜು ಮೊತ್ತವಿದ್ದು, ₹27.81 ಕೋಟಿ ಟೆಂಡರ್ ಮೊತ್ತವಾಗಿದೆ. 11 ತಿಂಗಳು ಕಾಲಾವಧಿ ನಿಗದಿ ಪಡಿಸಲಾಗಿತ್ತು. ಎರಡು ವರ್ಷ ಕಳೆದರೂ ಕಾಮಗಾರಿ ಇನ್ನೂ ಮುಗಿದಿಲ್ಲ. ಇದರಿಂದ ಬಹುನಿರೀಕ್ಷಿತ ಯೋಜನೆ ನನೆಗುದಿಗೆ ಬಿದ್ದಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸಿ ಕಾಮಗಾರಿ ಶೀಘ್ರ ಮುಗಿಯುವಂತೆ ನೋಡಿಕೊಳ್ಳಬೇಕು’ ಎಂದು ಆಗ್ರಹಿಸಿದರು. ಮುಖಂಡರಾದ ಭೀಮಣ್ಣ ಬೂದಿಹಾಳ, ದೇವು ಜಡಿ, ಬೀರಪ್ಪ ಬಾಗಲಕೋಟೆ ಇದ್ದರು.