ನಂತರ ಮಾತಾಡಿದ ಅವರು, ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶೀತ, ಕೆಮ್ಮು, ಜ್ವರ ಸೇರಿದಂತೆ ಕೊರೊನಾ ಲಕ್ಷಣ ಕಂಡು ಬಂದಲ್ಲಿ ಗಂಟಲು ದ್ರವ ಪರೀಕ್ಷೆ ಮಾಡಿಸಿಕೊಳ್ಳಬೇಕು. ಗಂಟಲು ದ್ರವ ಪಡೆಯಲು ಸಂಚಾರಿ ಗಂಟಲು ದ್ರವ ಪರೀಕ್ಷಾ ವಾಹನ ಬರಲಿದ್ದು, ಸಾರ್ವಜನಿಕರು ಪರೀಕ್ಷೆ ಮಾಡಿಕೊಂಡು ಪಾಸಿಟಿವ್ ಬಂದರೆ ವೈದ್ಯಕೀಯ ಸೇವೆ ಪಡೆದು ಗುಣಮುಖರಾಗಬೇಕು ಎಂದು ಹೇಳಿದರು.