ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ

Last Updated 26 ಮೇ 2020, 1:05 IST
ಅಕ್ಷರ ಗಾತ್ರ

ಸುರಪುರ:‘ಭೈರಿಮರಡಿ ಕೆರೆಯ ಮತ್ತು ನಾಲೆಯ ಹೂಳೆತ್ತುವುದರಿಂದ ಅಂತರ್ಜಲ ಹೆಚ್ಚಾಗುತ್ತದೆ. ಇದರಿಂದ ಈ ಭಾಗದ ಜನರಿಗೆ ನೀರಾವರಿ ಮತ್ತು ಕುಡಿಯುವ ನೀರಿಗೆ ಅನುಕೂಲವಾಗುತ್ತದೆ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪನಾಯಕ ಹೇಳಿದರು.

ತಾಲ್ಲೂಕಿನ ಭೈರಿಮರಡಿ ಗ್ರಾಮದಲ್ಲಿ ಭಾನುವಾರ ಭಾರತೀಯ ಜೈನ್ ಸಂಘಟನೆ ಜಿಲ್ಲಾಡಳಿತದ ಸಹಯೋಗದಲ್ಲಿ ಕೈಗೊಂಡಿರುವ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಭಾರತೀಯ ಜೈನ್ ಸಂಘಟನೆಯ ಈ ಸತ್ಕಾರ್ಯ ಮೆಚ್ಚುವಂಥದ್ದು. ಜೈನ್ ಸಂಘಟನೆ ಇಂತಹ ಅನೇಕ ಪರೋಪಕಾರಿ ಕೆಲಸ ಮಾಡುತ್ತಿದ್ದು, ಜನರ ಸಹಾಯಕ್ಕೆ ನಿಂತಿದೆ’ ಎಂದು ಶ್ಲಾಘಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಲಕ್ಷ್ಮೀ ದೊಡ್ಡದೇಸಾಯಿ, ಬಿಜೆಪಿ ಮುಖಂಡರಾದ ಬಲಭೀಮನಾಯಕ ಭೈರಿಮರಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ದ್ಯಾವಮ್ಮ ಸವಳಪಟ್ಟಿ, ಸಣ್ಣದೇಸಾಯಿ ದೇವರಗೋನಾಲ, ಶರಣುನಾಯಕ ಭೈರಿಮರಡಿ, ಗ್ರಾಮ ಪಂಚಾಯಿತಿ ಸದಸ್ಯ ವೆಂಕಟೇಶನಾಯಕ ಭೈರಿಮರಡಿ, ಎಂಜಿನಿಯರ್ ಸುಭಾನ ಅಲಿ, ಜೈನ್ ಸಂಘಟನೆಯ ತಾಲ್ಲೂಕು ಸಂಯೋಜಕ ವೆಂಕಟೇಶ ದೇವಾಪುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT