<p><strong>ಯಾದಗಿರಿ:</strong> ನಗರದ ನಿವಾಸಿ ಅವಿನಾಶ ಹಪ್ಪಳ ಅವರು ಓದಿದ್ದು ಸಾಫ್ಟ್ವೇರ್ ಎಂಜಿನಿಯರಿಂಗ್ ಪದವಿ. ಉತ್ತರಾಖಂಡದಲ್ಲಿ ಕೇಂದ್ರ ಇಂಧನ ಇಲಾಖೆಯಲ್ಲಿ ಹೊರಗುತ್ತಿಗೆ ನೌಕರನಾಗಿದ್ದು, ಕೈತುಂಬಾ ಸಂಬಳ ಸಿಗುತ್ತಿದ್ದ ಉದ್ಯೋಗವನ್ನು ತೊರೆದು ಮಾವಿನ ತೋಟದ ಬೇಸಾಯದಲ್ಲಿ ತೊಡಗಿಸಿಕೊಂಡು ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ.</p>.<p>ಅವಿನಾಶ ಅವರು ಮುಂಡರಗಿ ಸಮೀಪದ ಯಾದಗಿರಿ– ರಾಯಚೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ 3 ಎಕರೆ ಜಮೀನು ಹೊಂದಿದ್ದಾರೆ. ಅದರಲ್ಲಿ ಪ್ರಧಾನವಾಗಿ ಮಾವು ಬೆಳೆಗಳಿಗೆ ಒತ್ತು ಕೊಟ್ಟಿದ್ದಾರೆ. ಗಿಡದಲ್ಲಿ ಮಾವಿನ ಮಿಡಿಗಳು ಬಲಿಯುತ್ತಿದ್ದಂತೆ ಅವರ ತಂದೆ ದುರ್ಗಪ್ಪ ಅವರು ಗಿಡಗಳನ್ನು ವ್ಯಾಪಾರಿಗಳಿಗೆ ಗುತ್ತಿಗೆ ಕೊಡುತ್ತಿದ್ದರು. ಈ ಪದ್ಧತಿಗೆ ಇತಿಶ್ರೀ ಹಾಡಿದ ಅವಿನಾಶ, ತಾವೇ ಮಾವುಗಳನ್ನು ಕಟಾವು ಮಾಡಿ ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಮಾರಾಟವೂ ಮಾಡುತ್ತಿದ್ದಾರೆ.</p>.<p>ದಟ್ಟವಾಗಿ ಬಿದ್ದ ಮಂಜು, ಅಂಟು ದ್ರವ ಸೋರುವಿಕೆ ಹವಾಮಾನ ವೈಪರೀತ್ಯಗಳ ಕಾರಣದಿಂದ ಜಿಲ್ಲೆಯಾದ್ಯಂತ ಮಾವಿನ ಇಳುವರಿ ಕುಂಠಿತಗೊಂಡಿತ್ತು. ಜೊತೆಗೆ ಕಳೆದ ಒಂದು ವಾರದಿಂದ ಅನ್ಯ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಯಥೇಚ್ಛ ಮಾವು ಯಾದಗಿರಿಗೆ ಆವಾಕ ಆಗುತ್ತಿದೆ. ಇದರಿಂದಾಗಿ ಬೆಲೆ ಇಳಿಮುಖವಾಗಿ ಕೆಲ ಬೆಳೆಗಾರರು ನಷ್ಟು ಅನುಭವಿಸುತ್ತಿದ್ದಾರೆ.</p>.<p>ಆದರೆ, ಅವಿನಾಶ ಅವರು ತಮ್ಮ ತೋಟದಲ್ಲಿ ಬೆಳೆದ ಬಂಗನಪಲ್ಲಿ (ಬೆನಿಶಾನ್), ಕೇಸರ್, ದಶೇರಿ, ಮಲ್ಲಿಕಾ, ಹಿಮಾಯತ್, ಖಾದರ್, ತೋತಾಪುರಿ, ಸ್ವರ್ಣರೇಖಾ ಹಾಗೂ ಮಲಗೋವಾ ತಳಿಯ ಮಾವುಗಳನ್ನು ಬೆಳೆದು ನೈಸರ್ಗಿಕವಾಗಿ ಮಾಗಿಸಿ ತಾವೇ ಮಾರಾಟ ಮಾಡುತ್ತಿದ್ದಾರೆ. ಇದಕ್ಕಾಗಿ ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡಿದ್ದಾರೆ. ಸ್ಥಳೀಯ ಮಾರುಕಟ್ಟೆ ಮಾತ್ರವಲ್ಲದೆ ಬೆಂಗಳೂರು, ರಾಯಚೂರು, ಬಳ್ಳಾರಿ ಹಾಗೂ ದಾವಣಗೆರೆಗೂ ಮಾರಾಟ ಮಾಡಿದ್ದಾರೆ.</p>.<p>‘ತಿಂಗಳಿಗೆ ₹ 75 ಸಾವಿರ ವೇತನದಂತೆ ಐದು ವರ್ಷಗಳು ಉತ್ತರಾಖಂಡದಲ್ಲಿ ಕೆಲಸ ಮಾಡಿದೆ. ಕೃಷಿಯ ಕಡೆಗೆ ಒಲವು ಮೂಡಿ ತಂದೆಗೆ ಬೇಸಾಯ ಕೆಲಸದಲ್ಲಿ ಸಹಾಯ ಮಾಡೋಣ ಎಂದು ನಿರ್ಧರಿಸಿದೆ. ಮಾರುಕಟ್ಟೆಯ ಅನುಭವ ಇಲ್ಲದಿದ್ದರೂ ಒಂದಿಷ್ಟು ಅಧ್ಯಯನ ಮಾಡಿ, ಸೋಷಿಯಲ್ ಮೀಡಿಯಾ ಮುಖೇನ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡು ಮಾವು ಮಾರುತ್ತಿದ್ದೇನೆ’ ಎಂದು ಅವಿನಾಶ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ತೋಟದಲ್ಲಿರುವ 115 ಮಾವಿನ ಮರಗಳ ಪೈಕಿ 108 ಮರಗಳಲ್ಲಿ ಫಲ ಬಿಟ್ಟಿವೆ. ನೈಸರ್ಗಿಕವಾಗಿ ಮಾಗಿಸಿದ್ದರಿಂದ ಹಣುಗಳು ರುಚಿಯಾಗಿವೆ. ಖಾದರ್ ತಳಿ ಒಂದೇ 300 ಕೆ.ಜಿ.ಯಷ್ಟು ಖರೀದಿಯಾಗಿದೆ. ಶುಕ್ರವಾರ ಒಂದೇ ದಿನ 800 ಕೆ.ಜಿ.ಯಷ್ಟು ಮಾರಾಟವಾಗಿದೆ. ಒಟ್ಟಾರಿ ಈ ವರ್ಷ 3,000 ಕೆ.ಜಿ.ಯಷ್ಟು ಇಳುವರಿ ಬರುವ ನಿರೀಕ್ಷೆ ಇದೆ’ ಎಂದರು.</p>.<p>ಕೋಳಿ ಸಾಕಾಣಿಕೆ, ಹೈನುಗಾರಿಕೆ, ಜೇನು ಸಾಕಾಣಿಗೆ ಕೈಗೊಂಡು ಸಮಗ್ರ ಕೃಷಿ ಮಾಡುವ ಇಚ್ಛೆಯೂ ಹೊಂದಿದ್ದಾರೆ. ತೋಟಕ್ಕೆ ಭೇಟಿ ನೀಡಿದ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು, ಒಂದಿಷ್ಟು ಸಲಹೆಗಳನ್ನು ನೀಡಿ ಬೆನ್ನುತಟ್ಟಿದ್ದಾರೆ. ಇಲಾಖೆಯ ಯೋಜನೆಗಳ ಸದ್ಬಳಕೆಯ ಬಗ್ಗೆಯೂ ತಿಳಿಸಿದ್ದಾರೆ.</p>.<div><blockquote>ತೋಟದಲ್ಲಿ ಬೆಳೆದ ಮರಗಳನ್ನು ಗುತ್ತಿಗೆ ಕೊಡುವುದಕ್ಕಿಂತ ನಾವೇ ನಿರ್ವಹಣೆ ಮಾಡಿ ಮಾರುಕಟ್ಟೆಯೂ ಮಾಡಿದರೆ ಹೆಚ್ಚಿನ ಲಾಭ ಪಡೆಯಬಹುದು </blockquote><span class="attribution">ಅವಿನಾಶ ಹಪ್ಪಳ ಯುವ ಕೃಷಿಕ</span></div>.<p><strong>ಯುವ ಕೃಷಿಕರಿಗೆ ಅಗತ್ಯ ಸಹಕಾರ’ ‘</strong></p><p>ಯುವಕರು ಕೃಷಿಯತ್ತ ಮುಖ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು ಜಿಲ್ಲೆಯಲ್ಲಿ ತೋಟಗಾರಿಕೆ ಪ್ರದೇಶವೂ ವಿಸ್ತರಣೆಯಾಗಲಿದೆ. ಬೇಸಾಯದಲ್ಲಿ ತೊಡಗಿಸಿಕೊಳ್ಳಲು ಮುಂದೆ ಬರುವ ಯುವ ಕೃಷಿಕರಿಗೆ ಅಗತ್ಯವಾದ ಸಹಕಾರ ನೀಡಲಾಗುವುದು’ ಎಂದು ತೋಟಗಾರಿಕೆ ಉಪನಿರ್ದೇಶಕ ರಾಘವೇಂದ್ರ ಉಕ್ಕಿನಾಳ ‘ಪ್ರಜಾವಾಣಿ’ಗೆ ತಿಳಿಸಿದರು.</p><p> ‘ಹೊಸ ಮಾದರಿಯ ಪ್ರಯೋಗಳಿಗೆ ತೆರೆದುಕೊಂಡು ಬೇರೆ ಬೇರೆ ಬೆಳೆಗಳನ್ನು ಬೆಳೆಯುವರು. ಜಿಲ್ಲೆ ಮಾತ್ರವಲ್ಲದೆ ಹೊರಗಡೆಯೂ ಮಾರುಕಟ್ಟೆಯನ್ನು ಸೃಷ್ಟಿಸಿಕೊಳ್ಳುವ ಕೌಶಲ ಯುವಕರಿಗೆ ತಿಳಿದಿದೆ’ ಎಂದರು. </p><p>‘ಈ ಬಾರಿ ಮಾವು ಬೆಳೆಯ ಇಳುವರಿ ಕುಂಠಿತವಾಗಿದೆ. ಜೊತೆಗೆ ಹೊರಗಡೆಯಿಂದಲೂ ಸಾಕಷ್ಟು ಮಾವು ಆವಕ ಆಗುತ್ತಿದೆ. ಮಾರುಕಟ್ಟೆಯ ದರ ಏರಿಳಿತವನ್ನು ನಿಭಾಯಿಸಲು ಮಾವು ಬೆಳೆಗಾರರು ಸಂಘವನ್ನು ರಚಿಸಿಕೊಂಡು ಒಗ್ಗೂಡಬೇಕು. ಎಲ್ಲರೂ ಒಂದಾಗಿ ಬಂದರೆ ಜಿಲ್ಲಾಡಳಿತದಿಂದ ಬೇರೆ ಜಿಲ್ಲೆಗಳಲ್ಲಿ ನಡೆಸುವಂತೆ ಮಾವು ಮೇಳವನ್ನು ಆಯೋಜಿಸಿ ಮಾರುಕಟ್ಟೆ ಕಲ್ಪಿಸುವ ವ್ಯವಸ್ಥೆ ಮಾಡಲಾಗುವುದು’ ಎನ್ನುತ್ತಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ:</strong> ನಗರದ ನಿವಾಸಿ ಅವಿನಾಶ ಹಪ್ಪಳ ಅವರು ಓದಿದ್ದು ಸಾಫ್ಟ್ವೇರ್ ಎಂಜಿನಿಯರಿಂಗ್ ಪದವಿ. ಉತ್ತರಾಖಂಡದಲ್ಲಿ ಕೇಂದ್ರ ಇಂಧನ ಇಲಾಖೆಯಲ್ಲಿ ಹೊರಗುತ್ತಿಗೆ ನೌಕರನಾಗಿದ್ದು, ಕೈತುಂಬಾ ಸಂಬಳ ಸಿಗುತ್ತಿದ್ದ ಉದ್ಯೋಗವನ್ನು ತೊರೆದು ಮಾವಿನ ತೋಟದ ಬೇಸಾಯದಲ್ಲಿ ತೊಡಗಿಸಿಕೊಂಡು ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ.</p>.<p>ಅವಿನಾಶ ಅವರು ಮುಂಡರಗಿ ಸಮೀಪದ ಯಾದಗಿರಿ– ರಾಯಚೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ 3 ಎಕರೆ ಜಮೀನು ಹೊಂದಿದ್ದಾರೆ. ಅದರಲ್ಲಿ ಪ್ರಧಾನವಾಗಿ ಮಾವು ಬೆಳೆಗಳಿಗೆ ಒತ್ತು ಕೊಟ್ಟಿದ್ದಾರೆ. ಗಿಡದಲ್ಲಿ ಮಾವಿನ ಮಿಡಿಗಳು ಬಲಿಯುತ್ತಿದ್ದಂತೆ ಅವರ ತಂದೆ ದುರ್ಗಪ್ಪ ಅವರು ಗಿಡಗಳನ್ನು ವ್ಯಾಪಾರಿಗಳಿಗೆ ಗುತ್ತಿಗೆ ಕೊಡುತ್ತಿದ್ದರು. ಈ ಪದ್ಧತಿಗೆ ಇತಿಶ್ರೀ ಹಾಡಿದ ಅವಿನಾಶ, ತಾವೇ ಮಾವುಗಳನ್ನು ಕಟಾವು ಮಾಡಿ ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಮಾರಾಟವೂ ಮಾಡುತ್ತಿದ್ದಾರೆ.</p>.<p>ದಟ್ಟವಾಗಿ ಬಿದ್ದ ಮಂಜು, ಅಂಟು ದ್ರವ ಸೋರುವಿಕೆ ಹವಾಮಾನ ವೈಪರೀತ್ಯಗಳ ಕಾರಣದಿಂದ ಜಿಲ್ಲೆಯಾದ್ಯಂತ ಮಾವಿನ ಇಳುವರಿ ಕುಂಠಿತಗೊಂಡಿತ್ತು. ಜೊತೆಗೆ ಕಳೆದ ಒಂದು ವಾರದಿಂದ ಅನ್ಯ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಯಥೇಚ್ಛ ಮಾವು ಯಾದಗಿರಿಗೆ ಆವಾಕ ಆಗುತ್ತಿದೆ. ಇದರಿಂದಾಗಿ ಬೆಲೆ ಇಳಿಮುಖವಾಗಿ ಕೆಲ ಬೆಳೆಗಾರರು ನಷ್ಟು ಅನುಭವಿಸುತ್ತಿದ್ದಾರೆ.</p>.<p>ಆದರೆ, ಅವಿನಾಶ ಅವರು ತಮ್ಮ ತೋಟದಲ್ಲಿ ಬೆಳೆದ ಬಂಗನಪಲ್ಲಿ (ಬೆನಿಶಾನ್), ಕೇಸರ್, ದಶೇರಿ, ಮಲ್ಲಿಕಾ, ಹಿಮಾಯತ್, ಖಾದರ್, ತೋತಾಪುರಿ, ಸ್ವರ್ಣರೇಖಾ ಹಾಗೂ ಮಲಗೋವಾ ತಳಿಯ ಮಾವುಗಳನ್ನು ಬೆಳೆದು ನೈಸರ್ಗಿಕವಾಗಿ ಮಾಗಿಸಿ ತಾವೇ ಮಾರಾಟ ಮಾಡುತ್ತಿದ್ದಾರೆ. ಇದಕ್ಕಾಗಿ ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡಿದ್ದಾರೆ. ಸ್ಥಳೀಯ ಮಾರುಕಟ್ಟೆ ಮಾತ್ರವಲ್ಲದೆ ಬೆಂಗಳೂರು, ರಾಯಚೂರು, ಬಳ್ಳಾರಿ ಹಾಗೂ ದಾವಣಗೆರೆಗೂ ಮಾರಾಟ ಮಾಡಿದ್ದಾರೆ.</p>.<p>‘ತಿಂಗಳಿಗೆ ₹ 75 ಸಾವಿರ ವೇತನದಂತೆ ಐದು ವರ್ಷಗಳು ಉತ್ತರಾಖಂಡದಲ್ಲಿ ಕೆಲಸ ಮಾಡಿದೆ. ಕೃಷಿಯ ಕಡೆಗೆ ಒಲವು ಮೂಡಿ ತಂದೆಗೆ ಬೇಸಾಯ ಕೆಲಸದಲ್ಲಿ ಸಹಾಯ ಮಾಡೋಣ ಎಂದು ನಿರ್ಧರಿಸಿದೆ. ಮಾರುಕಟ್ಟೆಯ ಅನುಭವ ಇಲ್ಲದಿದ್ದರೂ ಒಂದಿಷ್ಟು ಅಧ್ಯಯನ ಮಾಡಿ, ಸೋಷಿಯಲ್ ಮೀಡಿಯಾ ಮುಖೇನ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡು ಮಾವು ಮಾರುತ್ತಿದ್ದೇನೆ’ ಎಂದು ಅವಿನಾಶ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ತೋಟದಲ್ಲಿರುವ 115 ಮಾವಿನ ಮರಗಳ ಪೈಕಿ 108 ಮರಗಳಲ್ಲಿ ಫಲ ಬಿಟ್ಟಿವೆ. ನೈಸರ್ಗಿಕವಾಗಿ ಮಾಗಿಸಿದ್ದರಿಂದ ಹಣುಗಳು ರುಚಿಯಾಗಿವೆ. ಖಾದರ್ ತಳಿ ಒಂದೇ 300 ಕೆ.ಜಿ.ಯಷ್ಟು ಖರೀದಿಯಾಗಿದೆ. ಶುಕ್ರವಾರ ಒಂದೇ ದಿನ 800 ಕೆ.ಜಿ.ಯಷ್ಟು ಮಾರಾಟವಾಗಿದೆ. ಒಟ್ಟಾರಿ ಈ ವರ್ಷ 3,000 ಕೆ.ಜಿ.ಯಷ್ಟು ಇಳುವರಿ ಬರುವ ನಿರೀಕ್ಷೆ ಇದೆ’ ಎಂದರು.</p>.<p>ಕೋಳಿ ಸಾಕಾಣಿಕೆ, ಹೈನುಗಾರಿಕೆ, ಜೇನು ಸಾಕಾಣಿಗೆ ಕೈಗೊಂಡು ಸಮಗ್ರ ಕೃಷಿ ಮಾಡುವ ಇಚ್ಛೆಯೂ ಹೊಂದಿದ್ದಾರೆ. ತೋಟಕ್ಕೆ ಭೇಟಿ ನೀಡಿದ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು, ಒಂದಿಷ್ಟು ಸಲಹೆಗಳನ್ನು ನೀಡಿ ಬೆನ್ನುತಟ್ಟಿದ್ದಾರೆ. ಇಲಾಖೆಯ ಯೋಜನೆಗಳ ಸದ್ಬಳಕೆಯ ಬಗ್ಗೆಯೂ ತಿಳಿಸಿದ್ದಾರೆ.</p>.<div><blockquote>ತೋಟದಲ್ಲಿ ಬೆಳೆದ ಮರಗಳನ್ನು ಗುತ್ತಿಗೆ ಕೊಡುವುದಕ್ಕಿಂತ ನಾವೇ ನಿರ್ವಹಣೆ ಮಾಡಿ ಮಾರುಕಟ್ಟೆಯೂ ಮಾಡಿದರೆ ಹೆಚ್ಚಿನ ಲಾಭ ಪಡೆಯಬಹುದು </blockquote><span class="attribution">ಅವಿನಾಶ ಹಪ್ಪಳ ಯುವ ಕೃಷಿಕ</span></div>.<p><strong>ಯುವ ಕೃಷಿಕರಿಗೆ ಅಗತ್ಯ ಸಹಕಾರ’ ‘</strong></p><p>ಯುವಕರು ಕೃಷಿಯತ್ತ ಮುಖ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು ಜಿಲ್ಲೆಯಲ್ಲಿ ತೋಟಗಾರಿಕೆ ಪ್ರದೇಶವೂ ವಿಸ್ತರಣೆಯಾಗಲಿದೆ. ಬೇಸಾಯದಲ್ಲಿ ತೊಡಗಿಸಿಕೊಳ್ಳಲು ಮುಂದೆ ಬರುವ ಯುವ ಕೃಷಿಕರಿಗೆ ಅಗತ್ಯವಾದ ಸಹಕಾರ ನೀಡಲಾಗುವುದು’ ಎಂದು ತೋಟಗಾರಿಕೆ ಉಪನಿರ್ದೇಶಕ ರಾಘವೇಂದ್ರ ಉಕ್ಕಿನಾಳ ‘ಪ್ರಜಾವಾಣಿ’ಗೆ ತಿಳಿಸಿದರು.</p><p> ‘ಹೊಸ ಮಾದರಿಯ ಪ್ರಯೋಗಳಿಗೆ ತೆರೆದುಕೊಂಡು ಬೇರೆ ಬೇರೆ ಬೆಳೆಗಳನ್ನು ಬೆಳೆಯುವರು. ಜಿಲ್ಲೆ ಮಾತ್ರವಲ್ಲದೆ ಹೊರಗಡೆಯೂ ಮಾರುಕಟ್ಟೆಯನ್ನು ಸೃಷ್ಟಿಸಿಕೊಳ್ಳುವ ಕೌಶಲ ಯುವಕರಿಗೆ ತಿಳಿದಿದೆ’ ಎಂದರು. </p><p>‘ಈ ಬಾರಿ ಮಾವು ಬೆಳೆಯ ಇಳುವರಿ ಕುಂಠಿತವಾಗಿದೆ. ಜೊತೆಗೆ ಹೊರಗಡೆಯಿಂದಲೂ ಸಾಕಷ್ಟು ಮಾವು ಆವಕ ಆಗುತ್ತಿದೆ. ಮಾರುಕಟ್ಟೆಯ ದರ ಏರಿಳಿತವನ್ನು ನಿಭಾಯಿಸಲು ಮಾವು ಬೆಳೆಗಾರರು ಸಂಘವನ್ನು ರಚಿಸಿಕೊಂಡು ಒಗ್ಗೂಡಬೇಕು. ಎಲ್ಲರೂ ಒಂದಾಗಿ ಬಂದರೆ ಜಿಲ್ಲಾಡಳಿತದಿಂದ ಬೇರೆ ಜಿಲ್ಲೆಗಳಲ್ಲಿ ನಡೆಸುವಂತೆ ಮಾವು ಮೇಳವನ್ನು ಆಯೋಜಿಸಿ ಮಾರುಕಟ್ಟೆ ಕಲ್ಪಿಸುವ ವ್ಯವಸ್ಥೆ ಮಾಡಲಾಗುವುದು’ ಎನ್ನುತ್ತಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>