ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಯುರ್ವೇದದಿಂದ ರೋಗ ನಿರೋಧಕ ಶಕ್ತಿ ವೃದ್ಧಿ’

Last Updated 10 ಜೂನ್ 2021, 17:44 IST
ಅಕ್ಷರ ಗಾತ್ರ

ಯಾದಗಿರಿ: ‘ಈ ಹಿಂದೆ ಕಾಲರಾ, ಪ್ಲೇಗ್‌ ರೋಗ ಸೇರಿದಂತೆ ಹಲವು ಸಾಂಕ್ರಾಮಿಕ ಒಬ್ಬರಿಂದ ಒಬ್ಬರಿಗೆ ರೋಗಗಳನ್ನು ಆಯುರ್ವೇದ ಔಷಧಿ ಸೇವನೆಯಿಂದ ಗುಣಪಡಿಸಲಾಗಿದೆ. ಈಗ ಕೊರೊನಾ ಕಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಸಹಕಾರಿಯಾಗಿದೆ‘ ಎಂದು ಆಯುಷ್‌ ವೈದ್ಯ ಡಾ.ಪ್ರಮೋದ ಕುಲಕರ್ಣಿ ಹೇಳಿದರು.

ನಗರದ ಪ್ರತಿಕಾ ಭವನದಲ್ಲಿ ಬುಧವಾರ ಪತ್ರಕರ್ತರಿಗೆ ಇಲಾಖೆಯಿಂದ ಔಷಧಿಗಳ ಕಿಟ್‍ಗಳನ್ನು ವಿತರಿಸಿ ಮಾತನಾಡಿದ ಅವರು, ಪ್ರಾಚೀನ ಕಾಲದಿಂದ ದೇಶದಲ್ಲಿ ಆಯುರ್ವೇದ ಔಷಧಿಗಳ ಬಳಕೆ ಪದ್ಧತಿಯಿಂದ ಇಡೀ ಮನುಕುಲ ಹಲವಾರು ರೋಗಗಳಿಂದ ಮುಕ್ತಿ ಹೊಂದಿದೆ. ಕೊರೊನಾ ವೈರಸ್‌ದಾಳಿ ಸಮಯದಲ್ಲಿ ಜನರು ಔಷಧಿಗಳನ್ನು ಬಳಕೆ ಮಾಡಿಕೊಳ್ಳುವುದರಿಂದ ಅವರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಅಭಿಪ್ರಾಯಿಸಿದರು.

ವೈದ್ಯರಾದ ಡಾ. ಮಂಜುನಾಥ, ಡಾ. ಶಿವಲಿಂಗಪ್ಪ ಪಾಟೀಲ, ನಾಗರಾಜ ಕೆಂಭಾವಿ, ಸಂಗಮೇಶ ಕೆಂಭಾವಿ ಹಾಗೂ ಪ್ರಮುಖರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT