ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತಾರಣ್ಯ ವ್ಯಾಪ್ತಿಯ ಕೊಟೆಕೆರೆ ಗ್ರಾಮದ ಬಳಿ ಗುರುವಾರ ಹಂದಿ ದಾಳಿಯಿಂದ ಚಿರತೆ ಮೃತಪಟ್ಟಿದೆ.
ಚಿರತೆಗೆ ಸುಮಾರು 5ರಿಂದ 6 ವರ್ಷ ವಯಸ್ಸಾಗಿದೆ. ಚಿರತೆ ಹಂದಿಯನ್ನು ಬೇಟೆಯಾಡುವಾಗ, ಹಂದಿಯೇ ಕುತ್ತಿಗೆ ಭಾಗಕ್ಕೆ ತಿವಿದು ಸಾಯಿಸಿದೆ. ದಾಳಿಯ ರಭಸಕ್ಕೆ ಚಿರತೆಯ ಕುತ್ತಿಗೆ ಮೂಳೆ ಮುರಿದು ಹೋಗಿದೆ ಎಂದು ವಲಯ ಅರಣ್ಯಾಧಿಕಾರಿ ನವೀನ್ಕುಮಾರ್ ತಿಳಿಸಿದರು.
ಸ್ಥಳಕ್ಕೆ ಎಸಿಎಫ್ ನಟರಾಜು, ವೈದ್ಯ ನಾಗರಾಜು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.