ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಗದ ನ್ಯಾಯ

Last Updated 21 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ವಿವಿಧ ಇಲಾಖೆಗಳಲ್ಲಿ ಸ್ಟೈಪೆಂಡರಿ ನೌಕರರಾಗಿ ಸೇವೆ ಸಲ್ಲಿಸಿ ನಿವೃತ್ತರಾದವರು ಈಗ ಅತ್ಯಂತ ಕಡಿಮೆ ಪಿಂಚಣಿ ಪಡೆಯುತ್ತಿದ್ದಾರೆ. ಈಗ ಸರ್ಕಾರದ ಯಾವ ಇಲಾಖೆಯಲ್ಲೂ ಸ್ಟೈಪೆಂಡರಿ ಸಿಬ್ಬಂದಿ ಇರಲಾರರು. ಆದರೆ ಹಿಂದೆ ಇವರು ಮಾಸಿಕ ಕೇವಲ ₹ 150 ವೇತನಕ್ಕೆ ಹಂಗಾಮಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಬಂದ ಸರ್ಕಾರಗಳೆಲ್ಲವೂ ಇವರ ಸ್ಟೈಪೆಂಡರಿ ಹೆಚ್ಚಿಸಿದವೇ ಹೊರತು ಇವರಿಗೆ ಸೇವಾಭದ್ರತೆ ನೀಡಲಿಲ್ಲ. ಕೊನೆಗೆ 1991ರಲ್ಲಿ ಸುಪ್ರೀಂ ಕೋರ್ಟ್‌ ಇವರೆಲ್ಲರನ್ನೂ ಕಾಯಂ ಗೊಳಿಸುವಂತೆ ಆದೇಶ ನೀಡಿತು. ಆದರೆ ಅಲ್ಲಿಯೂ ಪದವಿ ವಿದ್ಯಾರ್ಹತೆಯ ಹುದ್ದೆಗಳಿಗೆ ಈ ನೌಕರರನ್ನು ಅನರ್ಹಗೊಳಿಸಲಾಯಿತು.

ಸದ್ಯ ಈಗ ಎಲ್ಲರೂ ನಿವೃತ್ತಿ ಹೊಂದಿದ್ದು, ಈಗ ಇವರಿಗೆ ಪಿಂಚಣಿಯಲ್ಲಿ ಅನ್ಯಾಯವಾಗಿದೆ. ಪ್ರಕರಣದ ವಿಚಾರಣೆ ನಡೆಸಿದ್ದ ಕರ್ನಾಟಕ ಆಡಳಿತ ನ್ಯಾಯಮಂಡಳಿಯು (ಕೆ.ಎ.ಟಿ.) ಪಿಂಚಣಿದಾರರಿಗೆ ಕನಿಷ್ಠ 8 ವರ್ಷ ಅರ್ಹತಾ ಸೇವೆಯನ್ನು ಪರಿಗಣಿಸಿ ಪಿಂಚಣಿ ಲೆಕ್ಕ ಹಾಕಲು ಆದೇಶ ಮಾಡಿತ್ತು. ಆದರೆ ಕರ್ನಾಟಕ ಸರ್ಕಾರ ನಿವೃತ್ತ ಸ್ಟೈಪೆಂಡರಿ ನೌಕರರ ಪಿಂಚಣಿ ಸಮಸ್ಯೆ ನ್ಯಾಯಾಲಯದಲ್ಲಿ ಇರುವಾಗಲೇ 2012 ಏಪ್ರಿಲ್ ತಿಂಗಳಲ್ಲಿ ಕರ್ನಾಟಕ ಸೇವಾ ನಿಯಮಾವಳಿ ತಿದ್ದುಪಡಿ ಮಾಡಿ, ಮತ್ತೆ ಈ ನೌಕರರಿಗೆ ಅನ್ಯಾಯ ಎಸಗಿದೆ. ಈಗಲಾದರೂ ಸರ್ಕಾರ ನ್ಯಾಯಾಲಯದ ಆದೇಶಕ್ಕೆ ಬೆಲೆ ಕೊಟ್ಟು, ಈ ವರ್ಗದ ನೌಕರರಿಗಾದ ಅನ್ಯಾಯ ಸರಿಪಡಿಸಬೇಕು.

- ಪಿ.ಆರ್. ಕಾರಜೋಳ, ಬಾಗಲಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT