ಸದ್ಯ ಈಗ ಎಲ್ಲರೂ ನಿವೃತ್ತಿ ಹೊಂದಿದ್ದು, ಈಗ ಇವರಿಗೆ ಪಿಂಚಣಿಯಲ್ಲಿ ಅನ್ಯಾಯವಾಗಿದೆ. ಪ್ರಕರಣದ ವಿಚಾರಣೆ ನಡೆಸಿದ್ದ ಕರ್ನಾಟಕ ಆಡಳಿತ ನ್ಯಾಯಮಂಡಳಿಯು (ಕೆ.ಎ.ಟಿ.) ಪಿಂಚಣಿದಾರರಿಗೆ ಕನಿಷ್ಠ 8 ವರ್ಷ ಅರ್ಹತಾ ಸೇವೆಯನ್ನು ಪರಿಗಣಿಸಿ ಪಿಂಚಣಿ ಲೆಕ್ಕ ಹಾಕಲು ಆದೇಶ ಮಾಡಿತ್ತು. ಆದರೆ ಕರ್ನಾಟಕ ಸರ್ಕಾರ ನಿವೃತ್ತ ಸ್ಟೈಪೆಂಡರಿ ನೌಕರರ ಪಿಂಚಣಿ ಸಮಸ್ಯೆ ನ್ಯಾಯಾಲಯದಲ್ಲಿ ಇರುವಾಗಲೇ 2012 ಏಪ್ರಿಲ್ ತಿಂಗಳಲ್ಲಿ ಕರ್ನಾಟಕ ಸೇವಾ ನಿಯಮಾವಳಿ ತಿದ್ದುಪಡಿ ಮಾಡಿ, ಮತ್ತೆ ಈ ನೌಕರರಿಗೆ ಅನ್ಯಾಯ ಎಸಗಿದೆ. ಈಗಲಾದರೂ ಸರ್ಕಾರ ನ್ಯಾಯಾಲಯದ ಆದೇಶಕ್ಕೆ ಬೆಲೆ ಕೊಟ್ಟು, ಈ ವರ್ಗದ ನೌಕರರಿಗಾದ ಅನ್ಯಾಯ ಸರಿಪಡಿಸಬೇಕು.