ನೀರಿಲ್ಲದ ಗುಡ್ಡುಗಾಡಿನ 2 ಎಕರೆ ಪ್ರದೇಶದಲ್ಲಿ 16 ಸಾವಿರ ಸಸಿಗಳನ್ನು ನೆಟ್ಟು ಬೆಳೆ ತೆಗೆಯುವ
ಕನಸಲ್ಲಿದ್ದಾಗ, ಎಲ್ಲರೂ ಬೆಳೆ ಬೆಳೆಯುವುದಿಲ್ಲ ಎಂಬ ಭಾವನೆ ಹೊಂದಿದ್ದರು. ಕೊರೆದ 4 ಕೊಳವೆ ಬಾವಿಗಳಲ್ಲಿ ಒಂದರಲ್ಲಿ ಮಾತ್ರ ನೀರು ಸಿಕ್ಕಿತ್ತು. ಅದರಿಂದಲೇ ಹನಿ ನೀರಾವರಿ ಅಳವಡಿಸಿ, ಸಾವಯವ ಗೊಬ್ಬರ ಬಳಸಿ ಈಗ ಮೊದಲ ಫಸಲು ಪಡೆದಿದ್ದಾರೆ.