<p><strong>ಯಾದಗಿರಿ</strong>: ಚಾಲಕರು ಒತ್ತಡ ದಲ್ಲಿ ಕೆಲಸ ಮಾಡುವುದು ಸಾಮಾನ್ಯ ವಾಗಿದ್ದು, ಸಮಯ ಪಾಲನೆಯ ಜತೆಗೆ ಚಾಲನೆಯಲ್ಲಿ ಸುರಕ್ಷತೆಗೂ ಆಧ್ಯತೆ ನೀಡಬೇಕು ಎಂದು ಆರ್ಟಿಒ ಇನ್ಸ್ಪೆಕ್ಟರ್ ವೆಂಕಟಪ್ಪ ಕಲಾಲ್ ಸಲಹೆ ಮಾಡಿದರು.</p>.<p>ನಗರದ ಮಂದಿರದಲ್ಲಿ ಭಾನುವಾರ ಜಿಲ್ಲಾ ಸರ್ಕಾರಿ ವಾಹನ ಚಾಲಕರ ಸಂಘದ ವತಿಯಿಂದ ಆಯೋಜಿಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿವೃತ್ತ ಚಾಲಕ ಜಂಬಣ್ಣ ಬಿರನಾಳ ಅವರಿಗೆ ಬೀಳ್ಕೊಡಿಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಅಧಿಕಾರಿಗಳನ್ನು ಸಮಯಕ್ಕೆ ಸರಿಯಾಗಿ ನಿಗದಿತ ಸ್ಥಳಕ್ಕೆ ತಲುಪಿಸುವ ಜವಾಬ್ದಾರಿ ಸರ್ಕಾರಿ ಇಲಾಖೆಗಳ ವಾಹನ ಚಾಲಕರ ಮೇಲಿದೆ. ಅಂತಹ ಒತ್ತಡದಲ್ಲಿಯೂ ಕೆಲಸ ಮಾಡುವಾಗ ಸಂಚಾರಿ ನಿಯಮಗಳನ್ನು ತಪ್ಪದೇ ಪಾಲಿಸಿದರೆ ಸುರಕ್ಷಿತವಾಗಿ ಇರಲು ಸಾಧ್ಯ ಎಂದು ಹೇಳಿದರು.</p>.<p>ಭೂವಿಜ್ಞಾನಿ ಕಿರಣ ಮಾತನಾಡಿ, ಕೆಲಸವನ್ನು ನಿಷ್ಠೆಯಿಂದ ಮಾಡಬೇಕು. ಇಷ್ಟಪಟ್ಟು ಕೆಲಸ ನಿರ್ವಹಿಸುವರು ಯಾವುದೇ ಸಮಸ್ಯೆಗಳನ್ನು ಸರಾಗವಾಗಿ ಎದುರಿಸುವರು. ಜಂಬಣ್ಣ ಅವರು ಕಾಳಜಿಯಿಂದ 23 ವರ್ಷಗಳ ಕಾಲ ಸರ್ಕಾರಿ ಇಲಾಖೆಗಳ ವಾಹನ ಚಾಲಕರಾಗಿ ದುಡಿದಿದ್ದಾರೆ. ಇದರಿಂದಾಗಿ ಅವರು ಇಲಾಖೆಯ ಹಿರಿಯ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಶ್ಲಾಘಿಸಿದರು.</p>.<p>ಜಿಲ್ಲಾ ಸರ್ಕಾರಿ ವಾಹನ ಚಾಲಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಂಬದಾಸ್ ವಾಟ್ಕರ್, ಉಪಾಧ್ಯಕ್ಷ ಅಯುಬ್ ಖಾನ್, ಕಾರ್ಯದರ್ಶಿ ಕಿಶಾನ್ ರಾಠೋಡ, ಹಜಮತ್ ಅಲಿ, ರಾಮು ಹಚಿಕೇರಿ, ಗಂಗಾಧರ, ರಾಯಪ್ಪ ಸಾಲಿಮನಿ, ಭೀಮಶೆಪ್ಪ ಬಾಬು, ಶೇಕ್ ಅಲಿ, ಬಾಲಕೃಷ್ಣ ಬಂಡಿಮನಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ</strong>: ಚಾಲಕರು ಒತ್ತಡ ದಲ್ಲಿ ಕೆಲಸ ಮಾಡುವುದು ಸಾಮಾನ್ಯ ವಾಗಿದ್ದು, ಸಮಯ ಪಾಲನೆಯ ಜತೆಗೆ ಚಾಲನೆಯಲ್ಲಿ ಸುರಕ್ಷತೆಗೂ ಆಧ್ಯತೆ ನೀಡಬೇಕು ಎಂದು ಆರ್ಟಿಒ ಇನ್ಸ್ಪೆಕ್ಟರ್ ವೆಂಕಟಪ್ಪ ಕಲಾಲ್ ಸಲಹೆ ಮಾಡಿದರು.</p>.<p>ನಗರದ ಮಂದಿರದಲ್ಲಿ ಭಾನುವಾರ ಜಿಲ್ಲಾ ಸರ್ಕಾರಿ ವಾಹನ ಚಾಲಕರ ಸಂಘದ ವತಿಯಿಂದ ಆಯೋಜಿಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿವೃತ್ತ ಚಾಲಕ ಜಂಬಣ್ಣ ಬಿರನಾಳ ಅವರಿಗೆ ಬೀಳ್ಕೊಡಿಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಅಧಿಕಾರಿಗಳನ್ನು ಸಮಯಕ್ಕೆ ಸರಿಯಾಗಿ ನಿಗದಿತ ಸ್ಥಳಕ್ಕೆ ತಲುಪಿಸುವ ಜವಾಬ್ದಾರಿ ಸರ್ಕಾರಿ ಇಲಾಖೆಗಳ ವಾಹನ ಚಾಲಕರ ಮೇಲಿದೆ. ಅಂತಹ ಒತ್ತಡದಲ್ಲಿಯೂ ಕೆಲಸ ಮಾಡುವಾಗ ಸಂಚಾರಿ ನಿಯಮಗಳನ್ನು ತಪ್ಪದೇ ಪಾಲಿಸಿದರೆ ಸುರಕ್ಷಿತವಾಗಿ ಇರಲು ಸಾಧ್ಯ ಎಂದು ಹೇಳಿದರು.</p>.<p>ಭೂವಿಜ್ಞಾನಿ ಕಿರಣ ಮಾತನಾಡಿ, ಕೆಲಸವನ್ನು ನಿಷ್ಠೆಯಿಂದ ಮಾಡಬೇಕು. ಇಷ್ಟಪಟ್ಟು ಕೆಲಸ ನಿರ್ವಹಿಸುವರು ಯಾವುದೇ ಸಮಸ್ಯೆಗಳನ್ನು ಸರಾಗವಾಗಿ ಎದುರಿಸುವರು. ಜಂಬಣ್ಣ ಅವರು ಕಾಳಜಿಯಿಂದ 23 ವರ್ಷಗಳ ಕಾಲ ಸರ್ಕಾರಿ ಇಲಾಖೆಗಳ ವಾಹನ ಚಾಲಕರಾಗಿ ದುಡಿದಿದ್ದಾರೆ. ಇದರಿಂದಾಗಿ ಅವರು ಇಲಾಖೆಯ ಹಿರಿಯ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಶ್ಲಾಘಿಸಿದರು.</p>.<p>ಜಿಲ್ಲಾ ಸರ್ಕಾರಿ ವಾಹನ ಚಾಲಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಂಬದಾಸ್ ವಾಟ್ಕರ್, ಉಪಾಧ್ಯಕ್ಷ ಅಯುಬ್ ಖಾನ್, ಕಾರ್ಯದರ್ಶಿ ಕಿಶಾನ್ ರಾಠೋಡ, ಹಜಮತ್ ಅಲಿ, ರಾಮು ಹಚಿಕೇರಿ, ಗಂಗಾಧರ, ರಾಯಪ್ಪ ಸಾಲಿಮನಿ, ಭೀಮಶೆಪ್ಪ ಬಾಬು, ಶೇಕ್ ಅಲಿ, ಬಾಲಕೃಷ್ಣ ಬಂಡಿಮನಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>