ಟ್ಯಾಕ್ಟರ್ ತಗುಲಿದ ಮೇಲೆ ಮಾತಿನ ಚಕಮಕಿ ನಡೆದು, ತಳ್ಳುಗಾಡಿಯ ನಾಲ್ವರು ಸೇರಿ ಚಾಲಕ ವಸಂತ ಎಂಬುವರನ್ನು ಮನಸೋ ಇಚ್ಛೆ ಥಳಿಸಿದ್ದಾರೆ. ಇದರಿಂದ ನಾಗರಾಳ ಗ್ರಾಮದ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಿಂದಾಗಿ ನಗರದಲ್ಲಿ ಒಂದು ಗಂಟೆ ವಾಹನ ಸಂಚಾರದಲ್ಲಿ ಅಡಚಣೆ ಉಂಟಾಗಿ ಸುಗಮ ಸಂಚಾರಕ್ಕಾಗಿ ಪ್ರಯಾಣಿಕರು ಪರದಾಡಿದರು.