ಕೊಳವೆಬಾವಿ ಅಥವಾ ಬಾವಿ ಮತ್ತು ಹಳ್ಳಗಳಿಂದ ನೀರಾವರಿ ವ್ಯವಸ್ಥೆ ಹೊಂದಿರುವವರು ಕಡಲೆ, ಸೂರ್ಯಕಾಂತಿ, ಸಜ್ಜೆ, ಹೈಬ್ರಿಡ್ ಜೋಳ, ಗೋವಿನ ಜೋಳ, ಅಲಸಂದಿ, ಹೆಸರು, ಉದ್ದು ಮತ್ತು ಶೇಂಗಾ ಬೆಳೆಯಬಹುದು. ತುಂತುರು ಅಥವಾ ಹನಿ ನೀರಾವರಿ ಪದ್ಧತಿಗಳನ್ನು ಅಳವಡಿಸಿಕೊಂಡು ಬೆಳೆ ಬೆಳೆದರೆ ಶೇ 40ರಿಂದ 50ರಷ್ಟು ನೀರು ಉಳಿತಾಯ ಮಾಡಲು ಸಾಧ್ಯವಾಗುತ್ತದೆ. ಇದರೊಂದಿಗೆ ಹೊಲಗಳನ್ನು ಪಾಳು ಬಿಡದೆ ಬೆಳೆ ಬೆಳೆಯುವುದರಿಂದ ಜನರಿಗೆ ಕೆಲಸ ಸಿಗುವುದು ಹಾಗೂ ರೈತರು ಗುಳೆ ಹೋಗುವುದನ್ನು ತಡೆಯಬಹುದಾಗಿದೆ. ರೈತರು ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಜ್ಞಾನ ಕೇಂದ್ರ ( 98453 64708)ವನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.