ಗುರುಮಠಕಲ್: ಪಟ್ಟಣದ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ (ಎಸ್ಸಿ) ಅವ್ಯವಸ್ಥೆಯ ಆಗರವಾಗಿದೆ, ಸಮಯಕ್ಕೆ ಮೆನು ಪ್ರಕಾರ ಊಟವಿಲ್ಲ, ಊಟಮಾಡುವ ತಟ್ಟೆಗಳಿಲ್ಲ, ಸ್ವಚ್ಛತೆಯಿಲ್ಲ, ನೀರು ಶುದ್ಧೀಕರಣ ಘಟಕ ಸರಿಯಿಲ್ಲ, ವಿದ್ಯುತ್ ಸಮಸ್ಯೆ ಸೇರಿದಂತೆ ಮೂಲ ಸೌಕರ್ಯಗಳೂ ಸರಿಯಾಗಿಲ್ಲ. ಕೂಡಲೇ ಸಮಸ್ಯೆ ಸರಿಪಡಿಸಬೇಕು ಹಾಗೂ ಬೇಜಾವಬ್ದಾರಿ ವಾರ್ಡನ್ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಬುಧವಾರ ಹಾಸ್ಟೆಲ್ ವಿದ್ಯಾರ್ಥಿಗಳು ಹಳೇ ತಹಶೀಲ್ದಾರ್ ಕಚೇರಿಯ ಎದುರುಗಡೆ ಪ್ರತಿಭಟನೆ ನಡೆಸಿದರು.